ADVERTISEMENT

ಸೋರಿಯಾಸಿಸ್: ಆಯುರ್ವೇದ ಚಿಕಿತ್ಸೆ

ಡಾ.ಮಹೇಶ್ ಶರ್ಮ
Published 27 ಡಿಸೆಂಬರ್ 2013, 19:30 IST
Last Updated 27 ಡಿಸೆಂಬರ್ 2013, 19:30 IST

ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ  ಸೋರಿ­ಯಾಸಿಸ್ ಬಹಳ ಮುಖ್ಯವಾದದ್ದು. ಈ ರೋಗವು ಚರ್ಮವನ್ನು ವಿರೂಪ­ಗೊಳಿಸುತ್ತವೆ, ರೋಗಿ ಖಿನ್ನತೆಗೂ ಒಳಗಾಗುತ್ತಾನೆ. ಸೋರಿಯಾಸಿಸ್  ಅಂಟುರೋಗ ಅಥವಾ ಅನುವಂಶಿಕವಾಗಿ ಬರುವ ರೋಗವಲ್ಲ. ಈ ರೋಗವು ಶೇಕಡ ೨-೩% ಜನಸಂಖ್ಯೆಯಲ್ಲಿ ಕಂಡು ಬಂದಿದ್ದು  ೨೦ ವರ್ಷಪ್ರಾಯದವ­ರಲ್ಲಿ ಕಂಡುಬರುತ್ತದೆ.

ಸೋರಿಯಾಸಿಸ್ ರೋಗದಲ್ಲಿ ಹಲವು ಪ್ರಕಾರಗಳಿದ್ದು, ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳ­ಬಹುದು. ಈ ರೋಗದಲ್ಲಿ ಚರ್ಮ ಕಣಗಳ ಉತ್ಪತ್ತಿ  ವೇಗವು ಹೆಚ್ಚಾಗಿ ಚರ್ಮವು ಕೆಂಪಾಗಿ, ಒಣಗಿದಂತಾಗಿ ಅತಿಯಾದ ತುರಿಕೆಯೊಂದಿಗೆ ಚರ್ಮದ ಮೇಲ್ಭಾಗದಲ್ಲಿ ಹೊಟ್ಟಿ­ನಂತಹ ಪದರ ಉಂಟಾಗುತ್ತದೆ. ಕೆಲವೊಮ್ಮೆ ಅತಿಯಾಗಿ ಕೆರೆದು­ಕೊಂಡಾಗ ರಕ್ತ ಬರುವ ಸಾಧ್ಯತೆ ಇದೆ. ಚಿಕಿತ್ಸೆ ಪಡೆ­ಯದೆ ಇದ್ದಲ್ಲಿ ಬಹಳ ಸಮಯದ ನಂತರ ಉಗುರು­ಗಳನ್ನು ಹಾನಿಮಾಡಿ ಸೋರಿಯಾ­ಟಿಕ್ ಆರ್ಥರೈಟಿಸ್‌ ಗೆ ಒಳಪಡಿಸುತ್ತದೆ.

ಕಾರಣ:- ಸೋರಿಯಾಸಿಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣ ತಿಳಿದುಬಂದಿಲ್ಲ. ಆದರು ಹಲವಾರು ಕಾರಣಗಳಿಂದ ರೋಗ ಲಕ್ಷಣವು ಉಲ್ಬಣಿಸುತ್ತದೆ. ಆಹಾರ ಪದ್ಧತಿ ಹಾಗೂ ಸೇವಿಸುವ ಕ್ರಮ ಈ ರೋಗದಲ್ಲಿ ಪ್ರಾಮುಖ್ಯತೆ ವಹಿಸುತ್ತದೆ. ಅತಿಯಾದ ಮಾಂಸಾಹಾರ ಸೇವನೆ, ನಂಜಿನ ಪದಾರ್ಥಗಳಾದ ಬದನೆಕಾಯಿ, ಮೂಲಂಗಿ, ಮೀನು, ಮೊಟ್ಟೆ, ಹುಳಿ, ಹುರುಳಿ ಕಾಳು, ಕಫ ವೃದ್ಧಿಸುವ ಪದಾರ್ಥಗಳಾದ ಮೊಸರು, ಉದ್ದು, ವಿರುದ್ಧ ಆಹಾರ - ಉದಾ- ಮೊಸರಿನೊಟ್ಟಿಗೆ ಮೀನಿನ ಸೇವನೆ, ಜಿಡ್ಡಿನ ಪದಾರ್ಥ, ಮಾನಸಿಕ ಒತ್ತಡ, ದೇಹವನ್ನು ಅತಿಯಾಗಿ ಬಿಸಿಲಿಗೆ ಒಡ್ಡುವುದು ಪ್ರಮುಖ ಕಾರಣಗಳು.

ಆಹಾರ ಪದಾರ್ಥಗಳಾದ ಗೋಧಿ, ಹೆಸರುಕಾಳು. ಅರಿಶಿಣ, ಪಡವಲೆ­ಕಾಯಿ, ಬೇವು, ಒಂದೆಲಗ, ಬೆಳ್ಳುಳ್ಳಿ ಸೇವನೆ, ಸಮಯಕ್ಕೆ ತಕ್ಕ ಹಿತಕರ ಆಹಾರ ಸೇವನೆ, ನಿತ್ಯ ಆಭ್ಯಂಜನ ಹಾಗೂ ನಿತ್ಯ ಸ್ನಾನದಿಂದ ಈ ಚರ್ಮ­ರೋಗವನ್ನು ತಡೆಗಟ್ಟಬಹುದು. ದೀರ್ಘಕಾಲಿಕ­ವಾಗಿ ಮತ್ತೆ ಮತ್ತೆ ಕಾಡುವ ಈ ರೋಗಕ್ಕೆ ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿದ್ದು, ರೋಗದ ಪ್ರಾರಂಭಿಕ ಅವಸ್ಥೆಯಲ್ಲೆ ಚಿಕಿತ್ಸೆ ಪಡೆಯುವುದು ಉತ್ತಮ. ಆಯು­ರ್ವೇ­ದ­ದಲ್ಲಿ ಯಾವುದೇ ಅಡ್ಡಪರಿಣಾ­ಮ­ವಿಲ್ಲದೆ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದ್ದು ವಿಶೇಷವಾಗಿ ಪಂಚ­ಕರ್ಮ ಚಿಕಿತ್ಸೆ, ವ್ಯಾಧಿನಿ­ರೋಧಕ ಶಕ್ತಿಯನ್ನು ವೃದ್ಧಿಸುವ ರಸಾಯನ ಚಿಕಿತ್ಸೆ ಹಾಗೂ ಪಥ್ಯ ಆಹಾರಗಳ ಸೇವನೆ­ಯೊಂದಿಗೆ ರೋಗಿಯು ಉತ್ತಮ ಚಿಕಿತ್ಸಾ ಫಲವನ್ನು ಪಡೆ­ಯು­ವುದಲ್ಲದೆ ರೋಗದ ಪುನರುತ್ಪತ್ತಿಯನ್ನು ತಡೆಗಟ್ಟಬಹುದು.

(ಮೊಬೈಲ್ : ೯೯೬೪೦೨೨೬೫೪, ೦೮೦-೨೩೪೯೯೯೯೧)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT