ಬಸವರಾಜ ಎಮ್ಮಿ ಅವರು ರಚಿಸಿ, ನಿರ್ದೇಶಿಸಿರುವ ‘ಮಾನಸ ಪುತ್ರ’ ನಾಟಕದ ಪ್ರದರ್ಶನವನ್ನು ಏಪ್ರಿಲ್ 13ರಂದು ಸಂಜೆ 7 ಗಂಟೆಗೆ ಮಲ್ಲೇಶ್ವರದ ಸೇವಾಸದನದಲ್ಲಿ ಆಯೋಜಿಸಲಾಗಿದೆ.
ಬೀಚಿ ಅವರ ‘ನನ್ನ ಭಯಾಗ್ರಫಿ’ ಮತ್ತು ಇತರೆ ಅನುಭವಗಳನ್ನು ಆಧಾರವಾಗಿ ಇಟ್ಟುಕೊಂಡು ಈ ನಾಟಕ ರೂಪುಗೊಂಡಿದೆ.
ಬೀಚಿ ಅವರ ಜೀವನದ ಕಥೆಯನ್ನು ಹಾಗೂ ಅವರ ಇತರೆ ಸಾಹಿತ್ಯವನ್ನೂ ಇದು ಒಳಗೊಂಡಿದೆ. ನೋಡುಗರಿಗೆ ಸಾಹಿತಿಯ ಬದುಕಿನ ಒಳನೋಟ ಕೊಡಲಿದೆ. ಕಲಾವಿಲಾಸಿ ತಂಡ ಅಭಿನಯಿಸಲಿದೆ.
ಸ್ಥಳ–ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ ಅವಧಿ–80ನಿಮಿಷ
ಪ್ರವೇಶ ದರ: ₹100 ಮಾಹಿತಿಗೆ:96635 23904
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.