ಪ್ರವರ ಥಿಯೇಟರ್ ಮತ್ತು ಅಶ್ವ ಘೋಷ ಥಿಯೇಟರ್ ಟ್ರಸ್ಟ್ ಜಂಟಿಯಾಗಿ ಕಳೆದ ಮೂರು ವರ್ಷಗಳಿಂದ ‘ಬೆಂಗಳೂರು ಕಿರುನಾಟಕೋತ್ಸವ’ವನ್ನು ಆಯೋಜಿಸುತ್ತ ಬಂದಿದೆ.
ಮೊದಲ ಹಂತದ ಸ್ಪರ್ಧೆಯಲ್ಲಿ 15 ತಂಡಗಳು ಭಾಗವಹಿಸಿದ್ದು, ಅದರಲ್ಲಿ 7 ತಂಡಗಳು ಅಂತಿಮ ಹಂತಕ್ಕೆ ಆಯ್ಕೆಯಾಗಿವೆ. ಅಂತಿಮ ಹಂತದ ಸ್ಪರ್ಧೆ ಜುಲೈ 13ರಂದು ಶನಿವಾರ ಸಂಜೆ 5.45ಕ್ಕೆ ನಡೆಯಲಿದೆ. ಬಸವೇಶ್ವರ ನಗರದಲ್ಲಿರುವ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ನಡೆಯಲಿದೆ. ಈ ಬಾರಿಯ ನಿರೂಪಣಾ ವಿಷಯ ಸಮಾನತೆ.
ಪ್ರಶಸ್ತಿಗಳು ಹೀಗಿವೆ
ಅತ್ಯುತ್ತಮ ನಾಟಕ (ತೀರ್ಪುಗಾರರ ಆಯ್ಕೆ) - ಫಲಕ ಮತ್ತು ₹ 10,000
ಅತ್ಯುತ್ತಮ ನಾಟಕ (ಪ್ರೇಕ್ಷಕರ ಆಯ್ಕೆ) - ಫಲಕ ಮತ್ತು ₹ 10,000.
‘ಆರ್ .ನಾಗೇಶ್’ ಅತ್ಯುತ್ತಮ ನಿರ್ದೇಶನ - ಫಲಕ ಮತ್ತು ₹ 2,500. ‘ಸಂಚಾರಿ ವಿಜಯ್’
ಅತ್ಯುತ್ತಮ ನಟ - ಫಲಕ ಮತ್ತು ₹ 2,500.
‘ಉಮಾಶ್ರೀ’ ಅತ್ಯುತ್ತಮ ನಟಿ - ಫಲಕ ಮತ್ತು 2,500/- ನಗದು.
ಅತ್ಯುತ್ತಮ ಕಥೆ (ಸ್ವರಚಿತ) - ಫಲಕ ಮತ್ತು ₹ 2,500.
ಅತ್ಯುತ್ತಮ ನಾಟಕ ವಿನ್ಯಾಸ - ಫಲಕ ಮತ್ತು ₹ 2,500.
ಅತ್ಯುತ್ತಮ ಭಿತ್ತಿಪತ್ರ ವಿನ್ಯಾಸ - ಫಲಕ ಮತ್ತು ₹2,500.
ಮಾಹಿತಿಗಾಗಿ ಸಂಪರ್ಕಿಸಿ: 9902590303
ಅಂತಿಮ ಸುತ್ತಿಗೆ ಆಯ್ಕೆಯಾದ ನಾಟಕಗಳ ತಂಡಗಳು ಹೀಗಿವೆ
ಕಲಾ ಕದಂಬ ಆರ್ಟ್ ಸೆಂಟರ್ನ ‘ಅದು’ ನಾಟಕ. ರಚನೆ ಮತ್ತು ನಿರ್ದೇಶನ ತೇಜಸ್ ಗೌಡ ಕೆ
ಹತ್ತು ನಾಲ್ಕು ಮೆಟ್ಟಿಲು– ಧ್ವನಿ ತಂಡ. ನಿರ್ದೇಶನ; ಮಧುಸೂದನ್ ಕನೇಕಲ್
ನೀವಾ ಅಥವಾ ನಾವಾ– ಹೆಜ್ಜೆ ಥಿಯೇಟರ್. ರಚನೆ ಮತ್ತು ನಿರ್ದೇಶನ: ಹೇಮಂತ ಕುಮಾರ್
ರಾಮ ಈಸ್ ಈಕ್ವೆಲ್ ಟು ರಾಮ– ವೀಕೆಂಡ್ ಥಿಯೇಟರ್. ಆನೇಕಲ್. ರಚನೆ ಮತ್ತು ನಿರ್ದೇಶನ– ಮದನ್ ರಂಗಭೂಮಿ
ಸಮಾವಸರ: ತಂಡ –ಕಲಾರಧ್ಯ ರಚನೆ ಮತ್ತು ನಿರ್ದೇಶನ: ಚಂದನ್ ವಸಿಷ್ಠ
ಚವರಿ– ಸಮತಾರಂಗ. ರಚನೆ: ಟಿ.ಎಸ್.ಗೊರವರ. ನಿರ್ದೇಶನ: ನಾಗೇಶ ಎನ್. ಕೋಲಾರ್
ಅಲೆಮಾರಿ ಭಾರತ– ಕಾಜಾಣ ತಂಡ. ರಚನೆ ಮತ್ತು ನಿರ್ದೇಶನ– ಬೇಲೂರು ರಘುನಂದನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.