ADVERTISEMENT

ಉಪಚುನಾವಣೆ ಫಲಿತಾಂಶ: 105ರಿಂದ 117ಕ್ಕೇರಿದ ಬಿಜೆಪಿಯ ಸಂಖ್ಯಾಬಲ

ಅತೃಪ್ತ ಶಾಸಕರ ರಾಜೀನಾಮೆ, ಶಾಸಕ ಸ್ಥಾನದಿಂದ ಅನರ್ಹತೆ ಸೇರಿದಂತೆ ಹಲವು ರಾಜಕೀಯ ಬೆಳವಣಿಗೆ ಲೆಕ್ಕಾಚಾರಗಳ ಪರಿಣಾಮವಾಗಿ ರಾಜ್ಯದ 15 ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಫಲಿತಾಂಶ ಇನ್ನೇನು ಹೊರಬೀಳಲಿದೆ. ಆಡಳಿತಾರೂಢ ಬಿಜೆಪಿ ಹಾಗೂ ಉಪ ಚುನಾವಣಾ ಕಣದಲ್ಲಿರುವ 13 ಅನರ್ಹ ಶಾಸಕರ ಪಾಲಿಗೆ ಇದು ನಿರ್ಣಾಯಕ ದಿನ. ಫಲಿತಾಂಶದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್ಸ್‌ ಇಲ್ಲಿ ಲಭ್ಯ.

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 14:52 IST
Last Updated 9 ಡಿಸೆಂಬರ್ 2019, 14:52 IST

15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಸ್ಥಾನಗಳಿಸಿದ ಬಿಜೆಪಿ

15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಫಲಿತಾಂಶದ ಅನುಸಾರ, ಬಿಜೆಪಿ 12 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಕಾಂಗ್ರೆಸ್ 2 ಸ್ಥಾನಗಳನ್ನಷ್ಟೇ ಉಳಿಸಿಕೊಳ್ಳಲು ಶಕ್ತವಾಗಿದ್ದರೆ, ಜೆಡಿಎಸ್ ತನ್ನ ಭದ್ರಕೋಟೆಯಲ್ಲೇ ಸೋತು ಸುಣ್ಣವಾಗಿದೆ. ಫಲಿತಾಂಶದ ಪರಿಣಾಮ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದ ಉಳಿವಿನ ಬಗ್ಗೆ ಇದ್ದ ಆತಂಕ ದೂರವಾಗಿದೆ. ಇದರೊಂದಿಗೆ ಬಿಜೆಪಿಯ ಸಂಖ್ಯಾಬಲವು 105ರಿಂದ 117ಕ್ಕೇರಿದೆ. ಪ್ರಸ್ತುತ 222 ಸದಸ್ಯಬಲವಿರುವ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾಗಿರುವುದು 112 ಮಾತ್ರ.

ಗೋಕಾಕ: ಸಹೋದರರ ಸ್ಪರ್ಧೆಯಲ್ಲಿ ರಮೇಶ ಜಾರಕಿಹೊಳಿಗೆ ಜಯ

ಕೆಟ್ಟ ಸರ್ಕಾರ ತೆಗೆದ ಆತ್ಮ ತೃಪ್ತಿ ಇದೆ: ಡಾ.ಕೆ.ಸುಧಾಕರ್

ನನಗೆ ರಾಜೀನಾಮೆ ಅಥವಾ ಅಧಿಕಾರ ಬಿಟ್ಟುಕೊಡಲು ಯಾವುದೇ ನೋವಿಲ್ಲ: ದಿನೇಶ್ ಗುಂಡೂರಾವ್

ಸ್ಥಳೀಯ ಸಂಸ್ಥೆಗಳು ಚುನಾವಣೆ, ಸಮ್ಮಿಶ್ರ ಸರ್ಕಾರ, ಶಾಸಕರ ರಾಜೀನಾಮೆ, ಅವರ ವಿರುದ್ಧ ಸ್ಪೀಕರ್ ಬಳಿ, ಸುಪ್ರೀಂಕೋರ್ಟ್‌ನಲ್ಲಿ ಹೋರಾಟದಲ್ಲಿ ನಾನು ಸಕ್ರಿಯನಾಗಿದ್ದೆ. ಕೆಪಿಸಿಸಿ ಅಧ್ಯಕ್ಷನಾಗಿ ನಾನು ಕೆಲಸ ಮಾಡಿರುವ ರೀತಿ ನನಗೆ ತೃಪ್ತಿಯಿದೆ. ರಾಜ್ಯದಲ್ಲಿ ಪಕ್ಷದ ಹಿನ್ನಡೆಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಪಕ್ಷದ ನಿಷ್ಠ ನಾನು. ನನಗೆ ರಾಜೀನಾಮೆ ಅಥವಾ ಅಧಿಕಾರ ಬಿಟ್ಟುಕೊಡಲು ಯಾವುದೇ ನೋವಿಲ್ಲ. 
ನನ್ನ ಶಕ್ತಿಮೀರಿ ನಾನು ಕೆಲಸ ಮಾಡಿದ್ದೇನೆ. ಫಲಿತಾಂಶ ನಮ್ಮ ಪರವಾಗಿ ಬಂದಿಲ್ಲ. ಹೀಗಾಗಿ ರಾಜೀನಾಮೆ ಕೊಡುತ್ತಿದ್ದೇನೆ. ಆತ್ಮಾವಲೋಕನಕ್ಕೆ ಸಮಯವಿದೆ. ಮುಂದಿನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೂ ನಾವು ಹೋರಾಟ ನಡೆಸುತ್ತೇವೆ.

 ಮುಂದೆ ಯಾರೇ ಪಕ್ಷದ ಅಧ್ಯಕ್ಷರಾದರೂ ನಾನು ಸಹಕಾರ ನೀಡುತ್ತೇನೆ. ಈ ದೇಶಕ್ಕೆ ಕಾಂಗ್ರೆಸ್ ಅಗತ್ಯವಿದೆ. ಕಾಂಗ್ರೆಸ್ ಕಟ್ಟುವುದು ನನ್ನ ಜವಾಬ್ದಾರಿ. ಅದಕ್ಕೆ ನನ್ನ ಸಹಕಾರ ಸದಾ ಇದ್ದೇ ಇರುತ್ತೆ. ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನೆ ಮಾಡುತ್ತೇನೆ

ADVERTISEMENT

ನಮ್ಮ ಪಕ್ಷದ ವಿರುದ್ಧ ಹೋದವರನ್ನು ಸ್ಪೀಕರ್‌ ಅನರ್ಹಗೊಳಿಸಬೇಕು: ದಿನೇಶ್ ಗುಂಡೂರಾವ್

ನಮ್ಮ ಪಕ್ಷದ ವಿರುದ್ಧ ಹೋದವರನ್ನು ಸ್ಪೀಕರ್‌ ಅನರ್ಹಗೊಳಿಸಬೇಕು. ನ್ಯಾಯಾಲಯದಲ್ಲಿಯೂ ಅವರ ವಿರುದ್ಧ ಹೋರಾಟ ನಡೆಸಿದ್ದವು. ಈ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷನಾಗಿ ನನಗೆ ಎಐಸಿಸಿ ಅವರು ಮುಕ್ತ ಅವಕಾಶ ಕೊಟ್ಟಿದ್ದರು. ನನ್ನ ನೈತಿಕ ಜವಾಬ್ದಾರಿ ಮತ್ತು ರಾಜಕೀಯ ಜವಾಬ್ದಾರಿ ಬಹಳ ಇದೆ. ನಾನು ನಿನ್ನೆಯೆ ನಮ್ಮ ನಾಯಕರ ಜೊತೆಗೆ ಮಾತನಾಡಿದ್ದೆ. ಕಳೆದ ಜುಲೈನಲ್ಲಿ ರಾಹುಲ್ ಗಾಂಧಿಯವರು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ನಾನು ಹಲವು ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸಿಕೊಂಡು ಬಂದೆ. ಎಲ್ಲರ ಸಹಕಾರ ನನಗೆ ಸಿಕ್ಕಿದೆ.

ಚುನಾವಣೆ ಮುಗಿದ ಮೇಲೆ ರಾಜ್ಯದ ಹಿತವೇ ನಮಗೆ ಮುಖ್ಯ: ದಿನೇಶ್ ಗುಂಡೂರಾವ್


ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪೇ ಅಂತಿಮ. ಜನತಾ ನ್ಯಾಯಾಲಯದ ತೀರ್ಪು ಅಂತಿಮ. ಅದನ್ನು ಗೌರವಿಸುತ್ತೇವೆ. ಅದನ್ನು ತಪ್ಪಾಗಿ ಗ್ರಹಿಸಲು ಹೋಗುವುದಿಲ್ಲ. ನಮಗೆ ಸಹಜವಾಗಿಯೇ ನೋವಾಗಿದೆ. ನಮ್ಮ ಅಪೇಕ್ಷೆ ಬೇರೆಯೇ ಇತ್ತು. ಆದರೆ ಫಲಿತಾಂಶ ನೋಡಿದಾಗ ಜನರ ಅಪೇಕ್ಷೆ ಬೇರೆಯಾಗಿರುವುದು ತಿಳಿಯಿತು. ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳಿಗೆ ಅಭಿನಂದನೆ. ಹುಣಸೂರಿನಿಂದ ಮಂಜುನಾಥ್, ಶಿವಾಜಿನಗರದಿಂದ ರಿಜ್ವಾನ್ ಅರ್ಷದ್‌, ಪಕ್ಷೇತರರಾಗಿ ಶರತ್ ಬಚ್ಚೇಗೌಡ ಗೆದ್ದಿದ್ದಾರೆ. ಅವರಿಗೆ ಅಭಿನಂದಿಸುತ್ತೇನೆ.

ಚುನಾವಣೆ ವೇಳೆ ಹಲವು ವಿಷಯಗಳನ್ನು ಪ್ರಸ್ತಾಪ ಮಾಡ್ತೀವಿ. ಚುನಾವಣೆ ಮುಗಿದ ಮೇಲೆ ರಾಜ್ಯದ ಹಿತವೇ ನಮಗೆ ಮುಖ್ಯ.

ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಪತ್ರಿಕಾಗೋಷ್ಠಿ ಆರಂಭ

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯರಾದ ಖರ್ಗೆ ಮತ್ತು ಇತರ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಶಕ್ತಿಮೀರಿ ಕೆಲಸ ಮಾಡಿದ್ದಾರೆ. ಅನರ್ಹರಿಗೆ ಜನರು ಪಾಠ ಕಲಿಸುತ್ತಾರೆ. ಅವರಿಗೆ ಒಂದು ಪಾಠ ಕಲಿಸಬೇಕು ಎಂದೇ ಎಲ್ಲರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. 

ಯಶವಂತಪುರ: ಎಸ್‌.ಟಿ. ಸೋಮಶೇಖರ್‌ಗೆ ಫಲ ನೀಡಿದ 'ಗೌಡ' ಭಿತ್ತಿ‍ಪತ್ರ

ಹೊಸಕೋಟೆ: ಶತಕೋಟಿ ಒಡೆಯ ಎಂಟಿಬಿಗೆ ಸೋಲು; ಶರತ್ ಬಚ್ಚೇಗೌಡಗೆ ಜಯ

ಕೆ.ಆರ್.ಪುರ ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜು ಗೆಲುವು

ರಾಣೆಬೆನ್ನೂರು ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ ಗೆಲುವು

ಕಲಬುರ್ಗಿ: ಬಿಜೆಪಿ ಕಾರ್ಯಕರ್ತೆಯರ ವಿಜಯೋತ್ಸವ

ಶಿವಾಜಿನಗರ: 13,521 ಮತಗಳ ಅಂತರದಿಂದ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಗೆಲುವು

ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳಿಸಿದ್ದೇನೆ: ಸಿದ್ದರಾಮಯ್ಯ

ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಳಿಸಿದ್ದೇನೆ. ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಈಗ ಕಳುಹಿಸುತ್ತೇನೆ: ಸಿದ್ದರಾಮಯ್ಯ

ಪಕ್ಷದ ಹಿತ ದೃಷ್ಟಿಯಿಂದ ಶಾಸಕಾಂಗ ಪಕ್ಷದ ನಾಯಕತ್ವಕ್ಕೆ ರಾಜೀನಾಮೆ: ಸಿದ್ದರಾಮಯ್ಯ

ನಾನು ಪ್ರಜಾಪ್ರಭುತ್ವದಲ್ಲಿ ಬಲವಾದ ನಂಬಿಕೆ ಇಟ್ಟುಕೊಂಡಿದ್ದೇನೆ: ಸಿದ್ದರಾಮಯ್ಯ

ನಾನು ಪ್ರಜಾಪ್ರಭುತ್ವದಲ್ಲಿ ಬಲವಾದ ನಂಬಿಕೆ ಇಟ್ಟುಕೊಂಡಿದ್ದೇನೆ. 15 ಕ್ಷೇತ್ರಗಳಲ್ಲಿ ಮತದಾರರು ಕೊಟ್ಟಿರುವ ತೀರ್ಪನ್ನು ನಾನು ಗೌರವಿಸುತ್ತೇನೆ. ಮತದಾರರು ಪ್ರಜಾಪ್ರಭುತ್ವದ ಉಳಿವಿನ ದೃಷ್ಟಿಯಿಂದ ಮತ ಚಲಾಯಿಸುತ್ತಾರೆ. ಪಕ್ಷಾಂತರಿಗಳಿಗೆ ಪಾಠ ಕಲಿಸುತ್ತಾರೆ ಅಂದುಕೊಂಡಿದ್ದೆ. ನನ್ನ ನಿರೀಕ್ಷೆ ಹುಸಿಯಾಗಿದೆ.

ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿ; ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ ಉಪಸ್ಥಿತಿ

ಬೆಳಗಾವಿಯ ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಗೆಲುವು

ಕೆಆರ್ ಪೇಟೆ | ಜೆಡಿಎಸ್ ಭದ್ರಕೋಟೆ ಭಗ್ನ; ಮಂಡ್ಯದಲ್ಲಿ ಮೊದಲ ಸಲ ಅರಳಿದ ಕಮಲ

ಮಹಾಲಕ್ಷ್ಮಿ ಲೇಔಟ್: ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ಗೆಲುವು ಸಾಧಿಸಿದ್ದಾರೆ

ವಿಜಯನಗರ: ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಗೆಲುವು

ಯಶವಂತಪುರ: ಬಿಜೆಪಿ ಅಭ್ಯರ್ಥಿ ಎಸ್.ಟಿ. ಸೋಮಶೇಖರ್ ಗೆಲುವು

ಗೆಲುವಿನ ಸಂತಸ ಹಂಚಿಕೊಂಡ ಬಿ.ಸಿ.ಪಾಟೀಲ ಅವರ ಮಗಳು ಸೃಷ್ಟಿ ಪಾಟೀಲ ಮತ್ತು ಪತ್ನಿ ವನಜಾ ಪಾಟೀಲ

ಹಿರೇಕೆರೂರು ಕ್ಷೇತ್ರ: ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಅವರು ಮುಖಂಡ ಯು.ಬಿ. ಬಣಕಾರ ಅವರೊಂದಿಗೆ ಗೆಲುವಿನ ಚಿಹ್ನೆ ತೋರಿಸಿದ್ದು ಹೀಗೆ

ಹಾವೇರಿಯಲ್ಲಿ ಬಿಜೆಪಿ ಮಹಿಳಾ ಘಟಕದ ವತಿಯಿಂದ ಸಂಭ್ರಮಾಚರಣೆ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮತ್ತು ಹಿರೇಕೆರೂರುನಲ್ಲಿ ಬಿಜೆಪಿ ಸಂಭ್ರಮಾಚರಣೆ

62646 ಮತಗಳ ಮುನ್ನಡೆಯಿಂದ ಭೈರತಿ ಬಸವರಾಜ್ ಹ್ಯಾಟ್ರಿಕ್ ಗೆಲುವು

ಸೋಲಿನ ಮುನ್ಸೂಚನೆ ಸಿಗುತ್ತಿದ್ದಂತೆ ಹಾವೇರಿ ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದ ಕಾಂಗ್ರೆಸ್‌ ಅಭ್ಯರ್ಥಿ ಬನ್ನಿಕೋಡ

ನಾನು ಮಾಡಿದ್ದು ಸರಿಯೋ ತಪ್ಪೋ ಜನರು ಈಗ ತೀರ್ಮಾನ ನೀಡಿದ್ದಾರೆ: ಕೆ.ಗೋಪಾಲಯ್ಯ 

 ಮೊದಲ‌ ಹಂತದಲ್ಲೇ ನಮಗೆ ಸಚಿವರಾಗಿ ಸ್ಥಾನ ನೀಡಿ ಸೇವೆ ಮಾಡುವ ಅವಕಾಶವನ್ನು ಬಿಎಸ್ ವೈ ನೀಡುವ ನಂಬಿಕೆ ಇದೆ. ನಾನು ಮಾಡಿದ್ದು ಸರಿಯೋ ತಪ್ಪೋ ಜನರು ಈಗ ತೀರ್ಮಾನ ನೀಡಿದ್ದಾರೆ. ಅದಕ್ಕೆ‌ ನಾನೂ ಸೇರಿದಂತೆ ವಿರೋಧ ಪಕ್ಷದವರೂ ತಲೆ‌ಬಾಗಬೇಕು. ಕೇಂದ್ರ ಮತ್ತು ರಾಜ್ಯ ದಲ್ಲಿ ಒಂದೇ ಸರಕಾರ ಇರಬೇಕು, ನಾವೆಲ್ಲ ಒಗ್ಗಟ್ಟಾಗಿರಬೇಕೆಂದು ಕೆಲಸ‌ ಮಾಡಿದ್ದೆವು  ಎಂದು ಮಹಾಲಕ್ಷ್ಮಿ ಲೇ ಔಟ್‌ನಲ್ಲಿ  ಗೆದ್ದ ಅಭ್ಯರ್ಥಿ ಕೆ.ಗೋಪಾಲಯ್ಯ ಹೇಳಿದ್ದಾರೆ.

ರಾಣೆಬೆನ್ನೂರು ಕ್ಷೇತ್ರದಲ್ಲಿ ಜಯ ಗಳಿಸಿದ ಬಿಜೆಪಿ ಅಭ್ಯರ್ಥಿ ಅರುಣಕುಮಾರ್‌ ಪೂಜಾರ ಅವರನ್ನು ಕಾರ್ಯಕರ್ತರು ಹೊತ್ತುಕೊಂಡು ಸಂಭ್ರಮ ಆಚರಿಸಿದರು.

ಪಕ್ಷೇತರ  ಅಭ್ಯರ್ಥಿ ಶರತ್ ಬಚ್ಚೇಗೌಡರ ಪತ್ನಿ ಪ್ರತಿಭಾ ಅವರಿಂದ ಹೊಸಕೋಟೆಯಲ್ಲಿ ಸಿಹಿ‌ ಹಂಚಿ ಸಂಭ್ರಮ

ಹೊಸಕೋಟೆ 21: ಸುತ್ತಿನ ಬಳಿಕ ಶರತ್ ಬಚ್ಚೇಗೌಡ 11460 ಮತಗಳಿಂದ ಗೆಲುವು

ಶರತ್‌ ಬಚ್ಚೇಗೌಡ ಬಗ್ಗೆ ಏನೂ ಹೇಳಲ್ಲ: ಶೋಭಾ ಕರಂದ್ಲಾಜೆ

ನವದೆಹಲಿ: ಹೊಸಕೋಟೆ ಕ್ಷೇತ್ರದಲ್ಲಿ ನಮ್ಮದೇ ಪಕ್ಷದ ಕಾರ್ಯಕರ್ತ ಶರತ್ ಬಚ್ಚೇಗೌಡ ಅವರು ಅಧಿಕೃತ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರುದ್ಧ ಜಯಗಳಿಸಿದ್ದಾರೆ. ಈ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಕರ್ನಾಟಕ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ದಾಖಲಿಸಿದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,, ಬಚ್ಚೇಗೌಡರು ಸಂಸತ್ ಸದಸ್ಯರಾಗಿದ್ದಾರೆ. ಅವರ ನಡೆಯನ್ನು ಕೇಂದ್ರ ಸಮಿತಿ ನಾಯಕರೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.

ಇದು ರಾಜ್ಯದ ಜನರ ಗೆಲುವು. ರಾಜ್ಯದಲ್ಲಿ ಈ ಹಿಂದೆ ಅಸ್ಥಿರ ಸರ್ಕಾರ ಇತ್ತು. ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರು. ಮೂರು ತಿಂಗಳಿನಿಂದ ನಮ್ಮ ಸರ್ಕಾರ ಇದೆ. ನಮ್ಮ ಆಡಳಿತವನ್ನು ಜನರು ಮೆಚ್ಚಿದ್ದಾರೆ ಎನ್ನುವುದಕ್ಕೆ ಚುನಾವಣೆ ಫಲಿತಾಂಶವೇ ಸಾಕ್ಷಿ ಎಂದು ವಿಶ್ಲೇಷಿಸಿದರು.

ಉಳಿದ ಅವಧಿಗೆ ಸ್ತಿರ ಸರ್ಕಾರ ನೀಡಿ ಎಂದು ಜನರು ಸೂಚಿಸಿದ್ದಾರೆ. ಜನರ ಇಚ್ಛೆಯನ್ನು ನಾವು ಪೂರ್ಣಗೊಳಿಸುತ್ತೇವೆ. ಮಂಡ್ಯದಲ್ಲಿ ಗೆಲುವು ಸಾಧಿಸಿದ್ದು ನನಗೆ ಖುಷಿಕೊಟ್ಟಿದೆ. ನಾರಾಯಣಗೌಡರಿಗೆ ಕೆ.ಆರ್.ಪೇಟೆಯಲ್ಲಿ ಅವರದೇ ಆದ ಶಕ್ತಿಯಿದೆ. ನಾಮಪತ್ರ ಸಲ್ಲಿಕೆ ದಿವನೇ ಅವರ ಮೇಲೆ ಚಪ್ಪಲಿ ತೂರಾಟ ನಡೆಯಿತು. ಜನರು ಈ ಅವಮಾನ ಸಹಿಸಲಿಲ್ಲ. ಅವರನ್ನು ಗೆಲ್ಲಿಸಿದರು ಎಂದು ಅಭಿಪ್ರಾಯಪಟ್ಟರು.

ಸ್ಪೀಕರ್ ರಮೇಶ್‌ ಕುಮಾರ್ ಅವರ ಆದೇಶವನ್ನು ಮಾತ್ರವಲ್ಲ, ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳನ್ನೂ ಜನರು ಅನರ್ಹಗೊಳಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ವ್ಯಂಗ್ಯವೇ ಅವರನ್ನು ಸೋಲಿಸಿದೆ. ಅವರ ಆರೋಪಗಳಿಗೆ ತಕ್ಕ ಪ್ರತ್ಯುತ್ತರ ಸಿಕ್ಕಿದೆ ಎಂದು ನುಡಿದರು.

ಹೊಸಕೋಟೆ: 17 ಸುತ್ತಿನಲ್ಲಿ‌ ಶರತ್ ಬಚ್ಚೆಗೌಡ 10,003 ಮತಗಳ ಅಂತರದಲ್ಲಿ ಮುನ್ನಡೆ

ಕೆ.ಆರ್. ಪುರಂ ಕ್ಷೇತ್ರದ ಹದಿನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಭೈರತಿ ಬಸವರಾಜ್ 70,080, ನಾರಾಯಣಮೂರ್ತಿ 30,943, ಕೃಷ್ಣಮೂರ್ತಿ 870 ಮತಗಳು

ಹೊಸಕೋಟೆ: 15ನೇ ಸುತ್ತಿನ ಮತ ಎಣಿಕೆ ಮುಕ್ತಾಯ, 8291 ಮತಗಳ‌‌ ಮುನ್ನಡೆ ಕಾಯ್ದುಕೊಂಡ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ

ಮಹಾಲಕ್ಷ್ಮಿ ಲೇಔಟ್ - 17ನೇ ಸುತ್ತಿನಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ 53,975 ಮತಗಳ ಮುನ್ನಡೆ

ಬಿಜೆಪಿಗೆ ಒಲಿದ ರಾಣೆಬೆನ್ನೂರು

ರಾಣೆಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿಯ ಅರುಣಕುಮಾರಗೆ 26,346 ಮತಗಳ ಅಂತರದ ಗೆಲುವು.

