ಡಿಸೆಂಬರ್ 6, 1946: ಸಂವಿಧಾನ ರಚನಾ ಸಭೆಯ ರಚನೆ
ಡಿಸೆಂಬರ್ 9, 1946: ಸಂವಿಧಾನ ರಚನಾ ಸಭೆಯ ಮೊದಲ ಅಧಿವೇಶನ
ಡಿಸೆಂಬರ್ 11, 1946: ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ರಾಜೇಂದ್ರ ಪ್ರಸಾದ್ ನೇಮಕ. ನಂತರದಲ್ಲಿ ಉಪಾಧ್ಯಕ್ಷರಾಗಿ ಎಚ್.ಸಿ.ಮುಖರ್ಜಿ, ವಿ.ಟಿ.ಕೃಷ್ಣಮಾಚಾರಿ, ಸಂವಿಧಾನಾತ್ಮಕ ಸಲಹೆಗಾರರಾಗಿ ಬಿ.ಎನ್.ರಾವ್ ನೇಮಕ
ಡಿಸೆಂಬರ್ 13, 1946: ಜವಾಹರಲಾಲ್ ನೆಹರೂ ಅವರಿಂದ ಸಂವಿಧಾನದ ಧ್ಯೇಯಗಳ ನಿರ್ಣಯ ಮಂಡನೆ; ಮುಂದೆ ಅದನ್ನು ಸಂವಿಧಾನದ ಪೀಠಿಕೆಯಲ್ಲಿ ಅಳವಡಿಸಲಾಯಿತು
ಜನವರಿ 22, 1947: ಸಂವಿಧಾನ ರಚನಾ ಸಭೆಯಿಂದ ಧ್ಯೇಯಗಳ ನಿರ್ಣಯ ಅಂಗೀಕಾರ
ಸಂವಿಧಾನ ರಚನಾ ಸಭೆಯ ಅಡಿಯಲ್ಲಿ 22 ಸಮಿತಿಗಳು, 5 ಉಪಸಮಿತಿಗಳ ರಚನೆ
ಆಗಸ್ಟ್ 29, 1947: ಡಾ.ಬಿ.ಆರ್.ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ಕರಡು ರಚನಾ ಸಮಿತಿ ರಚನೆ
ಪ್ರತಿ ಸಮಿತಿಗೂ ನಿರ್ದಿಷ್ಟವಾದ ಜವಾಬ್ದಾರಿ; ನಂತರ ಅದರ ಬಗ್ಗೆ ಸಂವಿಧಾನ ರಚನಾ ಸಭೆಯ ಎಲ್ಲ ಸದಸ್ಯರಿಂದ ಚರ್ಚೆ
ನವೆಂಬರ್ 4, 1948: ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಸಂವಿಧಾನ ರಚನಾ ಸಭೆಯಲ್ಲಿ ಅಂತಿಮ ಕರಡು ಮಂಡನೆ
ನವೆಂಬರ್, 26, 1949: ಸಂವಿಧಾನದ ಕರಡಿಗೆ ಅಂಗೀಕಾರ; ಸಂವಿಧಾನ ರಚನಾ ಸಭೆಯ ಸದಸ್ಯರು ಮತ್ತು ಅಧ್ಯಕ್ಷರ ಸಹಿ
ಜನವರಿ 26, 1950: ಸಂವಿಧಾನ ಜಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.