ADVERTISEMENT

ರವಿಚಂದ್ರನ್ ಪುತ್ರಿಯ ಆರತಕ್ಷತೆ: ನವ ದಂಪತಿಗೆ ಶುಭ ಕೋರಿದ ರಜನಿಕಾಂತ್

​ಪ್ರಜಾವಾಣಿ ವಾರ್ತೆ
Published 28 ಮೇ 2019, 16:01 IST
Last Updated 28 ಮೇ 2019, 16:01 IST
   

ಬೆಂಗಳೂರು:ನಟ‌ ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿ ಮತ್ತು ಉದ್ಯಮಿ ಅಜಯ್ ಅವರ ಆರತಕ್ಷತೆ ಮಂಗಳವಾರ ಸಂಜೆ ನಗರದ ಅರಮನೆ ಮೈದಾನದಲ್ಲಿ ನಡೆಯಿತು.

'ಸೂಪರ್ ಸ್ಟಾರ್' ರಜನಿಕಾಂತ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ‌ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕನ್ನಡ ಚಿತ್ರರಂಗದ‌ ಕಲಾವಿದರು, ರಾಜಕಾರಣಿಗಳು ಆಗಮಿಸಿ ನವ ದಂಪತಿಗೆ ಶುಭ ಕೋರಿದರು.

ಗಾಜಿನಿಂದ ವಿಶೇಷವಾಗಿ ಅಲಂಕರಿಸಿದ್ದ ವೇದಿಕೆಗೆ ರಜನಿಕಾಂತ್ ಆಗಮಿಸಿದಾಗ ನೆರೆದಿದ್ದವರು ಕರತಾಡನ‌‌ ಮೊಳಗಿಸಿದರು. ರಜನಿಕಾಂತ್ ಗೆ ಜೈಕಾರ‌‌ ಕೂಗಿದರು.

ADVERTISEMENT
ನಟ‌ ರವಿಚಂದ್ರನ್ ಅವರ ಪುತ್ರಿ ಗೀತಾಂಜಲಿ ಮತ್ತು ಉದ್ಯಮಿ ಅಜಯ್​

ಬೆಳಿಗ್ಗೆ ಅರಿಸಿನ ಶಾಸ್ತ್ರ ನಡೆಯಿತು. ರವಿಚಂದ್ರನ್ ದಂಪತಿ ಕುಟುಂಬದ ಸದಸ್ಯರೊಟ್ಟಿಗೆ ನೃತ್ಯ ಮಾಡಿದರು. ಬುಧವಾರ ಬೆಳಿಗ್ಗೆ 9 ಗಂಟೆಗೆ ಮುಹೂರ್ತ ನಡೆಯಲಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಮಾಲಿವುಡ್ ನ ನಟ, ನಟಿಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.