ಚಿಕ್ಕಬಳ್ಳಾಪುರದಲ್ಲಿ ಖಾತೆ ತೆರೆದ ಕಮಲ

ಚಿಕ್ಕಬಳ್ಳಾಪುರದಲ್ಲಿ ಖಾತೆ ತೆರೆದ ಕಮಲ. ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರು 34,802 ಮತಗಳ ಗೆಲುವು ಸಾಧಿಸಿದರು.

ಮೂರೂವರೆ ವರ್ಷ ಸ್ಥಿರ ಸರ್ಕಾರವೇ ಲಕ್ಷ್ಯ: ಯಡಿಯೂರಪ್ಪ

ಬೆಂಗಳೂರು: ಕೊಟ್ಟ ಮಾತಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಉಪಚುನಾವಣೆಯಲ್ಲಿ ಗೆದ್ದ ಎಲ್ಲ ಶಾಸಕರಿಗೂ ಸಚಿವ ಸ್ಥಾನ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುನರುಚ್ಚರಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿಯ ಸಾಧನೆಗೆ ತೃಪ್ತಿ ವ್ಯಕ್ತಪಡಿಸಿದ ಅವರು, ಇನ್ನೆರೆಡು ದಿನಗಳಲ್ಲಿ ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ಪಕ್ಷದ ವರಿಷ್ಠರಿಗೂ ಈ ಸಾಧನೆ ತೃಪ್ತಿ ತಂದಿದೆ ಎಂದರು.

ಉಪಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ 12ರಲ್ಲಿ ಸುಮಾರು 30 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದೇವೆ. ಸಚಿವ ಸಂಪುಟ ಸಹೋದ್ಯೋಗಿಗಳು ಹಗಲು ರಾತ್ರಿ ಕೆಲಸ ಮಾಡಿದ್ದಾರೆ. ಈಗ ನಮ್ಮ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ ಎಂದು ಹೇಳಿದರು.

ಇನ್ನು ಉಳಿದ ಮೂರೂವರೆ ವರ್ಷಗಳ ಅವಧಿಗೆ ಸ್ಥಿರ ಸರ್ಕಾರ ಕೊಡುವುದು ನಮ್ಮ ಧ್ಯೇಯ. ಇನ್ನಾದರೂ ಪ್ರತಿಪಕ್ಷಗಳು ನಮಗೆ ಸಂಪೂರ್ಣ ಸಹಕಾರ ಕೊಡಬೇಕು ಎಂದು ಕಾಂಗ್ರೆಸ್, ಜೆಡೆಇಸ್ ನಾಯಕರನ್ನು ವಿನಂತಿಸಿದರು.

ಜೆಡಿಎಸ್ ಮತ್ತು ಕಾಂಗ್ರೆಸ್ ನಡೆಯ ಕುರಿತು ನಾನು ಯಾವುದೇ ಟೀಕೆ ಮಾಡಲು ಇಷ್ಟಪಡುವುದಿಲ್ಲ. ನಮ್ಮೆಲ್ಲ ಸಚಿವರ ಸಹಕಾರದಿಂದ ಒಳ್ಳೆಯ ಆಡಳಿತ ಕೊಡುತ್ತೇನೆ. ಮುಂದಿನ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ಲೋಕಸಭೆ ಚುನಾವಣೆಯಲ್ಲಿಯೂ ಸಾಕಷ್ಟು ಕ್ಷೇತ್ರಗಳನ್ನು ಗೆದ್ದು ಮೋದಿ–ಅಮಿತ್ ಶಾ ಅವರಿಗೆ ಕೊಡುಗೆ ಕೊಡುತ್ತೇವೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ನಮ್ಮ ಪಕ್ಷ ಜಯ ಗಳಿಸಿದ್ದು ಖುಷಿ ಕೊಟ್ಟಿದೆ. ನಮ್ಮ ಸಂಘಟನೆ ಪ್ರಬಲವಾಗಿ ದುಡಿದಿದ್ದರಿಂದ ಈ ಗೆಲುವು ಸಾಧ್ಯವಾಯಿತು. ಎಲ್ಲ ಕಾರ್ಯಕರ್ತರಿಗೆ, ರಾಜ್ಯ ಘಟಕದ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ನುಡಿದರು.

ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಎಂಟಿಬಿ ನಾಗರಾಜ್ ಸೋಲಿನ ಕುರಿತು ಯಡಿಯೂರಪ್ಪ ಪ್ರತಿಕ್ರಿಯಿಸಲಿಲ್ಲ. ಚುನಾವಣೆಯಲ್ಲಿ ಸೋತವರನ್ನು ವಿಧಾನಪರಿಷತ್‌ಗೆ ಆಯ್ಕೆ ಮಾಡಿ ಮಂತ್ರಿ ಮಾಡುವ ವಿಚಾರದ ಬಗ್ಗೆ ‘ಈಗಲೇ ನಾನು ಏನೂ ಹೇಳುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಬೆಳಗಾವಿ: ಮತ ಎಣಿಕೆ ಕೇಂದ್ರದತ್ತ ಬಾರದ ಅಭ್ಯರ್ಥಿಗಳು

ಬೆಳಗಾವಿ: ಫಲಿತಾಂಶ ಸ್ಪಷ್ಟವಾಗಿದ್ದರೂ ಮತ ಎಣಿಕೆ ಕೇಂದ್ರದತ್ತ ಅಭ್ಯರ್ಥಿಗಳು ಬರಲಿಲ್ಲ.

ಬಿಜೆಪಿಯ ರಮೇಶ ಜಾರಕಿಹೊಳಿ (ಗೋಕಾಕ), ಮಹೇಶ ಕುಮಠಳ್ಳಿ (ಅಥಣಿ) ಹಾಗೂ ಶ್ರೀಮಂತ ಪಾಟೀಲ (ಕಾಗವಾಡ) ಆರ್ಪಿಡಿ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಈವರೆಗೂ ಬಂದಿಲ್ಲ.

ಅಥಣಿ ಕ್ಷೇತ್ರದ ಕೆಜೆಪಿಯ ವಿನಾಯಕ ಮಠಪತಿ ಬಂದಿದ್ದು ಬಿಟ್ಟರೆ ಬೇರಾವ ಅಭ್ಯರ್ಥಿಗಳೂ ಎಣಿಕೆ ಕೇಂದ್ರದತ್ತ ಸುಳಿಯಲಿಲ್ಲ. ಬೆಳಗಾವಿ ಉತ್ತರ ಕ್ಷೇತ್ರದ ಅನಿಲ ಬೆನಕೆ ಹಾಗೂ ದಕ್ಷಿಣ ಕ್ಷೇತ್ರದ ಅಭಯ ಪಾಟೀಲ ಬಂದಿದ್ದರು.

ಎಣಿಕೆ ಕೇಂದ್ರದ ಹೊರಗೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಏಜೆಂಟರಾಗಿ ಬಂದಿದ್ದ ಕಾಂಗ್ರೆಸ್ ಬೆಂಬಲಿಗರು ಬೇಸರದಿಂದಲೇ ಕೇಂದ್ರದಿಂದ ಹೊರ ನಡೆದರು.

ಯಡಿಯೂರಪ್ಪಗೆ ಬಿಜೆಪಿ ವರಿಷ್ಠರಿಂದ ಅಭಿನಂದನೆ

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ಮುಂಚೂಣಿ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಅಥಣಿ: ಬಿಜೆಪಿಯ ಮಹೇಶ ಕುಮಠಳ್ಳಿ ಗೆಲುವು

ಅಥಣಿ ಕ್ಷೇತ್ರದಲ್ಲಿ ಬಿಜೆಪಿಯ ಮಹೇಶ ಕುಮಠಳ್ಳಿ ಗೆಲುವು. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿ.

41 ಸಾವಿರ ಮತಗಳ ಅಂತರದಿಂದ ಮಹೇಶ ಕುಮಠಳ್ಳಿ ಗೆಲುವು ಸಾಧಿಸಿದ್ದಾರೆ. 19 ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದೆ. ಮೊದಲ ಸುತ್ತಿನಿಂದಲೂ ಮಹೇಶ ಮುನ್ನಡೆ ಸಾಧಿಸಿದ್ದರು. ಅಧಿಕೃತ ಘೋಷಣೆ ಆಗಬೇಕಿದೆ.

ಜನಮತ, ಯಾರಿಗೆ ಹಿತ

ಉಪಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಹೊರಬಿದ್ದ ಸಿವೋಟರ್‌ ಮತ್ತು ವಿವಿಧ ಸುದ್ದಿವಾಹಿನಿಗಳ ಮತಗಟ್ಟೆ ಸಮೀಕ್ಷೆ ಹಾಗೂ ಪಕ್ಷದ ಆಂತರಿಕ ಲೆಕ್ಕಾಚಾರ ಗಮನಿಸಿದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ‘12ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಫಲಿತಾಂಶದ ದಿನ ಸಿಹಿಸುದ್ದಿ ಕೊಡುತ್ತೇವೆ, ಮತ್ತೆ ಕಾಂಗ್ರೆಸ್ ಸರ್ಕಾರ ಬರಲಿದೆ’ ಎಂಬ ಭರವಸೆಯ ಮಾತನಾಡಿದ್ದ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಚುನಾವಣಾ ಫಲಿತಾಂಶ ಈ ಎಲ್ಲ ಲೆಕ್ಕಾಚಾರ, ತರ್ಕಗಳಿಗೆ ಉತ್ತರ ನೀಡಲಿದೆ.

ಅನರ್ಹತೆಯ ಆರೋಪಕ್ಕೆ ಜನರು ಕೊಟ್ಟ ಅರ್ಹತೆಯ ತೀರ್ಪು: ಬಿ.ಸಿ.ಪಾಟೀಲ

ಹಾವೇರಿ: ಅನರ್ಹತೆಯ ಆರೋಪಕ್ಕೆ ಜನತಾ ನ್ಯಾಯಾಲಯದಲ್ಲಿ ಅರ್ಹತೆಯ ತೀರ್ಪು ಸಿಕ್ಕಿದೆ ಎಂದು ಹಿರೇಕೆರೂರು ಕ್ಷೇತ್ರದ ಶಾಸಕ ಬಿ.ಸಿ.ಪಾಟೀಲ ಹೇಳಿದರು.

ರಾಣೆಬೆನ್ನೂರು ಮತ್ತು ಹಿರೇಕೆರೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಹಾವೇರಿ ಜಿಲ್ಲೆ ಕಾಂಗ್ರೆಸ್ ಮುಕ್ತವಾದಂತಾಯಿತು ಎಂದು ವಿವರಿಸಿದರು.

ಇನ್ನು ರಾಜ್ಯ ಮತ್ತು ದೇಶ ಕೂಡ ಕಾಂಗ್ರೆಸ್ ಮುಕ್ತವಾಗಲಿದೆ. ಬಣಕಾರ ಮತ್ತು ನಾನು ಒಂದಾದ ಪರಿಣಾಮ ಗೆಲುವು ಸುಲಭವಾಯಿತು ಎಂದು ಬಿ.ಸಿ.ಪಾಟೀಲ ಅಭಿಪ್ರಾಯಪಟ್ಟರು.

ಶಿವಾಜಿನಗರ: ರಿಜ್ವಾನ್ ಅರ್ಷದ್ ಗೆಲ್ಲುವ ನಿರೀಕ್ಷೆ

ಶಿವಾಜಿನಗರ ಇನ್ನು ನಾಲ್ಕು ಸುತ್ತಿನ ಮತ ಎಣಿಕೆ ಮಾತ್ರ ಬಾಕಿ, ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಬಹುತೇಕ ಗೆಲ್ಲುವ ನಿರೀಕ್ಷೆ.

