ADVERTISEMENT

ನಾಯಕನಾಗಿ ಚಂದನವನಕ್ಕೆ ಕಾಲಿಡಲಿರುವ ಅಭಿ ಅಲಿಯಾಸ್ ವಿಕ್ರಾಂತ್‌

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 8:22 IST
Last Updated 25 ನವೆಂಬರ್ 2020, 8:22 IST
ಅಭಿಷೇಕ್ ದಾಸ್‌ (ಚಿತ್ರ: ಅಭಿ ಅವರ ಇನ್ಸ್‌ಸ್ಟಾಗ್ರಾಂ ಖಾತೆಯಿಂದ)
ಅಭಿಷೇಕ್ ದಾಸ್‌ (ಚಿತ್ರ: ಅಭಿ ಅವರ ಇನ್ಸ್‌ಸ್ಟಾಗ್ರಾಂ ಖಾತೆಯಿಂದ)   

ಕಿರುತೆರೆ ನಟ, ಗಟ್ಟಿಮೇಳ ಧಾರಾವಾಹಿಯ ವಿಕ್ರಾಂತ್ ಪಾತ್ರಧಾರಿ ಅಭಿಷೇಕ್‌ ರಾಮ್‌ದಾಸ್‌ ಚಂದನವನದಲ್ಲಿ ನಾಯಕನಾಗಿ ಮಿಂಚಲು ಸಜ್ಜಾಗಿದ್ದಾರೆ. ‘ಅಂಬಿ ನಿಂಗ್ ವಯಸ್ಸಾಯ್ತೊ’ ಸಿನಿಮಾದ ಮೂಲಕ ಚಂದನವನ ಪ್ರವೇಶಿಸಿದ್ದ ಈ ನಟ ಈಗ ‘14 ಫೆ.’ ಸಿನಿಮಾದ ಮೂಲಕ ನಾಯಕನಾಗುತ್ತಿದ್ದಾರೆ. ಈ ಚಿತ್ರಕ್ಕೆ ಪ್ರದೀಪ್ ಕುಮಾರ್ ನಿರ್ದೇಶನವಿದೆ. ‌ಶ್ರೀ ಪೂರ್ವಿಶ ಪ್ರೊಡಕ್ಷನ್ ಸಂಸ್ಥೆಯಡಿ ಸಿನಿಮಾ ನಿರ್ಮಾಣವಾಗುತ್ತಿದೆ.

ಚಿತ್ರದ ಬಗ್ಗೆ ಮಾತನಾಡಿರುವ ಅಭಿ ‘ನಾಯಕನಾಗಿ ನಟಿಸುತ್ತಿರುವ ಬಗ್ಗೆ ಖುಷಿ ಇದೆ. ಎಲ್ಲಾ ವಿವಾದಗಳ ನಂತರ ನಾನು ನಾಯಕನಾಗಿ ಚಂದನವನಕ್ಕೆ ಕಾಲಿಡುತ್ತಿದ್ದೇನೆ. ಸಿನಿಮಾದಲ್ಲಿ ಕೃಷ್ಣಮೂರ್ತಿ ಎಂಬ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಈ ಸಿನಿಮಾವೂ ಹದಿಹರೆಯದವರ ಪ್ರೇಮ, ಬ್ರೇಕ್‌ಅಪ್‌ಗೆ ಕಾರಣಗಳನ್ನು ವಿಷಯವಾಗಿಸಿಕೊಂಡಿದೆ. ಜೊತೆಗೆ ಸಿನಿಮಾದಿಂದ ಪೋಷಕರು ಹಾಗೂ ಯುವಜನತೆಗೆ ಒಳ್ಳೆಯ ಸಂದೇಶವಿದೆ. ಈ ಚಿತ್ರದಲ್ಲಿ ನಾಲ್ಕು ಜನ ನಾಯಕಿಯರು’ ಎಂದು ಆಂಗ್ಲ ಮಾಧ್ಯಮವೊಂದರ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಡಾನ್ಸರ್ ಆಗಿ ಕಿರುತೆರೆ ಪ್ರವೇಶಿಸಿದ್ದ ಅಭಿ ‘ಗಟ್ಟಿಮೇಳ’ದ ವಿಕ್ರಾಂತ್ ಪಾತ್ರದ ಮೂಲಕ ಹೆಚ್ಚು ಪರಿಚಿತರಾಗಿದ್ದಾರೆ. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಷೋದಲ್ಲೂ ಇವರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.