ADVERTISEMENT

ಹೃದಯಾಘಾತದಿಂದ ಕಿರುತೆರೆ ನಟ ಸಿದ್ಧಾಂತ್ ಸೂರ್ಯವಂಶಿ ನಿಧನ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2022, 14:35 IST
Last Updated 11 ನವೆಂಬರ್ 2022, 14:35 IST
ಸಿದ್ದಾಂತ್ ಸೂರ್ಯವಂಶಿ
ಸಿದ್ದಾಂತ್ ಸೂರ್ಯವಂಶಿ   

ಮುಂಬೈ ‘ಕುಸುಮ್’, ‘ಕಸೌತಿ ಝಿಂದಗಿ ಕಿ’ ಮತ್ತು ‘ಝಿದ್ದಿ ದಿಲ್ ಮಾನೆ ನಾ’ ನಂತಹ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಕಿರುತೆರೆ ನಟ ಸಿದ್ಧಾಂತ್ ಸೂರ್ಯವಂಶಿ (46) ಅವರು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಶುಕ್ರವಾರ ನಿಧನರಾದರು.

ಸಿದ್ದಾಂತ್‌ ಅವರನ್ನು ಮಧ್ಯಾಹ್ನ 12.30 ಕ್ಕೆ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಆಸ್ಪತ್ರೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‌

‘ಜಿಮ್‌ನಲ್ಲಿದ್ದಾಗ ಹೃದಯಾಘಾತ ಆಗಿರುವ ಸಾಧ್ಯತೆ ಇದೆ. ಅಲ್ಲಿದ್ದವರುನಟನನ್ನು ಉಳಿಸಿಕೊಳ್ಳಲು ಪ್ರಯತ್ನ ನಡೆಸಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದರು’ ಎಂದು ಆಸ್ಪತ್ರೆ ಸಿಬ್ಬಂದಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ಸಿದ್ಧಾಂತ್ ವೀರ್ ಸೂರ್ಯವಂಶಿ ಅವರ ಮತ್ತೊಂದು ಹೆಸರು ಆನಂದ್ ಸೂರ್ಯವಂಶಿ. 2001ರಲ್ಲಿ ‘ಕುಸುಮ್’ ಧಾರಾವಾಹಿಯಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿದ್ಧಾಂತ್ ನಟನೆ ಆರಂಭಿಸಿದರು. ಹಲವು ಟಿ.ವಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಅವರು, ಕೊನೆಯ ಪ್ರಮುಖ ಟಿ.ವಿ ಪಾತ್ರ ಸೋನಿ ಎಸ್‌ಎಬಿಯ ‘ಝಿದ್ದಿ ದಿಲ್ ಮಾನೆ ನಾ’.

2017 ರಲ್ಲಿ ಸೂಪರ್ ಮಾಡಲ್ ಅಲೆಸಿಯಾ ರಾವುತ್ ಅವರನ್ನು ಅವರು ವಿವಾಹವಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.