ಸರ್ಕಾರ ಸೇಫ್: ಬಿಜೆಪಿ ವಿಜಯೋತ್ಸವ

ಮಂಗಳೂರಿನ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿ ಬಳಿ ಕಾರ್ಯಕರ್ತರು ವಿಜಯೋತ್ಸವದ ಸಂಭ್ರಮ ಆಚರಿಸಿದರು

ಗೋಕಾಕ ಕ್ಷೇತ್ರ: ರಮೇಶ ಜಾರಕಿಹೊಳಿ ಮುನ್ನಡೆ

ಬೆಳಗಾವಿ ಜಿಲ್ಲೆ ಗೋಕಾಕ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ (ಬಿಜೆಪಿ) 37,565, ಲಖನ್ ಜಾರಕಿಹೊಳಿ (ಕಾಂಗ್ರೆಸ್) 25,366, ಅಶೋಕ ಪೂಜಾರಿ (ಜೆಡಿಎಸ್) 13,304 ಮತಗಳಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್: ಗೋಪಾಲಯ್ಯ ಮುನ್ನಡೆ

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಬಿಜೆಪಿಯ ಗೋಪಾಲಯ್ಯ ಗೆಲುವು. 12ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಬಿಜೆಪಿ ಕೆ.ಗೋಪಾಲಯ್ಯ -52073, ಕಾಂಗ್ರೆಸ್‌ನ ಎಂ ಶಿವರಾಜ್ -18699, ಜೆಡಿಎಸ್‌ನ ಡಾ.ಗಿರೀಶ್ ಕೆ.ನಾಶಿ -16017 ಮತ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ  33375 ಮತಗಳ ಮುನ್ನಡೆ ದಾಖಲಿಸಿದ್ದಾರೆ.

ಯಶವಂತಪುರದಲ್ಲಿ ಬಿಜೆಪಿಗೆ ಮುನ್ನಡೆ

ಯಶವಂತಪುರ 15ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಬಿಜೆಪಿಯ ಎಸ್.ಟಿ.ಸೋಮಶೇಖರ್ 99,067 ಮತ ಪಡೆದಿದ್ದಾರೆ. ಜೆಡಿಎಸ್‌ನ ಜವರಾಯಿಗೌಡ - 83,959, ಕಾಂಗ್ರೆಸ್‌ನ ಪಿ.ನಾಗರಾಜ್ - 9193 ಮತ ಪಡೆದಿದ್ದರೆ ಒಟ್ಟು 1,979 ನೋಟಾ ಮತಗಳು ಚಲಾವಣೆಯಾಗಿವೆ. 15,108 ಮತಗಳ ಅಂತರದಿಂದ  ಸೋಮಶೇಖರ್ ಮುನ್ನಡೆ ದಾಖಲಿಸಿದ್ದಾರೆ.

ಕಾಗವಾಡ: ಬಿಜೆಪಿಯ ಶ್ರೀಮಂತ ಪಾಟೀಲ ಗೆಲುವು

ಕಾಗವಾಡ ಕ್ಷೇತ್ರದಲ್ಲಿ ಕೊನೆಯ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್‌ನ ರಾಜು ಕಾಗೆ ವಿರುದ್ಧ ಬಿಜೆಪಿಯ ಶ್ರೀಮಂತ ಪಾಟೀಲ ಭರ್ಜರಿ ಗೆಲುವು ದಾಖಲಿಸಿದ್ದಾರೆ.

ಶ್ರೀಮಂತ ಪಾಟೀಲ ಒಟ್ಟು 76557 ಮತಗಳನ್ನು ಪಡೆದರೆ, ಕಾಂಗ್ರೆಸ್‌ನ ರಾಜು ಕಾಗೆ ಒಟ್ಟು 58547 ಮತ ಪಡೆದರು. 18,020 ಮತಗಳ ಅಂತರದಿಂದ ಬಿಜೆಪಿಯ ಶ್ರೀಮಂತ ಪಾಟೀಲ ಗೆಲುವು ಸಾಧಿಸಿದರು.

ಹುಣಸೂರು ಕ್ಷೇತ್ರ: ವಿಶ್ವನಾಥ್‌ಗೆ ಮುಖಭಂಗ

ಹುಣಸೂರು: ಕಾಂಗ್ರೆಸ್ ನ ಎಚ್.ಪಿ.ಮಂಜುನಾಥ್ ಗೆಲುವು ಖಚಿತ, ‘ಹಳ್ಳಿಹಕ್ಕಿ’ ವಿಶ್ವನಾಥ್‌ಗೆ ಮುಖಭಂಗ.

ಎಚ್.ಪಿ.ಮಂಜುನಾಥ್ (ಕಾಂಗ್ರೆಸ್)- 90513, ಎಚ್.ವಿಶ್ವನಾಥ್ (ಬಿಜೆಪಿ)- 51331,
ದೇವರಹಳ್ಳಿ ಸೋಮಶೇಖರ್ (ಜೆಡಿಎಸ್)- 31986 ಮತಗಳನ್ನು ಗಳಿಸಿದ್ದಾರೆ.

ಕಾಂಗ್ರೆಸ್‌ನ ಮಂಜುನಾಥ್ ಗೆ 39,182 ಮತಗಳ ಮುನ್ನಡೆ ಸಿಕ್ಕಿದೆ. 19 ಸುತ್ತುಗಳ ಎಣಿಕೆ ಪೂರ್ಣಗೊಂಡಿದ್ದು, ಕೊನೆಯ ಒಂದು ಸುತ್ತಿನ ಎಣಿಕೆ ಬಾಕಿಯಿದೆ.

ಕೆ.ಆರ್.ಪೇಟೆಯಲ್ಲಿ ನಾರಾಯಣಗೌಡ ಗೆಲುವು

ಕೆ.ಆರ್.ಪೇಟೆ ಕ್ಷೇತ್ರದಲ್ಲಿ 9,728 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆಲುವು.

ನೈತಿಕತೆ ಇದ್ದರೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ: ಆರ್.ಅಶೋಕ್

ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೋದಲ್ಲಿ ಬಂದಲ್ಲೆಲ್ಲಾ ಬಿಜೆಪಿ ಸರ್ಕಾರ ಬಿದ್ದು ಹೋಗುತ್ತೆ ಆಂತ ಹೇಳ್ತಿದ್ರು. ಈಗ ಈ ಸರ್ಕಾರ ಸುಭದ್ರವಾಗಿರಬೇಕು ಎಂದು ಜನರೇ ಆಶೀರ್ವದಿಸಿದ್ದಾರೆ. ನೈತಿಕತೆ ಇದ್ದರೆ ಸಿದ್ದರಾಮಯ್ಯ ತಮ್ಮ ವಿರೋಧ ಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕಂದಾಯ ಸಚಿವ ಆರ್.ಆಶೋಕ್ ಆಗ್ರಹಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಬಹುತೇಕ ಕಡೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರನ್ನು ಸ್ಥಾನದಿಂದ ಇಳಿಸುವ ನಡೆಗಳು ಕಾಂಗ್ರೆಸ್‌ನಲ್ಲಿ ನಡೆಯಲಿವೆ ಎಂದು ಭವಿಷ್ಯ ನುಡಿದರು. 

ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿ ವಿರೋಧಿಸಿ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿದ ಅಂದಿನ ಸ್ಪೀಕರ್ ರಮೇಶ್‌ ಕುಮಾರ್ ಅವರ ನಡೆ ಅಕ್ರಮ, ಜನ ವಿರೋಧಿ ಮತ್ತು ಕಾನೂನು ವಿರೋಧಿ ಎನ್ನುವುದನ್ನು ಜನರು ಈಗ ತಮ್ಮ ತೀರ್ಪು ನೀಡಿ ಘೋಷಿಸಿದ್ದಾರೆ ಎಂದು ವಿಶ್ಲೇಷಿಸಿದರು.

ಯಡಿಯೂರಪ್ಪ ಸರ್ಕಾರ ಸೇಫ್

ಹಿಂದೆ ಠೇವಣಿಯೂ ಬರ್ತಿರ್ಲಿಲ್ಲ, ಈಗ ಗೆಲುವು ನಮ್ಮದಾಗಿದೆ: ವಿಜಯೇಂದ್ರ

ಕೆ.ಆರ್.ಪೇಟೆ (ಮಂಡ್ಯ ಜಿಲ್ಲೆ): ಕ್ಷೇತ್ರದ ಮತದಾರರು ಪಕ್ಷಾತೀತವಾಗಿ, ಜಾತ್ಯತೀತವಾಗಿ ನಾರಾಯಣಗೌಡರನ್ನು ಬೆಂಬಲಿಸಿದ್ದಾರೆ. ನಮಗೆ ಸಂತೋಷವಾಗಿದೆ. ನಾವು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ಮತ್ತು ಕೆ.ಆರ್.ಪೇಟೆ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದ ವಿಜಯೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಕೆ.ಆರ್‌.ಪೇಟೆ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ಗೆಲುವಿನ ನಂತರ ಮಾತನಾಡಿದ ಅವರು, ಇದು ನನ್ನೊಬ್ಬನ ಸಾಧನೆ ಅಲ್ಲ. ನಮ್ಮೆಲ್ಲರ ಸಾಮೂಹಿಕ ನಾಯಕತ್ವ ಮತ್ತು ಒಗ್ಗಟ್ಟಿನಿಂದ ಗೆಲುವು ಸಾಧ್ಯವಾಯಿತು. ನಾರಾಯಣಗೌಡರನ್ನು ಬೆಂಬಲಿಸಿದ ಜನರಿಗೆ ನಾವು ಕೃತಜ್ಞತೆ ಅರ್ಪಿಸುತ್ತೇವೆ ಎಂದು

ಕೆ.ಆರ್.ಪೇಟೆ ತಾಲ್ಲೂಕಿನ ಮಗ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾನೆ. ಅದನ್ನು ಜನರು ಒಪ್ಪಿಕೊಂಡಿದ್ದಾರೆ. ಅಭಿವೃದ್ಧಿ ಒಂದನ್ನೇ ಮತದಾರರು ಅಪೇಕ್ಷಿಸುವುದು. ಅದರ ಮುಂದೆ ಯಾವುದೇ ಜಾತಿ ಬರುವುದಿಲ್ಲ. ನಾವು 10 ಸಾವಿರ ಲೀಡ್ ತಗೊಂಡಿದ್ದೇವೆ. ಈ ಹಿಂದೆ ಠೇವಣಿ ಸಹ ಬರುತ್ತಿರಲಿಲ್ಲ. ನಮಗೆ ಖುಷಿಯಾಗಿದೆ ಎಂದು ವಿಜಯೇಂದ್ರ ಹೇಳಿದರು.

ಎಲ್ಲ ಜಾತಿ, ಸಮಾಜಗಳಿಗೂ ನಾವು ಅಭಿವೃದ್ಧಿಯ ವಿಚಾರವನ್ನು ಮನಗಾಣಿಸಿದೆವು. ಇದೊಂದು ಬಾರಿ ಪಕ್ಷ–ಜಾತಿ ಮರೆತು ಬಿಜೆಪಿ ಬೆಂಬಲಿಸಲು ಮನವಿ ಮಾಡಿದ್ದೆವು. ಅದರಂತೆ ನಮಗೆ ಜನರು ಬೆಂಬಲಿಸಿದ್ದಾರೆ. ನಾವು ಕ್ಷೇತ್ರವನ್ನೇ ದೃಷ್ಟಿಯಲ್ಲಿರಿಸಿಕೊಂಡು ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದೆವು ಎಂದು ವಿಜಯೇಂದ್ರ ನೆನಪಿಸಿಕೊಂಡರು.

ಹುಣಸೂರು: ಗೆಲುವಿನತ್ತ ಮಂಜುನಾಥ್ ದಾಪುಗಾಲು

ಹುಣಸೂರು: ತೀವ್ರ ಕುತೂಹಲ ಕೆರಳಿಸಿದ್ದ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಎಚ್.ಪಿ.ಮಂಜುನಾಥ್ ಗೆಲುವಿನತ್ತ ದಾಪುಗಾಲಿಟ್ಟಿದ್ದಾರೆ.

15 ನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು ಮಂಜುನಾಥ್ ಅವರು 27,826 ಮತಗಳ ಮುನ್ನಡೆಯಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾರಣಕರ್ತರಲ್ಲಿ ಒಬ್ಬರಾಗಿದ್ದ ಎಚ್.ವಿಶ್ವನಾಥ್ ಸೋಲಿನ ಹಾದಿ ಹಿಡಿದಿದ್ದಾರೆ.

ಮಂಜುನಾಥ್ ಒಟ್ಟು 69,859 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿದ್ದ ವಿಶ್ವನಾಥ್ 42,033 ಮತಗಳನ್ನು ಪಡೆದಿದ್ದಾರೆ.

ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ 25,636 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಇಲ್ಲಿ ಒಟ್ಟು 1,83,728 ಮತಗಳು ಚಲಾವಣೆಯಾಗಿದ್ದವು. ಇದುವರೆಗೆ 1,41,724 ಮತಗಳ ಎಣಿಕೆ ಪೂರ್ಣಗೊಂಡಿದೆ.

