ADVERTISEMENT

ಶೂಟಿಂಗ್‌ ಸೆಟ್‌ನಿಂದ ಶ್ರುತಿ ಹೊರನಡೆದದ್ದು ಯಾಕೆ?

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 9:41 IST
Last Updated 24 ನವೆಂಬರ್ 2020, 9:41 IST
ಶ್ರುತಿ ಹಾಸನ್‌
ಶ್ರುತಿ ಹಾಸನ್‌   

ಲಾಭಂಶೂಟಿಂಗ್‌ ಸ್ಥಳದಿಂದ ನಟಿ ಶ್ರುತಿ ಹಾಸನ್‌ ದಿಢೀರನೆ ಹೊರ ಹೋಗಿದ್ದಾರೆ. ಆಂಧ್ರ ಪ್ರದೇಶದ ಧರ್ಮಪುರಿ ಮತ್ತು ಕೃಷ್ಣಗಿರಿ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೂಟಿಂಗ್‌ ನಡೆಯುತ್ತಿತ್ತು. ಅಂತೆಯೇ ಇದೂ ಕ್ಲೈಮಾಕ್ಸ್‌ ಹಂತದ ಚಿತ್ರೀಕರಣವೂ ಆಗಿತ್ತು. ವಿಜಯ್‌ ಸೇತುಪತಿ ಮತ್ತು ಶ್ರುತಿ ಹಾಸನ್‌ ಅವರನ್ನೊಳಗೊಂಡ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು ಎಂದು ಚಿತ್ರತಂಡದ ಮೂಲಗಳು ಹೇಳಿವೆ.

ಇಷ್ಟಕ್ಕೂ ಆಕೆ ಹೊರ ನಡೆದದ್ದು ಯಾಕೆ ಗೊತ್ತಾ?

ಶೂಟಿಂಗ್‌ ನಡೆಯುತ್ತಿರುವುದು ಮತ್ತು ಅದರಲ್ಲಿ ತಾನು ಮತ್ತು ವಿಜಯ್‌ ಸೇತುಪತಿ ಭಾಗವಹಿಸುತ್ತಿರುವುದು ಗೊತ್ತಾದ ತಕ್ಷಣ ಸುತ್ತಮುತ್ತಲಿನ ಹಳ್ಳಿಗಳ ಜನ ಭಾರೀ ಸಂಖ್ಯೆಯಲ್ಲಿ ಇವರನ್ನು ನೋಡಲೆಂದು ಬಂದು ಗುಂಪು ಸೇರಿದರಂತೆ. ಇದನ್ನು ನೋಡಿದ ಶ್ರುತಿ ಸೆಟ್‌ನಿಂದ ಹೊರನಡೆದೇಬಿಟ್ಟರು.

ADVERTISEMENT

ತಮ್ಮ ನಿರ್ಗಮನದ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೊಂಡ ಶ್ರುತಿ,‘ಕೋವಿಡ್‌–19ಸಾಂಕ್ರಾಮಿಕದಿಂದ ನಾವಿನ್ನೂ ಹೊರಬಂದಿಲ್ಲ. ಅದೊಂದು ದೊಡ್ಡ ಆರೋಗ್ಯದ ರಿಸ್ಕ್‌. ಕೋವಿಡ್‌ ಮಾರ್ಗಸೂಚಿ ಪಾಲಿಸದಿದ್ದರೆ ನನ್ನ ಸುರಕ್ಷತೆಗೆ ಕಾಳಜಿ ವಹಿಸಲು ಆದ್ಯತೆ ನೀಡುವ ಹಕ್ಕು ನನಗಿದೆ.ʼ ಎಂದು ಹೇಳಿಕೊಂಡಿದ್ದಾರೆ.

ಈ ಚಿತ್ರವನ್ನು ಎಸ್‌.ಪಿ. ಜನನಾಥನ್‌ ನಿರ್ದೇಶಿಸುತ್ತಿದ್ದಾರೆ.

ಇದೇ ವೇಳೆ ಶ್ರುತಿ ಅವರು ರವಿತೇಜ ಅವರ ಜತೆ ಕ್ರಾಕ್‌ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮಾತ್ರವಲ್ಲ ವೇಣು ಶ್ರೀರಾಂ ನಿರ್ದೇಶನದಲ್ಲಿ ಪವನ್‌ ಕಲ್ಯಾಣ್‌ ಅವರ ಜತೆ ವಕೀಲ್‌ ಸಾಬ್‌ (ಹಿಂದಿಯ ಪಿಂಕ್‌ ಚಿತ್ರದ ರಿಮೇಕ್‌) ಚಿತ್ರದಲ್ಲಿಯೂ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.