ತಮಿಳಿನ ಖ್ಯಾತ ನಟ ಥವಾಸಿ ನಿನ್ನೆ ಸಂಜೆ ಮಧುರೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ‘ವರುಥಪದಥ ವಾಲಿಬಾರ್ ಸಂಗಂ’ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ಈ ನಟ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ನವೆಂಬರ್ 11ಕ್ಕೆ ಮಧುರೈನ ಶರವಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದರು.
ಟ್ವಿಟ್ಟರ್ ಮೂಲಕ ಈ ವಿಷಯ ತಿಳಿಸಿರುವ ಡಿಎಂಕೆ ಶಾಸಕ ಹಾಗೂ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶರವಣನ್ ಈ ನಟನ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಹಿಂದೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಥವಾಸಿ ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಯಾಚಿಸಿ ವಿಡಿಯೊ ಒಂದನ್ನು ಅಪ್ಲೋಡ್ ಮಾಡಿದ್ದರು. ಆ ವಿಡಿಯೊ ತುಂಬಾನೇ ವೈರಲ್ ಆಗಿತ್ತು. ಆಗ ಅನೇಕರು ಅವರಿಗೆ ಹಣ ಸಹಾಯ ಮಾಡಿದ್ದರು. ತಮಿಳು ನಟರಾದ ವಿಜಯ್ ಸೇತುಪತಿ, ಸಿವಕಾರ್ತಿಕೇಯನ್, ರಜನಿಕಾಂತ್, ಸಿಂಬು ಮೊದಲಾದವರು ಥವಾಸಿಗೆ ಆರ್ಥಿಕ ಸಹಾಯ ಮಾಡಿದ್ದರು. ಶಾಸಕ ಶರವಣನ್ ಅವರು ಥಾವಸಿ ಚಿಕಿತ್ಸೆಯ ವೆಚ್ಚವನ್ನು ಭರಿಸಲು ಮುಂದಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.