ಹಿರೇಕೆರೂರು ಬಿಜೆಪಿಯ ಬಿ.ಸಿ.ಪಾಟೀಲ್ ಗೆಲುವು

ಹಿರೇಕೆರೂರು ಬಿಜೆಪಿಯ ಬಿ.ಸಿ.ಪಾಟೀಲ್ ಗೆಲುವು

ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‌ನಲ್ಲಿ ಗೋಪಾಲಯ್ಯ ಮತ್ತು ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮಹೇಶ್‌ ಕುಮಠಳ್ಳಿ ಗೆಲುವು.

ಕೆ.ಆರ್‌.ಪುರಂ: ಬಿಜೆಪಿಯ ಭೈರತಿ ಬಸವರಾಜ್ ಮುನ್ನಡೆ

ಕೆ.ಆರ್.ಪುರಂ‌ ಕ್ಷೇತ್ರದಲ್ಲಿ 6ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. ಬಿಜೆಪಿಯ ಭೈರತಿ ಬಸವರಾಜ್- 32,023, ಕಾಂಗ್ರೆಸ್‌ನ ನಾರಾಯಣಸ್ವಾಮಿ- 12,494, ಜೆಡಿಎಸ್‌ನ ಕೃಷ್ಣಮೂರ್ತಿ- 360 ಮತಗಳಿಸಿವೆ. ಬಿಜೆಪಿ 19,529 ಮತಗಳ ಮುನ್ನಡೆ ಸಾಧಿಸಿದೆ.

ಕೆ.ಆರ್.ಪೇಟೆ: ಬಿಜೆಪಿ ಅಭ್ಯರ್ಥಿ ನಾರಾಯಣಗೌಡ 3,176 ಮತಗಳ ಮುನ್ನಡೆ

ಕೆ.ಆರ್.ಪೇಟೆ 10ನೇ ಸುತ್ತಿನ ಮತ ಎಣಿಕೆ. ಬಿಜೆಪಿಯ ನಾರಾಯಣಗೌಡ- 34,598, ಜೆಡಿಎಸ್‌ನ ಬಿ.ಎಲ್.ದೇವರಾಜು- 31,422, ಕಾಂಗ್ರೆಸ್ ಕೆ.ಬಿ.ಚಂದ್ರಶೇಖರ್- 23,148. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ 3,176 ಮತಗಳ ಮುನ್ನಡೆ

ಶಿವಾಜಿನಗರದಲ್ಲಿ ಕಾಂಗ್ರೆಸ್‌ 7550 ಮತಗಳ ಮೇಲುಗೈ

ಶಿವಾಜಿನಗರ ಕ್ಷೇತ್ರದಲ್ಲಿ 5ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್‌ನ ರಿಜ್ವಾನ್ ಅವರಿಗೆ ಬಿಜೆಪಿಯ ಎಂ.ಶರವಣ ವಿರುದ್ಧ 7550 ಮತಗಳ ಅಂತರ.

ಯಶವಂತಪುರದಲ್ಲಿ ಟ್ವಿಸ್ಟ್‌: ಜವರಾಯಿಗೌಡ ಅಂತರ ಕುಸಿತ

ಯಶವಂತಪುರ ಕ್ಷೇತ್ರದ 10ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ಜೆಡಿಎಸ್‌ನ ಜವರಾಯಿಗೌಡ - 61,716, ಬಿಜೆಪಿಯ ಎಸ್.ಟಿ.ಸೋಮಶೇಖರ್ - 61,620, ಕಾಂಗ್ರೆಸ್‌ನ ಪಿ.ನಾಗರಾಜ್ - 4976 ಮತ ಗಳಿಸಿದ್ದಾರೆ. ನೋಟಾ - 1015. ಜವರಾಯಿಗೌಡ 96 ಮತಗಳ ಅಂತರದಿಂದ ಮುನ್ನಡೆ.

ಹುಣಸೂರು: ಗೆಲುವಿನ ಸನಿಹಕ್ಕೆ ಕಾಂಗ್ರೆಸ್‌, ಸೋಲಿನತ್ತ ವಿಶ್ವನಾಥ್

ಹುಣಸೂರು ಕ್ಷೇತ್ರ: 13ನೇ ಸುತ್ತಿನ ಮತ ಎಣಿಕೆ ಪೂರ್ಣ. ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ ಗೆಲುವಿನತ್ತ ದಾಪುಗಾಲು. ಎಚ್.ಪಿ.ಮಂಜುನಾಥ್ (ಕಾಂಗ್ರೆಸ್)- 60413, ಎಚ್.ವಿಶ್ವನಾಥ್ (ಬಿಜೆಪಿ)- 36798, ದೇವರಹಳ್ಳಿ ಸೋಮಶೇಖರ್ (ಜೆಡಿಎಸ್)- 22620. ಮಂಜುನಾಥ್‌ಗೆ 23,615 ಮತಗಳ ಮುನ್ನಡೆ

ಕೆ.ಆರ್.ಪೇಟೆಯಲ್ಲಿ ಬಿಜೆಪಿಗೆ ಮುನ್ನಡೆ

ಕೆ.ಆರ್.ಪೇಟೆ 9ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಬಿಜೆಪಿಯ ನಾರಾಯಣಗೌಡ- 30,654, ಜೆಡಿಎಸ್‌ನ ಬಿ.ಎಲ್.ದೇವರಾಜು- 29,832, ಕಾಂಗ್ರೆಸ್‌ನ ಕೆ.ಬಿ.ಚಂದ್ರಶೇಖರ್- 19,869, ಬಿಜೆಪಿ ಅಭ್ಯರ್ಥಿ ನಾರಾಯಣಗೌಡ 822 ಮತಗಳ ಮುನ್ನಡೆ.

ರಾಣೆಬೆನ್ನೂರು ಬಿಜೆಪಿ ಮುನ್ನಡೆ

ರಾಣೆಬೆನ್ನೂರು 9ನೇ ಸುತ್ತಿನ ಮತಎಣಿಕೆ. ಬಿಜೆಪಿಯ ಅರುಣ್ ಕುಮಾರ್ 5162, ಕಾಂಗ್ರೆಸ್‌ನ ಕೋಳಿವಾಡ 3243. ಬಿಜೆಪಿಯ ಅರುಣ್ ಕುಮಾರ್ 9181 ಮತಗಳ ಮುನ್ನಡೆ.

ಅಥಣಿ: ಬಿಜೆಪಿಯ ಮಹೇಶ ಕುಮಠಳ್ಳಿ ಮುನ್ನಡೆ

ಅಥಣಿ ಮತ ಎಣಿಕೆ. ಬಿಜೆಪಿಯ ಮಹೇಶ್ ಕುಮಠಳ್ಳಿ 23,041. ಕಾಂಗ್ರೆಸ್‌ನ ಗಜಾನನ ಮಂಗಸೂಳಿ 12,244. ಬಿಜೆಪಿಗೆ ಮುನ್ನಡೆ.

ಶಿವರಾಮ ಹೆಬ್ಬಾರ್ ಗೆಲುವು

ಯಲ್ಲಾಪುರ ಕ್ಷೇತ್ರ. ಬಿಜೆಪಿಯ ಶಿವರಾಮ ಹೆಬ್ಬಾರ್ ಗೆಲುವು

ವಿಜಯನಗರ ಉಪಚುನಾವಣೆ: ಆನಂದ್‌ಸಿಂಗ್‌ 4599 ಮತಗಳ ಮುನ್ನಡೆ

ವಿಜಯನಗರ ಉಪಚುನಾವಣೆ. 8ನೇ ಸುತ್ತಿನ ಮತಗಳ ವಿವರ. ಆನಂದಸಿಂಗ್(ಬಿಜೆಪಿ)– 34312,  ವಿ.ವೈ.ಘೋರ್ಪಡೆ (ಕಾಂಗ್ರೆಸ್)– 29713,
ಎನ್.ಎಂ.ನಬಿ (ಜೆಡಿಎಸ್)– 1691, ನೋಟಾ– 878.
ಆನಂದಸಿಂಗ್ 4599 ಮತಗಳ ಅಂತರದಿಂದ ಮುನ್ನಡೆ

ಯಲ್ಲಾಪುರ: ಶಿವರಾಮ ಹೆಬ್ಬಾರ್ ಗೆಲುವಿನ ಘೋಷಣೆಯೊಂದೇ ಬಾಕಿ

ಯಲ್ಲಾಪುರ ಕ್ಷೇತ್ರ– 15ನೇ ಸುತ್ತಿನ ಮುಕ್ತಾಯ. ಶಿವರಾಮ ಹೆಬ್ಬಾರ್ (ಬಿಜೆಪಿ)– 71,983. ಭೀಮಣ್ಣ ನಾಯ್ಕ (ಕಾಂಗ್ರೆಸ್‌)–  43,304. ಮುನ್ನಡೆ 28,679.

ಹೊಸಕೋಟೆ: ಶರತ್‌ ಬೆಂಬಲಿಗರಲ್ಲಿ ಕಾತರ

ಹೊಸಕೋಟೆ ಕ್ಷೇತ್ರದ ದೇವನಹಳ್ಳಿ ಮತ ಎಣಿಕೆ  ಕೇಂದ್ರದ ಹೊರಗಡೆ ದೊಡ್ಡ ಪರದೆಯಲ್ಲಿ ವಿವಿಧ ಕ್ಷೇತ್ರಗಳ ಮತ ಎಣಿಕೆ ಮಾಹಿತಿ ಕೊಡಲಾಗುತ್ತಿದೆ. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಬೆಂಬಲಿಗರು ಫಲಿತಾಂಶವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದಾರೆ.

ರಮೇಶ್‌ ಕುಮಾರ್ ಇಂದು ಅನರ್ಹರಾಗಿದ್ದಾರೆ: ಶಿವರಾಮ ಹೆಬ್ಬಾರ್‌

ಶಿರಸಿ: ‘ಇಷ್ಟು ದಿನ ನನ್ನನ್ನ ಅನರ್ಹ ಮಾಡಿದ್ದ ಮಾಜಿ ಸ್ಪೀಕರ್ ರಮೇಶ ಕುಮಾರ ಇಂದು ಅವರೇ ಅನರ್ಹರಾಗಿದ್ದಾರೆ’ ಎಂದು ಮುನ್ನಡೆ ಕಾಯ್ದುಕೊಂಡಿರುವ ಬಿಜೆಪಿ ಅಭ್ಯರ್ಥಿ ಶಿವರಾಮ‌ ಹೆಬ್ಬಾರ್ ಹೇಳಿದರು. 

ಮತ ಎಣಿಕೆ ಕೇಂದ್ರಕ್ಕೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮತದಾರರು ವಿರೋಧಿಗಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಅಭಿವೃದ್ಧಿಶೀಲ ರಾಜಕಾರಣ ಮಣೆ ಹಾಕಿದ್ದಾರೆ ಎಂದರು. 

‘ಕ್ಷೇತ್ರದ ಮತದಾರರ ಪ್ರೀತಿ, ಗೌರವ ಉಳಿಸಿಕೊಳ್ಳುವೆ. ಪ್ರತಿಸ್ಪರ್ಧಿ ಭೀಮಣ್ಣ ನಾಯ್ಕ ಒಳ್ಳೆಯ ವ್ಯಕ್ತಿ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದರು.

ಯಶವಂತಪುರದಲ್ಲಿ ಜವರಾಯಿಗೌಡ ಮುನ್ನಡೆ

ಯಶವಂತಪುರ 5ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಜೆಡಿಎಸ್‌ನ ಜವರಾಯಿಗೌಡ - 31912, ಬಿಜೆಪಿಯ ಎಸ್.ಟಿ.ಸೋಮಶೇಖರ್ - 28280, ಕಾಂಗ್ರೆಸ್‌ನ 
ಪಿ.ನಾಗರಾಜ್ - 2294 ಮತಗಳಿಕೆ. ನೋಟಾ ಚಲಾವಣೆ -514. ಒಟ್ಟು 3632 ಮತಗಳ ಅಂತರದಿಂದ  ಜವರಾಯಿಗೌಡ ಮುನ್ನಡೆ.

