ADVERTISEMENT

’ಅಪ್ಪು’ ಸಮಾಧಿಗೆ ಪೂಜೆ ಸಲ್ಲಿಸಿದ ತಮಿಳು ನಟ ‘ದಳಪತಿ’ ವಿಜಯ್​

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2022, 12:30 IST
Last Updated 26 ಫೆಬ್ರುವರಿ 2022, 12:30 IST
 ’ಅಪ್ಪು’ ಸಮಾಧಿಗೆ ಪೂಜೆ ಸಲ್ಲಿಸಿದ ತಮಿಳು ನಟ ‘ದಳಪತಿ’ ವಿಜಯ್​
’ಅಪ್ಪು’ ಸಮಾಧಿಗೆ ಪೂಜೆ ಸಲ್ಲಿಸಿದ ತಮಿಳು ನಟ ‘ದಳಪತಿ’ ವಿಜಯ್​   

ತಮಿಳು ನಟ ‘ದಳಪತಿ’ ವಿಜಯ್​ ಶನಿವಾರ ಅಪ್ಪು ಸಮಾಧಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಪುನೀತ್ ಅಗಲಿದ ಸಮಯದಲ್ಲಿ ವಿಜಯ್ ಅಂತಿಮ ದರ್ಶನದಲ್ಲಿ ಭಾಗವಹಿಸಿರಲಿಲ್ಲ.ಇದೀಗ ಬೆಂಗಳೂರಿಗೆ ಬಂದಿರುವ ಅವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.

ಪುನೀತ್‌ ಸಮಾಧಿಗೆ ವಿಜಯ್‌ಭೇಟಿ ನೀಡಿರುವ ಚಿತ್ರಗಳು ಹಾಗೂ ವಿಡಿಯೊಗಳನ್ನು ವಿಜಯ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಭೇಟಿ ಸಂದರ್ಭದಲ್ಲಿ ವಿಜಯ್‌ ಅವರು ’ಅಪ್ಪು’ನೆನೆದು ಭಾವುಕರಾದರು.

ADVERTISEMENT

ತಮಿಳು ಚಿತ್ರರಂಗದ ಜೊತೆ ಪುನೀತ್‌ ಉತ್ತಮಬಾಂಧವ್ಯ ಹೊಂದಿದ್ದರು. ಈ ಹಿಂದೆ ನಟ ವಿಶಾಲ್‌ ಸಹ ಪುನೀತ್‌ ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದರು. ನಟರಾದ ವಿಜಯ್‌ ಸೇತುಪತಿ, ಸೂರ್ಯ, ಸಿದ್ಧಾರ್ಥ್‌ ಸಹ ಅಪ್ಪು ಸಮಾಧಿಗೆ ಭೇಟಿ ಮಾಡಿ ಪೂಜೆ ಸಲ್ಲಿಸಿದ್ದಾರೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ವಿಜಯ್‌ ನಟಿಸಿರುವ 'ಮಾಸ್ಟರ್' ಸಿನಿಮಾ ದೊಡ್ಡ ಹಿಟ್ ಆಗಿತ್ತು. ಇದೀಗ ಅವರು 'ಬೀಸ್ಟ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.