ಮುಂಬೈ: 90ರ ದಶಕದಲ್ಲಿ ಕಾಶ್ಮೀರ ಕಣಿವೆಯಿಂದ ಹೊರ ಹೋದ ಕಾಶ್ಮೀರಿ ಪಂಡಿತರಕುರಿತಾದ ಶಿಕಾರ ಸಿನಿಮಾದ ಬಗ್ಗೆ ನಿರ್ದೇಶಕವಿಧು ವಿನೋದ ಚೋಪ್ರಾ ಅವರ ಇತ್ತೀಚಿನ ಹೇಳಿಕೆ ವಿವಾದಕ್ಕೆಕಾರಣವಾಗಿದೆ.
'ತ್ರಿ ಈಡಿಯೆಟ್ಸ್‘ ಬಿಡುಗಡೆಯಾದ ಮೊದಲ ದಿನ ₹ 33 ಕೋಟಿ ಗಳಿಸಿತ್ತು. ಶಿಕಾರ ಸಿನಿಮಾದ ಮೊದಲ ದಿನದ ಗಳಿಕೆ ಕೇವಲ ₹ 30 ಲಕ್ಷ. ನನ್ನ ತಾಯಿಯ ನೆನಪಿಗಾಗಿ ನಿರ್ಮಾಣ ಮಾಡಿದ ಈ ಸಿನಿಮಾದ ಮೊದಲ ದಿನದ ಸಂಪಾದನೆ ₹ 30 ಲಕ್ಷವಾಗಿತ್ತು. ನಾನು,ಕಾಶ್ಮೀರಿಪಂಡಿತರ ನೋವನ್ನು ವ್ಯಾಪಾರೀಕರಣ ಮಾಡಿದ್ದೇನೆಎಂದು ಕೆಲವರು ಹೇಳುತ್ತಾರೆ. ಇವರೆಲ್ಲಾಕತ್ತೆಗಳು'ಎಂದುವಿಧು ವಿನೋದ ಚೋಪ್ರಾ ಹೇಳಿದ್ದಾರೆ.
ಮುಂಬೈನಲ್ಲಿ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಶಿಕಾರ ಸಿನಿಮಾ ಟೀಕಿಸುವವರು ಕತ್ತೆಗಳು ಎಂದು ಹೇಳಿದ್ದಾರೆ.
ಶಿಕಾರ ಸಿನಿಮಾ ಕುರಿತಂತೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಕಾಶ್ಮೀರಿಪಂಡಿತರ ನೋವನ್ನು ವ್ಯಾಪಾರೀಕರಣ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಸಿನಿಮಾವನ್ನುವಿಧು ವಿನೋದ ಚೋಪ್ರಾ ನಿರ್ದೇಶನ ಮಾಡಿದ್ದು ಅಶೋಕ್ ಪಂಡಿತ್ ನಿರ್ಮಾಣ ಮಾಡಿದ್ದಾರೆ.
ಶಿಕಾರ ಸಿನಿಮಾಫೆಬ್ರುವರಿ 7ರಂದು ಬಿಡುಗಡೆಯಾಗಿದೆ. ಸಿನಿಮಾ ಕುರಿತಂತೆವಿಧು ವಿನೋದ ಚೋಪ್ರಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಜೊತೆ ಮುಕ್ತ ಸಂವಾದವನ್ನು ನಡೆಸಿದ್ದರು. ಸಿನಿಮಾದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಶಿಕಾರ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.