ಕೆ.ಆರ್.ಪೇಟೆಯಲ್ಲಿ ಬಿಜೆಪಿ ಮುನ್ನಡೆ

ಕೆ.ಆರ್.ಪೇಟೆ 6ನೇ ಸುತ್ತಿನ ಎಣಿಕೆ ಪೂರ್ಣ. ಬಿಜೆಪಿಯ ನಾರಾಯಣಗೌಡ- 19,452, ಜೆಡಿಎಸ್ ಬಿ.ಎಲ್.ದೇವರಾಜು- 18,799, ಕಾಂಗ್ರೆಸ್ ಕೆ.ಬಿ.ಚಂದ್ರಶೇಖರ್- 12,799. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ 653 ಮತಗಳ ಮುನ್ನಡೆ.

ಹಿರೇಕೆರೂರು ಮತ್ತು ರಾಣೆಬೆನ್ನೂರು: ಬಿಜೆಪಿ ಮುನ್ನಡೆ

ಹಿರೇಕೆರೂರು- ಬಿಜೆಪಿಯ ಬಿ.ಸಿ.ಪಾಟೀಲಗೆ 25,311, ಕಾಂಗ್ರೆಸ್‌ನ ಬನ್ನಿಕೋಡಗೆ 16,376 ಮತಗಳು ಬಿ.ಸಿ.ಪಾಟೀಲ 8935 ಮತಗಳ ಮುನ್ನಡೆ

ರಾಣೆಬೆನ್ನೂರು– ಬಿಜೆಪಿ ಅರುಣ್ ಕುಮಾರ್ 4807 ಮತಗಳ ಮುನ್ನಡೆ.

ಹುಣಸೂರು: ಕಾಂಗ್ರೆಸ್‌ನ ಮಂಜುನಾಥ್ ಮುನ್ನಡೆ

ಹುಣಸೂರು: 7ನೇ ಸುತ್ತಿನ ಮತ ಎಣಿಕೆ ಪೂರ್ಣ. ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್- 30404, ಎಚ್.ವಿಶ್ವನಾಥ್ (ಬಿಜೆಪಿ)- 18752, ದೇವರಹಳ್ಳಿ ಸೋಮಶೇಖರ್ (ಜೆಡಿಎಸ್)- 14888. ಮಂಜುನಾಥ್ ಗೆ 11,652 ಮತಗಳ ಮುನ್ನಡೆ

ವಿಜಯನಗರದಲ್ಲಿ ಆನಂದ್‌ಸಿಂಗ್ ಮುನ್ನಡೆ

ವಿಜಯನಗರ ಕ್ಷೇತ್ರ. 5ನೇ ಸುತ್ತಿನ ಮತಗಳ ವಿವರ. ಆನಂದಸಿಂಗ್ (ಬಿಜೆಪಿ)- 22701, ವಿ.ವೈ.ಘೋರ್ಪಡೆ (ಕಾಂಗ್ರೆಸ್)- 16676, ಎನ್.ಎಂ.ನಬಿ (ಜೆಡಿಎಸ್)- 991
ನೋಟಾ- 588.

ಯಲ್ಲಾಪುರ: ಬಿಜೆಪಿಗೆ 22,650 ಮತಗಳ ಮುನ್ನಡೆ

ಯಲ್ಲಾಪುರ ಕ್ಷೇತ್ರ - 12ನೇ ಸುತ್ತಿನ ಎಣಿಕೆ ಮುಕ್ತಾಯ. ಶಿವರಾಮ ಹೆಬ್ಬಾರ್ (ಬಿಜೆಪಿ)- 54490, 
ಭೀಮಣ್ಣ ನಾಯ್ಕ (ಕಾಂಗ್ರೆಸ್) - 33840, ಚೈತ್ರಾ ಗೌಡ (ಜೆಡಿಎಸ್)- ಮುನ್ನಡೆ- 22,650.

ಅಥಣಿ: ತಾಂತ್ರಿಕ ಸಮಸ್ಯೆ, ಮತ ಎಣಿಕೆ ಸ್ಥಗಿತ

ಅಥಣಿ ಕ್ಷೇತ್ರದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮತ ಎಣಿಕೆ ಸ್ಥಗಿತಗೊಳಿಸಲಾಗಿದೆ. ಅರ್ಧ ಗಂಟೆಯಿಂದ ಎಣಿಕೆ ಪ್ರಕ್ರಿಯೆ ನಿಲ್ಲಿಸಲಾಗಿದೆ.

ಯಶವಂತಪುರದಲ್ಲಿ ಜವರಾಯಿಗೌಡ ಮುನ್ನಡೆ

ಯಶವಂಪುರ ಕ್ಷೇತ್ರ: ಜೆಡಿಎಸ್‌ನ ಜವರಾಯಿಗೌಡ - 31912, ಬಿಜೆಪಿಯ ಎಸ್.ಟಿ.ಸೋಮಶೇಖರ್ - 28280, ಕಾಂಗ್ರೆಸ್‌ನ 
ಪಿ.ನಾಗರಾಜ್ - 2294 ಮತ ಗಳಿಸಿದ್ದಾರೆ. ನೋಟಾ ಮತಗಳು 514. ಜವರಾಯಿಗೌಡ 3632 ಮತಗಳ ಅಂತರದಿಂದ ಮುನ್ನಡೆ.

ಕೆ.ಆರ್.ಪುರಂ: ಬಿಜೆಪಿ ಮುನ್ನಡೆ.

ಕೆಆರ್ ಪುರಂ. ಬಿಜೆಪಿ (ಭೈರತಿ ಬಸವರಾಜು) 4052, ಕಾಂಗ್ರೆಸ್ (ನಾರಾಯಣಸ್ವಾಮಿ) 2360, ಜೆಡಿಎಸ್ (ಕೃಷ್ಣಮೂರ್ತಿ) 1691 ಮತಗಳಿಸಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಸಂಭ್ರಮ

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಮುಖವಾಡ ತೊಟ್ಟು ಸಂಭ್ರಮಿಸುತ್ತಿರುವ ಬಿಜೆಪಿ ಕಾರ್ಯಕರ್ತರು.

ಹೊಸಕೋಟೆ: 3ನೇ ಸುತ್ತಿನಲ್ಲಿ ಶರತ್‌ 5528 ಮತಗಳ ಮುನ್ನಡೆ

ಹೊಸಕೋಟೆ 2ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಶರತ್ ಬಚ್ಚೇಗೌಡ (ಪಕ್ಷೇತರ) 8780. ಎಂಟಿಬಿ ನಾಗರಾಜ್ (ಬಿಜೆಪಿ) 4960. ಕಾಂಗ್ರೆಸ್– 3151. ಮುನ್ನಡೆ 3879.

3ನೇ ಸುತ್ತಿನಲ್ಲೂ ಶರತ್ 5528 ಮತಗಳಿಂದ ಮುನ್ನಡೆ.

ಸಚಿವ ಸ್ಥಾನದ ಗೊಂದಲ

ಕಾಗವಾಡ: ಅದಲು ಬದಲು, ಕಂಚಿ ಕದಲು

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಬಿಜೆಪಿ ಮೇಲುಗೈ

ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ. 2ನೇ ಸುತ್ತಿನ ಎಣಿಕೆ ಮುಕ್ತಾಯ. ಬಿಜೆಪಿ- 8233, ಕಾಂಗ್ರೆಸ್- 3674, ಜೆಡಿಎಸ್- 3499, ಬಿಜೆಪಿಗೆ 4559 ಮತಗಳ ಮುನ್ನಡೆ.

ಕೆ.ಆರ್.ಪೇಟೆಯಲ್ಲಿ ಜೆಡಿಎಸ್‌ ಮುನ್ನಡೆ

ಕೆ.ಆರ್.ಪೇಟೆ 4ನೇ ಸುತ್ತು. ಜೆಡಿಎಸ್ ಬಿ.ಎಲ್.ದೇವರಾಜು- 12,758, ಬಿಜೆಪಿ ನಾರಾಯಣಗೌಡ- 13,018, ಕಾಂಗ್ರೆಸ್ ಕೆ.ಬಿ.ಚಂದ್ರಶೇಖರ್- 8,072. ಜೆಡಿಎಸ್ ಮುನ್ನಡೆ.

ಕಾಗವಾಡ: ಬಿಜೆಪಿಗೆ ಮುನ್ನಡೆ

ಕಾಗವಾಡ: 5ನೇ ಸುತ್ತು ಮುಕ್ತಾಯ. ಬಿಜೆಪಿ -23374, ಕಾಂಗ್ರೆಸ್ -17419. ಮುನ್ನಡೆ - 5955.

ಮಹಾಲಕ್ಷ್ಮಿ ಲೇಔಟ್: ಬಿಜೆಪಿ ಮುನ್ನಡೆ

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ. ಎರಡನೇ ಸುತ್ತು ಮುಕ್ತಾಯ. ಬಿಜೆಪಿ (ಗೋಪಾಲಯ್ಯ)- 8233, ಕಾಂಗ್ರೆಸ್ (ಶಿವರಾಜು)- 3674, ಜೆಡಿಎಸ್ (ಗಿರೀಶ್)- 3499. 4559 ಮತಗಳಿಂದ ಬಿಜೆಪಿ ಮುನ್ನಡೆ...

ಹುಣಸೂರು: ಕಾಂಗ್ರೆಸ್‌ನ ಮಂಜುನಾಥ್ ಮುನ್ನಡೆ

ಹುಣಸೂರು ಉಪಚುನಾವಣೆ: ನಾಲ್ಕನೇ ಸುತ್ತಿನ ಮತ ಎಣಿಕೆ ಪೂರ್ಣ. ಎಚ್.ಪಿ.ಮಂಜುನಾಥ್ (ಕಾಂಗ್ರೆಸ್)- 16990. ಎಚ್.ವಿಶ್ವನಾಥ್ (ಬಿಜೆಪಿ)- 11597. ದೇವರಹಳ್ಳಿ ಸೋಮಶೇಖರ್ (ಜೆಡಿಎಸ್)- 8247. ಕಾಂಗ್ರೆಸ್‌ನ ಮಂಜುನಾಥ್ 5,393 ಮತಗಳ ಮುನ್ನಡೆ.

ಯಲ್ಲಾಪುರ: ಬಿಜೆಪಿಗೆ ಮುನ್ನಡೆ

ಯಲ್ಲಾಪುರ ಕ್ಷೇತ್ರ - 8ನೇ ಸುತ್ತಿನ ಮುಕ್ತಾಯ. 
ಶಿವರಾಮ ಹೆಬ್ಬಾರ್ (ಬಿಜೆಪಿ)- 35275, ಭೀಮಣ್ಣ ನಾಯ್ಕ (cong) - 20289,  ಚೈತ್ರಾ ಗೌಡ (JDS)- 712. ಮುನ್ನಡೆ-14,986

ಹೊಸಕೋಟೆ: ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಮುನ್ನಡೆ

ಹೊಸಕೋಟೆ ಕ್ಷೇತ್ರ -ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಬಿಜೆಪಿಯ ಎಂಟಿಬಿ ನಾಗರಾಜ್ ಅವರಿಗೆ 2741 ಮತಗಳು, ಪದ್ಮಾವತಿ ಸುರೇಶ್ ಅವರಿಗೆ 1730 ಮತಗಳು, ಪಕ್ಷೇತರ ಶರತ್ ಬಚ್ಚೇಗೌಡ ಅವರಿಗೆ 4993 ಮತಗಳು. ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ 1792 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ.

ಚಿಕ್ಕಬಳ್ಳಾಪುರ: ಬಿಜೆಪಿಯ ಸುಧಾಕರ್ ಮುನ್ನಡೆ

ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ. 4ನೇ ಸುತ್ತು. ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ - 13,667. ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ - 5,503. ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ-6,244. ಮುನ್ನಡೆ: 7,422.

