ADVERTISEMENT

ಕೊಡಗಿನಲ್ಲಿ ಸಾವಯವ ಕೃಷಿ ಮಾಡುವ ಕನಸು ಹೊಂದಿದ್ದ ಸುಶಾಂತ್

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 8:12 IST
Last Updated 2 ಆಗಸ್ಟ್ 2020, 8:12 IST
ಸುಶಾಂತ್‌
ಸುಶಾಂತ್‌   

ಸುಶಾಂತ್ ಸಿಂಗ್ ಆತ್ಮಹತ್ಯೆಯ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ರಿಯಾ ಚಕ್ರವರ್ತಿ ಹಾಗೂ ಇತರ ಐದು ಮಂದಿಯ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಸುಶಾಂತ್ ಬಾಲಿವುಡ್‌ ತ್ಯಜಿಸಿ ತಮ್ಮ ಆತ್ಮೀಯ ಗೆಳೆಯ ಮಹೇಶ್ ಶೆಟ್ಟಿ ಜೊತೆ ಸಾವಯವ ಕೃಷಿ ಮಾಡುವ ಯೋಚನೆಯಲ್ಲಿದ್ದರು ಎಂದು ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಇದಕ್ಕೆ ರಿಯಾ ಅನುಮತಿ ನೀಡಿರಲಿಲ್ಲ ಅಲ್ಲದೇ ಬಾಲಿವುಡ್‌ನಲ್ಲೇ ಉಳಿಯಲು ಒತ್ತಾಯಿಸಿದ್ದಾರೆ ಎಂದು ದೂರಿದ್ದಾರೆ.

ಎಫ್‌ಐಆರ್ ಪ್ರಕಾರ ರಿಯಾ ಸುಶಾಂತ್ ಸಿಂಗ್ ಅವರ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳಲ್ಲಿ ತೋರಿಸುವುದಾಗಿ ಹೇಳಿದ್ದಲ್ಲದ್ದೆ, ಅವರನ್ನು ಹುಚ್ಚ ಎಂದು ಸಾಬೀತು ಪಡಿಸುತ್ತೇನೆ ಎಂದು ಬೆದರಿಕೆ ಹಾಕಿದ್ದರು ಎ‌ನ್ನಲಾಗುತ್ತಿದೆ.

ADVERTISEMENT

ಕೃಷ್ಣ ಕಿಶೋರ್ ಸಿಂಗ್ ‘ನನ್ನ ಮಗ ಸಿನಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ತ್ಯಜಿಸಿ ಕರ್ನಾಟಕದ ಕೂರ್ಗ್‌ನಲ್ಲಿ ನೆಲೆಸುವ ಯೋಜನೆ ಹಾಕಿಕೊಂಡಿದ್ದ. ಅಲ್ಲದೇ ಸ್ನೇಹಿತ ಮಹೇಶ್ ಶೆಟ್ಟಿ ಜೊತೆ ಸೇರಿ ಸಾವಯವ ಕೃಷಿ ಮಾಡುವ ಯೋಚನೆಯೂ ಅವನಿಗಿತ್ತು. ಆದರೆ ರಿಯಾ ನನ್ನ ಮಗನಿಗೆ ಅವನ ಹಳೆಯ ವೈದ್ಯಕೀಯ ವರದಿಗಳನ್ನು ಮಾಧ್ಯಮಗಳಿಗೆ ಕೊಡುತ್ತೇನೆ, ನೀನು ಮಾನಸಿಕ ಅಸ್ವಸ್ಥ ಎಂದು ಸಾಬೀತುಪಡಿಸುತ್ತೇನೆ. ನಿನ್ನ ವೃತ್ತಿಜೀವನವನ್ನು ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು’ ಎಂದು ಎಫ್‌ಐಆರ್‌ ಕಾಫಿಯನ್ನು ಆರಂಭಿಸಿದ್ದಾರೆ.

ಕಳೆದ 13 ವರ್ಷಗಳ ಹಿಂದೆ ತಮ್ಮ ಕಿರುತೆರೆ ಪಯಣದ ಆರಂಭದ ದಿನಗಳಿಂದಲೂ ಮಹೇಶ್ ಶೆಟ್ಟಿ ಹಾಗೂ ಸುಶಾಂತ್ ಆತ್ಮೀಯ ಸ್ನೇಹಿತರು. ಇಬ್ಬರೂ ಸಾವಯವ ಕೃಷಿಯ ಒಲವು ಹೊಂದಿದ್ದು ಕೊಡಗಿನಲ್ಲಿ ಸೂಕ್ತ ಜಾಗಕ್ಕಾಗಿ ಜನರನ್ನು ಸಂಪರ್ಕಿಸಿದ್ದರು ಎನ್ನಲಾಗುತ್ತಿದೆ. ಕೇರಳ ಬಾರ್ಡರ್‌ನ ವಿರಾಜಪೇಟೆ–ಕುಟ್ಟಾ ಜಾಗ ನಡುವೆ ಕೃಷಿ ಭೂಮಿ ಖರೀದಿಸುವ ಯೋಜನೆ ಅವರಿಗಿತ್ತು ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.