ADVERTISEMENT

ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು

ಹೊಸ ಸಿನಿಮಾ

​ಪ್ರಜಾವಾಣಿ ವಾರ್ತೆ
Published 21 ಜೂನ್ 2018, 20:13 IST
Last Updated 21 ಜೂನ್ 2018, 20:13 IST
ಸಂಹಿತಾ
ಸಂಹಿತಾ   

‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಎನ್ನುವುದು ವೀಕ್ಷಕರನ್ನು ರಂಜಿಸಲು ತೆರೆಗೆ ಬರಲು ಸಿದ್ಧವಾಗುತ್ತಿರುವ ಹೊಸ ಸಿನಿಮಾದ ಹೆಸರು. ಇದು ಕಲಾತ್ಮಕ ಚಿತ್ರ ಎಂದು ಸಿನಿತಂಡ ಹೇಳಿಕೊಂಡಿದೆ. ಈ ಚಿತ್ರದ ಹಾಡುಗಳ ಸಿ.ಡಿ. ಬಿಡುಗಡೆ ನಡೆಯಿತು. ಚಿತ್ರದ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತವರು ಅಶೋಕ್ ಕೆ. ಕಡಬ. ಬಿ. ಹನುಮಂತರಾಜು ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

‘ಈ ಚಿತ್ರದ ನಿರ್ದೇಶಕರು ತಮ್ಮದು ಕಲಾತ್ಮಕ ಚಿತ್ರ ಎಂದು ಹೇಳಿಕೊಂಡಿರುವುದು ಅವರ ದೊಡ್ಡತನ ತೋರಿಸುತ್ತದೆ. ಚಿತ್ರದ ಶೀರ್ಷಿಕೆ ಗಮನ ಸೆಳಯುವಂತೆ ಇದೆ. ಸದ್ಯದ ಸಂದರ್ಭದಲ್ಲಿ ಯಾವ ಸಿನಿಮಾಗಳೂ ನಿಲ್ಲುತ್ತಿಲ್ಲ. ವರ್ಷಕ್ಕೆ ಹೆಚ್ಚು ಚಿತ್ರಗಳು ತೆರೆಗೆ ಬರುತ್ತಿರುವುದು ಮಾರಕವಾಗಿದೆ. ಚಿತ್ರರಂಗ ಅಭಿವೃದ್ಧಿ ಆಗುತ್ತಿದ್ದರೂ ಯಶಸ್ಸು ಸಿಗುತ್ತಿಲ್ಲ’ ಎಂದರು ಸಿ.ಡಿ. ಬಿಡುಗಡೆ ಮಾಡಿ ಮಾತನಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು.

ಈ ಕಥೆಯ ನಾಯಕ ಪತ್ರಕರ್ತ. ಆತ ಒಂದು ವರದಿಯ ಕೆಲಸಕ್ಕಾಗಿ ಒಂದೂರಿಗೆ ಹೋಗುತ್ತಾನೆ. ಅಲ್ಲಿ ವಿಧವೆ ನಾಯಕಿಯನ್ನು ಭೇಟಿಯಾಗುತ್ತಾನೆ. ಆತ ಆಕೆಗೆ ಹೊಸ ಬಾಳು ಕೊಡುತ್ತಾನಾ, ಇಲ್ಲವಾ ಎಂಬುದು ಕಥೆಯ ಹಂದರ. ಅಂದಹಾಗೆ, ನಂದೀಶ್ ಅವರು ನಾಯಕನಾಗಿ, ಸಂಹಿತಾ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕಾರ್ತಿಕ್ ವೆಂಕಟೇಶ್ ಅವರು ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.