ವಿಜಯನಗರದಲ್ಲಿ ಆನಂದ್‌ಸಿಂಗ್ ಮುನ್ನಡೆ

ವಿಜಯನಗರ ಮೂರನೇ ಸುತ್ತಿನಲ್ಲೂ ಆನಂದ್‌ಸಿಂಗ್ ಮುನ್ನಡೆ– 13960 ಮತಗಳು. ಎರಡನೇ ಸ್ಥಾನ ಕಾಯ್ದುಕೊಂಡ ಕಾಂಗ್ರೆಸ್ ನ ವೆಂಕಟರಾವ್ ಘೋರ್ಪಡೆ– 10265 ಮತಗಳು. ಮೂರನೇ ಸ್ಥಾನದಲ್ಲೇ ಉಳಿದ ಜೆಡಿಎಸ್ ನ ಎನ್.ಎಂ.ನಬಿ

ಯಲ್ಲಾಪುರ: ಬಿಜೆಪಿಗೆ ಮುನ್ನಡೆ

ಯಲ್ಲಾಪುರ ಕ್ಷೇತ್ರ - 7ನೇ ಸುತ್ತಿನ ಮುಕ್ತಾಯ. ಶಿವರಾಮ ಹೆಬ್ಬಾರ್ (ಬಿಜೆಪಿ)- 29,875, ಭೀಮಣ್ಣ ನಾಯ್ಕ (ಕಾಂಗ್ರೆಸ್) - 13,950, ಚೈತ್ರಾ ಗೌಡ (ಜೆಡಿಎಸ್)- 644. ಮುನ್ನಡೆ-13,435

ಗೋಕಾಕ: ರಮೇಶ ಜಾರಕಿಹೊಳಿ 2120 ಮತಗಳ ಮುನ್ನಡೆ

ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಮೊದಲ ಸುತ್ತಿನಲ್ಲಿ ಮುನ್ನಡೆ ಸಾಧಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಲಖನ್ ಅವರಿಂದ 2120 ಮತಗಳ ಮುನ್ನಡೆ ಹೊಂದಿದ್ದಾರೆ.

ಹುಣಸೂರು ಉಪಚುನಾವಣೆ: 3ನೇ ಸುತ್ತಿನ ಮತ ಎಣಿಕೆ ಪೂರ್ಣ. ಎಚ್.ಪಿ.ಮಂಜುನಾಥ್ (ಕಾಂಗ್ರೆಸ್)- 12356, ಎಚ್.ವಿಶ್ವನಾಥ್ (ಬಿಜೆಪಿ)- 8348, ದೇವರಹಳ್ಳಿ ಸೋಮಶೇಖರ್ (ಜೆಡಿಎಸ್)- 6307. ಕಾಂಗ್ರೆಸ್‌ನ ಮಂಜುನಾಥ್‌ಗೆ 4,008 ಮತಗಳ ಮುನ್ನಡೆ

ಕೆ.ಆರ್.ಪೇಟೆ ಜೆಡಿಎಸ್ ಮುನ್ನಡೆ

ಕೆ.ಆರ್.ಪೇಟೆ ಕ್ಷೇತ್ರ. ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು 850 ಮತಗಳ ಮುನ್ನಡೆ

ಯಲ್ಲಾಪುರ: 6ನೇ ಸುತ್ತಿನ ಎಣಿಕೆ ಮುಕ್ತಾಯ. ಬಿಜೆಪಿ 12,335 ಮತಗಳ ಮುನ್ನಡೆ

ಯಲ್ಲಾಪುರ ಕ್ಷೇತ್ರ. 6ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಶಿವರಾಮ ಹೆಬ್ಬಾರ್ (ಬಿಜೆಪಿ)-26285, ಭೀಮಣ್ಣ ನಾಯ್ಕ (ಕಾಂಗ್ರೆಸ್) - 13950,  ಚೈತ್ರಾ ಗೌಡ (ಜೆಡಿಎಸ್)- 590. ಬಿಜೆಪಿ ಮುನ್ನಡೆ- 12335.

ಚಿಕ್ಕಬಳ್ಳಾಪುರ 3ನೇ ಸುತ್ತು: ಬಿಜೆಪಿಯ ಸುಧಾಕರ್ ಮುನ್ನಡೆ

ಚಿಕ್ಕಬಳ್ಳಾಪುರ ಕ್ಷೇತ್ರ, 3ನೇ ಸುತ್ತು. ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ - 10,200, ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ - 4,776, ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ- 4,461. ಬಿಜೆಪಿ ಮುನ್ನಡೆ 5,424

3ನೇ ಸುತ್ತು: ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಮುನ್ನಡೆ

ಕೆ.ಆರ್.ಪೇಟೆ 3ನೇ ಸುತ್ತು. ಜೆಡಿಎಸ್ ಬಿ.ಎಲ್.ದೇವರಾಜು- 9841, ಬಿಜೆಪಿ ನಾರಾಯಣಗೌಡ- 9429, ಕಾಂಗ್ರೆಸ್ ಕೆ.ಬಿ.ಚಂದ್ರಶೇಖರ್- 6012.

ವಿಜಯನಗರದಲ್ಲಿ ಆನಂದ್‌ಸಿಂಗ್ ಮುನ್ನಡೆ

ಬಳ್ಳಾರಿ ಜಿಲ್ಲೆ ವಿಜಯನಗರ ಕ್ಷೇತ್ರ. ಬಿಜೆಪಿಯ ಆನಂದ್ ಸಿಂಗ್ 9304, ಕಾಂಗ್ರೆಸ್‌ನ ವೆಂಟಕರಾವ್ ಘೋರ್ಪಡೆ 6040 ಮತಗಳಿಕೆ.

ಕಾಗವಾಡದಲ್ಲಿ ಬಿಜೆಪಿಗೆ 14,479 ಮತಗಳ ಮುನ್ನಡೆ

ಬೆಳಗಾವಿ ಜಿಲ್ಲೆ ಕಾಗವಾಡದಲ್ಲಿ ಬಿಜೆಪಿಯ ಶ್ರೀಮಂತ ಪಾಟೀಲಗೆ ಮುನ್ನಡೆ. 14479 ಮತಗಳಿಂದ ಮುಂದಿದ್ದಾರೆ. ಕಾಂಗ್ರೆಸ್‌ನ ಭರಮಗೌಡ ಕಾಗೆ 9774 ಮತಗಳನ್ನು ಗಳಿಸಿದ್ದಾರೆ.

ಯಲ್ಲಾಪುರ: ಶಿವರಾಮ ಹೆಬ್ಬಾರ್ ಭಾರಿ ಮುನ್ನಡೆ

ಯಲ್ಲಾಪುರ ಕ್ಷೇತ್ರ- ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಶಿವರಾಮ ಹೆಬ್ಬಾರ್ (ಬಿಜೆಪಿ)- 22286, ಭೀಮಣ್ಣ ನಾಯ್ಕ (cong) - 11570. ಮುನ್ನಡೆ- 10,716

ರಾಣೆಬೆನ್ನೂರು, ಹಿರೇಕೆರೂರು: ಬಿಜೆಪಿಗೆ ಮುನ್ನಡೆ

ರಾಣೆಬೆನ್ನೂರು- 2ನೇ ಸುತ್ತು. ಬಿಜೆಪಿಯ ಅರುಣ್ ಕುಮಾರಗೆ 462 ಮತಗಳ ಮುನ್ನಡೆ. ಹಿರೇಕೆರೂರು- 2ನೇ ಸುತ್ತು. ಬಿಜೆಪಿ ಬಿ.ಸಿ.ಪಾಟೀಲಗೆ 1069 ಮತಗಳ ಮುನ್ನಡೆ

ಅಥಣಿ, ಕಾಗವಾಡ, ಗೋಕಾಕ: ಬಿಜೆಪಿ ಮುನ್ನಡೆ

ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ ಮತ್ತು ಗೋಕಾಕ ಕ್ಷೇತ್ರಗಳ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ. ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ. ಗೋಕಾಕದಲ್ಲಿ ರಮೇಶ ಜಾರಕಿಹೊಳಿ, ಅಥಣಿಯಲ್ಲಿ ಮಹೇಶ ಕುಮಠಳ್ಳಿ, ಕಾಗವಾಡದಲ್ಲಿ ಶ್ರೀಮಂತ ಪಾಟೀಲ ಮುನ್ನಡೆ.

ಅಥಣಿ: ಬಿಜೆಪಿಯ ಮಹೇಶ ಕುಮಠಳ್ಳಿ ಮುನ್ನಡೆ

ಅಥಣಿಯಲ್ಲಿ ಬಿಜೆಪಿಯ ಮಹೇಶ ಕುಮಠಳ್ಳಿ 3821 ಮತಗಳಿಂದ ಮುನ್ನಡೆ.

ಚಿಕ್ಕಬಳ್ಳಾಪುರ: ಬಿಜೆಪಿಯ ಸುಧಾಕರ್ ಮುನ್ನಡೆ

ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ. 2ನೇ ಸುತ್ತಿನ ವಿವರ. ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ -6,801, ಕಾಂಗ್ರೆಸ್ ಅಭ್ಯರ್ಥಿ ಎಂ.ಅಂಜನಪ್ಪ - 3,527, ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ-3,260, ನೋಟಾ - 57. ಸುಧಾಕರ್
ಮುನ್ನಡೆ ಅಂತರ– 3,274

ಹುಣಸೂರು: ಕಾಂಗ್ರೆಸ್‌ನ ಮಂಜುನಾಥ್ ಮುನ್ನಡೆ

ಹುಣಸೂರು ಉಪಚುನಾವಣೆ: ಎರಡನೇ ಸುತ್ತಿನ ಮತ ಎಣಿಕೆ ಪೂರ್ಣ. ಎಚ್.ಪಿ.ಮಂಜುನಾಥ್ (ಕಾಂಗ್ರೆಸ್)- 8,439, ಎಚ್.ವಿಶ್ವನಾಥ್ (ಬಿಜೆಪಿ)- 5,432, ದೇವರಹಳ್ಳಿ ಸೋಮಶೇಖರ್ (ಜೆಡಿಎಸ್)- 4,864. ಮಂಜುನಾಥ್ ಗೆ 3,007 ಮತಗಳ ಮುನ್ನಡೆ

ಯಲ್ಲಾಪುರ: 4ನೇ ಸುತ್ತಿನ ನಂತರವೂ ಬಿಜೆಪಿ ಮೇಲುಗೈ

ಯಲ್ಲಾಪುರ ಕ್ಷೇತ್ರ - ನಾಲ್ಕನೇ ಸುತ್ತಿನ ಎಣಿಕೆ ಮುಕ್ತಾಯ. ಶಿವರಾಮ ಹೆಬ್ಬಾರ್ (ಬಿಜೆಪಿ)- 17951, ಭೀಮಣ್ಣ ನಾಯ್ಕ (cong) - 9849, ಚೈತ್ರಾ ಗೌಡ (JDS)- 347, ನೋಟ - 513. ಮುನ್ನಡೆ -8102

ಹಿರೇಕೆರೂರು ಮತ್ತು ರಾಣೆಬೆನ್ನೂರು: ಬಿಜೆಪಿ ಮುನ್ನಡೆ

ಹಾವೇರಿ ಜಿಲ್ಲೆಯ ಹಿರೇಕೆರೂರು ಮತ್ತು ರಾಣೆಬೆನ್ನೂರು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ.

ಶಿವಾಜಿನಗರ ಕ್ಷೇತ್ರ

ಶಿವಾಜಿನಗರ ಕ್ಷೇತ್ರ: ಮತ ಎಣಿಕೆ ಕೇಂದ್ರದಿಂದ ನಿರ್ಗಮಿಸಿದ ಬಿಜೆಪಿ ಅಭ್ಯರ್ಥಿ ಎಂ ಶರವಣ.

