ADVERTISEMENT

ಬೆಂಗಳೂರು ಕಿರುನಾಟಕೋತ್ಸವ; ಅಂತಿಮ ಹಂತದ ಸ್ಪರ್ಧೆ ನಾಳೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 23:30 IST
Last Updated 12 ಜುಲೈ 2024, 23:30 IST
   

ಪ್ರವರ ಥಿಯೇಟರ್ ಮತ್ತು ಅಶ್ವ ಘೋಷ ಥಿಯೇಟರ್‌ ಟ್ರಸ್ಟ್ ಜಂಟಿಯಾಗಿ ಕಳೆದ ಮೂರು ವರ್ಷಗಳಿಂದ ‘ಬೆಂಗಳೂರು ಕಿರುನಾಟಕೋತ್ಸವ’ವನ್ನು ಆಯೋಜಿಸುತ್ತ ಬಂದಿದೆ.

ಮೊದಲ ಹಂತದ ಸ್ಪರ್ಧೆಯಲ್ಲಿ 15 ತಂಡಗಳು ಭಾಗವಹಿಸಿದ್ದು, ಅದರಲ್ಲಿ 7 ತಂಡಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿವೆ. ಅಂತಿಮ ಹಂತದ ಸ್ಪರ್ಧೆ ಜುಲೈ 13ರಂದು ಶನಿವಾರ ಸಂಜೆ 5.45ಕ್ಕೆ ನಡೆಯಲಿದೆ. ಬಸವೇಶ್ವರ ನಗರದಲ್ಲಿರುವ ಕೆಇಎ ಪ್ರಭಾತ್‌ ರಂಗಮಂದಿರದಲ್ಲಿ ನಡೆಯಲಿದೆ. ಈ ಬಾರಿಯ ನಿರೂಪಣಾ ವಿಷಯ ಸಮಾನತೆ.

ಪ್ರಶಸ್ತಿಗಳು ಹೀಗಿವೆ

ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ) - ಫಲಕ ಮತ್ತು ₹ 10,000

ADVERTISEMENT

ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ) - ಫಲಕ ಮತ್ತು ₹ 10,000.

‘ಆರ್ .ನಾಗೇಶ್’ ಅತ್ಯುತ್ತಮ ನಿರ್ದೇಶನ - ಫಲಕ ಮತ್ತು ₹ 2,500. ‘ಸಂಚಾರಿ ವಿಜಯ್’

ಅತ್ಯುತ್ತಮ ನಟ - ಫಲಕ ಮತ್ತು ₹ 2,500.

‘ಉಮಾಶ್ರೀ’ ಅತ್ಯುತ್ತಮ ನಟಿ - ಫಲಕ ಮತ್ತು 2,500/- ನಗದು.

ಅತ್ಯುತ್ತಮ ಕಥೆ (ಸ್ವರಚಿತ) - ಫಲಕ ಮತ್ತು ₹ 2,500.

ಅತ್ಯುತ್ತಮ ನಾಟಕ ವಿನ್ಯಾಸ - ಫಲಕ ಮತ್ತು ₹ 2,500.

ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ - ಫಲಕ ಮತ್ತು ₹2,500.

ಮಾಹಿತಿಗಾಗಿ ಸಂಪರ್ಕಿಸಿ: 9902590303

ಅಂತಿಮ ಸುತ್ತಿಗೆ ಆಯ್ಕೆಯಾದ ನಾಟಕಗಳ ತಂಡಗಳು ಹೀಗಿವೆ

ಕಲಾ ಕದಂಬ ಆರ್ಟ್‌ ಸೆಂಟರ್‌ನ ‘ಅದು’ ನಾಟಕ. ರಚನೆ ಮತ್ತು ನಿರ್ದೇಶನ ತೇಜಸ್‌ ಗೌಡ ಕೆ

ಹತ್ತು ನಾಲ್ಕು ಮೆಟ್ಟಿಲು– ಧ್ವನಿ ತಂಡ. ನಿರ್ದೇಶನ; ಮಧುಸೂದನ್‌ ಕನೇಕಲ್

ನೀವಾ ಅಥವಾ ನಾವಾ– ಹೆಜ್ಜೆ ಥಿಯೇಟರ್‌. ರಚನೆ ಮತ್ತು ನಿರ್ದೇಶನ: ಹೇಮಂತ ಕುಮಾರ್

ರಾಮ ಈಸ್‌ ಈಕ್ವೆಲ್‌ ಟು ರಾಮ– ವೀಕೆಂಡ್‌ ಥಿಯೇಟರ್‌. ಆನೇಕಲ್‌. ರಚನೆ ಮತ್ತು ನಿರ್ದೇಶನ– ಮದನ್‌ ರಂಗಭೂಮಿ

ಸಮಾವಸರ: ತಂಡ  –ಕಲಾರಧ್ಯ ರಚನೆ ಮತ್ತು ನಿರ್ದೇಶನ: ಚಂದನ್ ವಸಿಷ್ಠ

ಚವರಿ– ಸಮತಾರಂಗ. ರಚನೆ: ಟಿ.ಎಸ್‌.ಗೊರವರ. ನಿರ್ದೇಶನ: ನಾಗೇಶ ಎನ್‌. ಕೋಲಾರ್‌

ಅಲೆಮಾರಿ ಭಾರತ– ಕಾಜಾಣ ತಂಡ. ರಚನೆ ಮತ್ತು ನಿರ್ದೇಶನ– ಬೇಲೂರು ರಘುನಂದನ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.