ADVERTISEMENT

ನೀನು ಗಿಲ್ಲಿಗೆ ಬಕೆಟ್ ಹಿಡಿ: ಅಶ್ವಿನಿ ಗೌಡ–ಕಾವ್ಯ ಮಧ್ಯೆ ನಡೀತು ದೊಡ್ಡ ಗಲಾಟೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2025, 11:00 IST
Last Updated 23 ಅಕ್ಟೋಬರ್ 2025, 11:00 IST
<div class="paragraphs"><p>ಅಶ್ವಿನಿ ಗೌಡ, ಕಾವ್ಯ</p></div>

ಅಶ್ವಿನಿ ಗೌಡ, ಕಾವ್ಯ

   

ಚಿತ್ರ: ಇನ್‌ಸ್ಟಾಗ್ರಾಮ್

ಕನ್ನಡದ ಬಿಗ್‌ಬಾಸ್‌ 12ನೇ ಆವೃತ್ತಿ ಆರಂಭಗೊಂಡು 24ನೇ ದಿನಕ್ಕೆ ಕಾಲಿಟ್ಟಿದೆ. ಬಿಗ್‌ಬಾಸ್‌ ಶುರುವಾಗಿ ಎರಡನೇ ದಿನಕ್ಕೆ ಕಾವ್ಯ ಹಾಗೂ ಅಶ್ವಿನಿ ಗೌಡ ಮಧ್ಯೆ ಮಾತಿನ ಸಮರ ನಡೆದಿತ್ತು. ಇದೀಗ ಮಾತಿಗೆ ಮಾತು ಬೆಳೆದು ಮತ್ತೆ ಬಿಗ್‌ಬಾಸ್‌ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಕಾವ್ಯ ಮಧ್ಯೆ ದೊಡ್ಡ ಗಲಾಟೆಯೇ ನಡೆದಿದೆ.

ADVERTISEMENT

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಹಂಚಿಕೊಂಡಿದೆ. ಅದರಲ್ಲಿ ಅಶ್ವಿನಿ ಗೌಡ ಅವರು ಸಹ ಸ್ಪರ್ಧಿಗಳ ಜೊತೆಗೆ ಕೆಲಸದ ವಿಚಾರವಾಗಿ ಚರ್ಚೆ ಮಾಡುತ್ತಾ ಇರುತ್ತಾರೆ. ಆಗ ಅಶ್ವಿನಿ ಗೌಡ ಗಿಲ್ಲಿ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಇದೇ ವೇಳೆ ಕಾವ್ಯ ನೀವು ಗಿಲ್ಲಿಗೆ ಹೇಳಿದೀರಾ ಎಂದು ಮಧ್ಯೆ ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಅಶ್ವಿನಿ ಗೌಡ, ಕಾವ್ಯಗೆ ನೀನು ಏಕೆ ಮಧ್ಯ ಬಾಯಿ ಹಾಕ್ತೀಯಾ? ನೀನು ಗಿಲ್ಲಿಗೆ ಬಕೆಟ್ ಹಿಡಿ ಎಂದು ಹೇಳಿದ್ದಾರೆ. ಇದಕ್ಕೆ ಕರಳಿದ ಕಾವ್ಯ ಅವರು ಅಶ್ವಿನಿ ಗೌಡ ಜೊತೆಗೆ ಜಗಳಕ್ಕೆ ಇಳಿದಿದ್ದಾರೆ.

ಇನ್ನು, ಬಿಗ್‌ಬಾಸ್ ಶುರುವಾದ ಎರಡನೇ ದಿನಕ್ಕೆ ಕಾವ್ಯ ಹಾಗೂ ಅಶ್ವಿನಿ ಗೌಡ ನಡುವೆ ಗಲಾಟೆ ನಡೆದಿತ್ತು. 'ಕಾವ್ಯ ಮತ್ತು ಗಿಲ್ಲಿ ನಾವು ಏನಾದರೂ ಹೇಳಿದಾಗ ನೀವು ತುಂಬಾ ವೈಯಕ್ತಿಕವಾಗಿ ತೆಗೆದುಕೊಳ್ಳುತ್ತೀರಿ. ನೀವು ಗೌರವಯುತವಾಗಿ ನಡೆದುಕೊಂಡಾಗ ಮಾತ್ರ ನಮಗೂ ಒಂದು ಗೌರವ. ಮರ್ಯಾದೆ ಕೊಟ್ಟು ಮರ್ಯಾದೆ ತಗೋಬೇಕು ಎಂದು ಅಶ್ವಿನಿ ಗೌಡ ಎಚ್ಚರಿಕೆ ಕೊಟ್ಟಿದ್ದರು. ಆಗ ಗಿಲ್ಲಿ ನಟ, ಬೆಲೆ ಇರೋದಕ್ಕೆ ಹೀಗೆ ಮಾತಾಡುತ್ತಿದ್ದೇನೆ. ಇಲ್ಲವಾದರೆ, ನಾನು ಹೋಗೇ ಬಾರೇ ಎಂದು ಮಾತನಾಡಿಸುತ್ತಿದ್ದೆ ಎಂದು ಅಶ್ವಿನಿ ಅವರಿಗೆ ಹೇಳಿದ್ದರು. ಇದೀಗ ಮತ್ತೆ ಅಶ್ವಿನಿ ಗೌಡ ಅವರು ಗಿಲ್ಲಿ ನಟ ಹಾಗೂ ಕಾವ್ಯ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.