ಕೆ.ಆರ್.ಪೇಟೆ: ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜುಗೆ 1312 ಮತಗಳ ಮುನ್ನಡೆ

ಹಿರೇಕೆರೂರು: ಬಿ.ಸಿ. ಪಾಟೀಲ 5071 ಮತ ಗಳಿಸಿ ಮುನ್ನಡೆ

ಶಿವಾಜಿನಗರ: ಎರಡನೇ ಸುತ್ತಿನ ಮತ ಎಣಿಕೆ ಪೂರ್ಣ - 3800 ಮತಗಳಿಂದ ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಮುನ್ನಡೆ

ರಾಣೆಬೆನ್ನೂರು: ಅರುಣ್ ಕುಮಾರ 3852 ಮತ ಗಳಿಸಿ ಮುನ್ನಡೆ, ಕೋಳಿವಾಡಗೆ 3435 ಮತ

ಹಿರೇಕೆರೂರು: ಅಂಚೆ ಮತ ಎಣಿಕೆಯಲ್ಲಿ ಬಿ.ಸಿ.ಪಾಟೀಲ (ಬಿಜೆಪಿ) 22 ಮತ ಗಳಿಸಿ ಮುನ್ನಡೆ, ಬನ್ನಿಕೋಡ (ಕಾಂಗ್ರೆಸ್) 17 ಮತ

ರಾಣೆಬೆನ್ನೂರು: ಅಂಚೆ ಮತದಾನದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ 21 ಮತ ಗಳಿಸಿ ಮುನ್ನಡೆ. ಕಾಂಗ್ರೆಸ್ ಅಭ್ಯರ್ಥಿ ಕೋಳಿವಾಡಗೆ 19 ಮತ

ಕೆ.ಆರ್.ಪೇಟೆ: ಜೆಡಿಎಸ್ ಬಿ.ಎಲ್.ದೇವರಾಜು- 7069, ಬಿಜೆಪಿ ನಾರಾಯಣಗೌಡ- 6219, ಕಾಂಗ್ರೆಸ್ ಕೆ.ಬಿ.ಚಂದ್ರಶೇಖರ್- 4405

ಚಿಕ್ಕಬಳ್ಳಾಪುರ: ಬಿಜೆಪಿ ಅಭ್ಯರ್ಥಿ 2,873, ಜೆಡಿಎಸ್ ಅಭ್ಯರ್ಥಿ 2,155, ಕಾಂಗ್ರೆಸ್ ಅಭ್ಯರ್ಥಿ 1,950 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರು 818 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ

ಹುಣಸೂರಿನಲ್ಲಿ ಮಂಜುನಾಥ್ (ಕಾಂಗ್ರೆಸ್)- 4,707, ಎಚ್.ವಿಶ್ವನಾಥ್ (ಬಿಜೆಪಿ)- 3,855, ದೇವರಹಳ್ಳಿ ಸೋಮಶೇಖರ್ (ಜೆಡಿಎಸ್)- 1,871 ಮತಗಳು

ಮೊದಲ ಸುತ್ತಿನಲ್ಲಿ ಕಾಗವಾಡದಲ್ಲಿ ಬಿಜೆಪಿಗೆ 1,448 ಮತಗಳ ಮುನ್ನಡೆ

ಹುಣಸೂರು: ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ ಅವರಿಗೆ 852 ಮತಗಳ ಮುನ್ನಡೆ

ಮೊದಲ ಸುತ್ತು: ಅಥಣಿಯಲ್ಲಿ ಬಿಜೆಪಿ, ಶಿವಾಜಿನಗರದಲ್ಲಿ ಕಾಂಗ್ರೆಸ್ ಮುನ್ನಡೆ

ಚಿಕ್ಕಬಳ್ಳಾಪುರ: 9 ಅಂಚೆ ಮತಗಳ ಪೈಕಿ 8 ಬಿಜೆಪಿಗೆ, 1 ಕಾಂಗ್ರೆಸ್‌ಗೆ ಚಲಾವಣೆ. ಅಂಚೆ ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಮುನ್ನಡೆ

ಯಲ್ಲಾಪುರದಲ್ಲಿ ಮೊದಲ ಸುತ್ತಿನ ಎಣಿಕೆ ಮುಕ್ತಾಯ

ಯಲ್ಲಾಪುರ ಕ್ಷೇತ್ರ, ಮೊದಲ ಸುತ್ತಿನ ಕೊನೆಯಲ್ಲಿ ಶಿವರಾಮ ಹೆಬ್ಬಾರ್ (ಬಿಜೆಪಿ)- 4694, 
ಚೈತ್ರಾ ಗೌಡ (ಜೆಡಿಎಸ್)- 110 ಮತ್ತು ಭೀಮಣ್ಣ ನಾಯ್ಕ (ಕಾಂಗ್ರೆಸ್) -2430.

ಕೆ.ಆರ್‌.ಪೇಟೆಯಲ್ಲಿ ಜೆಡಿಎಸ್ ಸ್ಪಷ್ಟ ಮುನ್ನಡೆ

ಕೆ.ಆರ್.ಪೇಟೆ ಮೊದಲ ಸುತ್ತಿನ ಮತ ಗಳಿಕೆ ವಿವರ. ಜೆಡಿಎಸ್‌ನ ಬಿ.ಎಲ್.ದೇವರಾಜು- 2595, ಬಿಜೆಪಿಯ ನಾರಾಯಣಗೌಡ- 2131, ಕಾಂಗ್ರೆಸ್‌ನ ಕೆ.ಬಿ.ಚಂದ್ರಶೇಖರ್- 1642 ಮತ ಗಳಿಸಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಜೆಡಿಎಸ್, ಕಾಗವಾಡದಲ್ಲಿ ಬಿಜೆಪಿ ಮುನ್ನಡೆ

ಕೆ.ಆರ್.ಪೇಟೆಯಲ್ಲಿ ಜೆಡಿಎಸ್‌ನ ದೇವರಾಜ ಮುನ್ನಡೆ. ಕಾಗವಾಡದಲ್ಲಿ ಬಿಜೆಪಿಯ ಶ್ರೀಮಂತ ಪಾಟೀಲ್ ಮುನ್ನಡೆ.

ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್ ಮುನ್ನಡೆ

ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಮುನ್ನಡೆ ಸಾಧಿಸಿದ್ದಾರೆ. ಹೆಬ್ಬಾರ್ 342 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ 244 ಮತ ಪಡೆದಿದ್ದಾರೆ. ಹೆಬ್ಬಾರ್ 98 ಮತಗಳಿಂದ ಮುನ್ನಡೆ. ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡಗೆ 5 ಮತಗಳು ಸಿಕ್ಕಿವೆ.

ಶಿವಾಜಿನಗರ: ಮತ ಎಣಿಕೆ ನಿಧಾನ

ಬೆಂಗಳೂರಿನ ಶಿವಾಜಿನಗರ ಕ್ಷೇತ್ರದ ಮತ ಎಣಿಕೆ ನಗರದ ಮೌಂಟ್ ಕಾರ್ಮೆಲ್ ಕಾಲೇಜು ಆವರಣದಲ್ಲಿ ಅಂಚೆ ಮತಗಳ ಎಣಿಕೆ ಆರಂಭವಾಗಿದೆ. ಆದರೆ ಇತರ ಕ್ಷೇತ್ರಗಳ ಮತ ಎಣಿಕೆಯ ವೇಗ ಗಮನಿಸಿದರೆ ಇಲ್ಲಿ ಮತ ಎಣಿಕೆ ನಿಧಾನಗತಿಯಿದ್ದಂತೆ ಕಾಣಿಸುತ್ತಿದೆ.

ಹಾವೇರಿಯಲ್ಲಿ ಮತ ಎಣಿಕೆ ಆರಂಭ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು- ಹಿರೇಕೆರೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ. ದೇವಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭ.

ಬಳ್ಳಾರಿಯಲ್ಲಿ ಮತ ಎಣಿಕೆ ಆರಂಭ

ಬಳ್ಳಾರಿ ಮತ ಎಣಿಕೆ ಕೇಂದ್ರದೊಳಕ್ಕೆ ಮತ ಯಂತ್ರಗಳನ್ನು ಸಾಗಿಸಿದ ಸಿಬ್ಬಂದಿ.

ಶಿವಾಜಿನಗರದಲ್ಲಿ ತಡ

ಶಿವಾಜಿನಗರದಲ್ಲಿ ತಡವಾಗಿ ಆರಂಭವಾದ ಮತ ಎಣಿಕೆ.

ದೇವನಹಳ್ಳಿ: ಮತಎಣಿಕೆ ಆರಂಭ

ದೇವನಹಳ್ಳಿ ಆಕಾಶ್ ಶಾಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರ ಉಪಸ್ಥಿತಿಯಲ್ಲಿ ಭದ್ರತಾ ಕೊಠಡಿ ತೆರೆಯಲಾಗಿದೆ. ಹೊಸಕೋಟೆ ಮತ ಕ್ಷೇತ್ರದ ಮತ ಎಣಿಕೆ ಇಲ್ಲಿ ನಡೆಯಲಿದೆ.

ಈವರೆಗಿನ ಫಲಿತಾಂಶ

ಬಿಜೆಪಿ 11 ಕ್ಷೇತ್ರಗಳಲ್ಲಿ, ಇತರರು 1 ಕ್ಷೇತ್ರದಲ್ಲಿ ಮುನ್ನಡೆ.

ಹುಣಸೂರು: 107 ಅಂಚೆ ಮತಗಳು

ಹುಣಸೂರು ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮತ ಎಣಿಕೆ ನಡೆಯುತ್ತಿರುವ ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದೆ. ಮೊದಲು ಅಂಚೆ ಮತಗಳ ಎಣಿಕೆ. ಒಟ್ಟು 107 ಅಂಚೆ ಮತಗಳಿವೆ.

ಅನರ್ಹ ಶಾಸಕ ಎಚ್.ವಿಶ್ವನಾಥ್ ಅವರ ಸ್ಪರ್ಧೆಯಿಂದ ಈ ಕ್ಷೇತ್ರ ರಾಜ್ಯದ ಗಮನ ಸೆಳೆದಿದೆ. ವಿಶ್ವನಾಥ್ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನ ಎಚ್.ಪಿ.ಮಂಜುನಾಥ್ ಮತ್ತು ಜೆಡಿಎಸ್ ನ ದೇವರಹಳ್ಳಿ ಸೋಮಶೇಖರ್ ಕಣದಲ್ಲಿದ್ದಾರೆ.

ಅಂಚೆ ಮತ ಯಾರು ಮುನ್ನಡೆ

ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ, ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಸುಧಾಕರ್ ಮುನ್ನಡೆ. ಒಟ್ಟು 7 ಕಡೆ ಬಿಜೆಪಿ, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ.

ಗೋಕಾಕದಲ್ಲಿ ಆರಂಭವಾಗದ ಎಣಿಕೆ

ಗೋಕಾಕದಲ್ಲಿ ಆರಂಭವಾಗದ ಎಣಿಕೆ.

ಅಂಚೆ ಮತಗಳ ಎಣಿಕೆಯಲ್ಲಿ ಮುನ್ನಡೆ

ಯಶವಂತಪುರದಲ್ಲಿ ಬಿಜೆಪಿ, ಹುಣಸೂರಿನಲ್ಲಿ ಕಾಂಗ್ರೆಸ್‌ ಮುನ್ನಡೆ.

ಅಂಚೆ ಮತ ಎಣಿಕೆ ಆರಂಭ

ರಾಜ್ಯದ ಎಲ್ಲ 15 ಕ್ಷೇತ್ರಗಳಲ್ಲಿ ಅಂಚೆ ಮತಗಳ ಎಣಿಕೆ ಆರಂಭ. ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಮುನ್ನಡೆ.

ಕೆ.ಆರ್.ಪೇಟೆಯಲ್ಲಿ ಮತ ಎಣಿಕೆ ಆರಂಭ

ಕೆ.ಆರ್‌.ಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜ್, ಬಿಜೆಪಿಯ ನಾರಾಯಣಗೌಡ ಮತ್ತು ಕಾಂಗ್ರೆಸ್‌ನ ಕೆ.ಬಿ.ಚಂದ್ರಶೇಖರ್ ಸಮಕ್ಷಮ ಸ್ಟ್ರಾಂಗ್‌ ರೂಂ ತೆರೆದು ಮತ ಎಣಿಕೆಗೆ ಚಾಲನೆ ನೀಡಲಾಯಿತು.

ಕೆ.ಆರ್.ಪೇಟೆಯಲ್ಲಿ ಬಿಗಿ ಭದ್ರತೆ

ಕೆ.ಆರ್.ಪೇಟೆ ಕ್ಷೇತ್ರದ ಮತ ಎಣಿಕೆ ನಡೆಯಲಿರುವ ಸರ್ಕಾರಿ ಪಾಲಿಟೆಕ್ನಿಕ್ ಎದುರು ಬಿಗಿ ಭದ್ರತೆ. ಆವರಣದಲ್ಲಿ ಕಟ್ಟೆಚ್ಚರ.

ಬೆಂಗಳೂರಿನಲ್ಲಿ ಬಿಗಿ ಭದ್ರತೆ

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಮತ ಎಣಿಕೆ ಕೇಂದ್ರದ ಮುಂದೆ ಬಿಗಿ ಭದ್ರತೆ.

ಹುಣಸೂರು ಮತ ಎಣಿಕೆಗೆ ಕ್ಷಣಗಣನೆ

ಹುಣಸೂರು ಕ್ಷೇತ್ರದ ಮತ ಎಣಿಕೆ ನಡೆಯಲಿರುವ ದೇವರಾಜ ಅರಸು ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.