ಕಾಲಿವುಡ್ನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಮುಂದಿನ ‘ಕಾಥುವಾಕುಲ ರೆಂಡು ಕಾದಲ್’ ಚಿತ್ರದ ಶೂಟಿಂಗ್ ಅನ್ನು ಹೈದರಾಬಾದ್ನಲ್ಲಿ ಆರಂಭಿಸಿದ್ದಾರೆ. ಸದ್ಯಕ್ಕೆ ಸಮಂತಾ ಅಕ್ಕಿನೇನಿ ಹಾಗೂ ವಿಜಯ್ ಸೇತುಪತಿ ಶೂಟಿಂಗ್ನಲ್ಲಿ ಭಾಗವಹಿಸಿದ್ದಾರೆ.
ಈ ಸಿನಿಮಾವು ವಿಘ್ನೇಶ್, ವಿಜಯ್ ಸೇತುಪತಿ ಹಾಗೂ ನಯನಾತಾರಾ ಕಾಂಬಿನೇಷನ್ನ ಎರಡನೇ ಚಿತ್ರವಾಗಿದೆ. 2015ರಲ್ಲಿ ಬಿಡುಗಡೆಯಾದ ಸೇತುಪತಿ, ನಯನತಾರಾ ನಿರ್ದೇಶನದ ‘ನಾನುಂ ರೌಡಿ ದಾನ್’ ಸಿನಿಮಾದ ಮೂಲಕ ವಿಘ್ನೇಶ್ ನಿರ್ದೇಶನ ಆರಂಭಿಸಿದ್ದರು. ಈ ಸಿನಿಮಾವು ಆ ವರ್ಷದ ಬ್ಲಾಕ್ಬಸ್ಟರ್ ಸಿನಿಮಾವಾಗಿತ್ತು. ಅಲ್ಲದೇ ಕಾಲಿವುಡ್ನಲ್ಲಿ ವಿಘ್ನೇಶ್ ಬೇಡಿಕೆ ಹೆಚ್ಚುವಂತೆ ಮಾಡಿತ್ತು ಆ ಸಿನಿಮಾ.
ಅನಿರುದ್ಧ್ ರವಿಚಂದ್ರನ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು ಅನಿರುದ್ಧ್ ಹಾಗೂ ವಿಘ್ನೇಶ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದು. ಸದ್ಯ ನಯನಾತಾರಾ ರಜನಿಕಾಂತ್ ನಟನೆಯ ಅಣ್ಣಾತೆ ಸಿನಿಮಾದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಅಣ್ಣಾತೆ ಶೂಟಿಂಗ್ ಕೂಡ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಸದ್ಯದಲ್ಲೇ ನಯನಾ ವಿಘ್ನೇಶ್ ಸಿನಿಮಾದ ಶೂಟಿಂಗ್ನಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ರೊಮ್ಯಾಂಟಿಕ್ ಹಿನ್ನೆಲೆಯುಳ್ಳ ಹಾಸ್ಯಪ್ರಧಾನ ಚಿತ್ರವಾದ ಕಾಥುವಾಕುಲ ರೆಂಡು ಕಾದಲ್ ಸಿನಿಮಾಗೆಲಲಿತ್ ಕುಮಾರ್ ಅವರ 7ಸ್ಕ್ರೀನ್ ಸ್ಟುಡಿಯೋಸ್ ಹಾಗೂ ವಿಘ್ನೇಶ್ ಅವರ ಹೋಂ ಬ್ಯಾನರ್ ರೌಡಿ ಪಿಕ್ಚರ್ಸ್ ಹಣ ಹೂಡಿಕೆ ಮಾಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.