ADVERTISEMENT

ದಿನ ಭವಿಷ್ಯ: ಕನಸುಗಳು ಕೈಗೂಡುವ ದಿನ ಇದಾಗಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಆಗಸ್ಟ್ 2024, 18:30 IST
Last Updated 1 ಆಗಸ್ಟ್ 2024, 18:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಮೇಧಾವಿ ಜನರೊಂದಿಗಿನ ಸಂಪರ್ಕ ಬೆಳೆಯುವುದರಿಂದ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ. ಸ್ವಾಮಿ ವೆಂಕಟೇಶನ ಒಲುಮೆಯಿಂದ ಕಷ್ಟಗಳು ಪರಿಹಾರವಾಗುವುದು. ಆಹಾರದಲ್ಲಿ ಗುಣಮಟ್ಟ , ಶುಚಿತ್ವ ಕಾಪಾಡಿ.
  • ವೃಷಭ
  • ಮರಮಟ್ಟು, ಕೃಷಿ, ಹೈನುಗಾರಿಕೆ ವೃತ್ತಿಗಳಲ್ಲಿರುವವರಿಗೆ ನಿರೀಕ್ಷಿತ ವರಮಾನ ದೊರೆಯಲಿದೆ. ಕೆಲಸವನ್ನು ಸಾಧಿಸಲು ಹೊಸ ಮಾರ್ಗ ಆರಿಸಿಕೊಳ್ಳಬೇಕಾಗುವುದು. ಕನಸುಗಳು ಕೈಗೂಡುವ ದಿನ ಇದಾಗಿದೆ.
  • ಮಿಥುನ
  • ಅಸಾಧ್ಯ ಕಾರ್ಯಗಳನ್ನು ಸಾಧಿಸಿ ತೋರಿಸುವಷ್ಟು ಮನೋಬಲ, ಛಲವನ್ನು ವೃದ್ಧಿಸಿಕೊಳ್ಳಿ. ಮನೆಯಲ್ಲಿ ನವ ಶಿಶುವಿನ ಆಗಮನದಿಂದ ಸಂಭ್ರಮ ಉಂಟಾಗುವುದು. ಆಲಂಕಾರಿಕ ವಸ್ತುಗಳ ಮಾರಾಟ ಲಾಭವನ್ನು ತರುವುದು.
  • ಕರ್ಕಾಟಕ
  • ಸುತ್ತಲಿನ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ. ಮಗಳಿಗೆ ಆತ್ಮೀಯರೊಬ್ಬರ ಸಹಾಯದಿಂದ ಉದ್ಯೋಗ ದೊರೆಯಲಿದೆ. ನ್ಯಾಯಾಂಗ ಇಲಾಖೆಯವರಿಗೆ ಬಡ್ತಿ ಅಥವಾ ವರ್ಗಾವಣೆ ಉಂಟಾಗುವುದು.
  • ಸಿಂಹ
  • ಸಂತೋಷ ಹೊಂದಿದವರಾಗಿ ಹಾಗೂ ಪ್ರೀತಿ ಪಾತ್ರರೊಂದಿಗೆ ಉತ್ತಮ ಹೊಂದಾಣಿಕೆಯಿಂದ ಇರುವಂತಾಗಲಿದೆ. ಸಹೋದ್ಯೋಗಿಗಳೊಡನೆ ಅನವಶ್ಯಕವಾದ ವಾದ-ವಿವಾದಗಳು ನಡೆಯದಂತೆ ವರ್ತಿಸಿ.
  • ಕನ್ಯಾ
  • ದಿನಸಿ ವ್ಯಾಪಾರಿಗಳು ವ್ಯಾಪಾರವನ್ನು ವಿಸ್ತರಣೆ ಮಾಡುವುದಕ್ಕಿಂತ ಗುಣಮಟ್ಟ ಕಾಪಾಡುವ ಬಗ್ಗೆ ಗಮನಹರಿಸಿ. ಜಾಹೀರಾತು ಸಂಸ್ಥೆಯ ಜನರಿಗೆ ವಿಶೇಷ ಆದಾಯ ಇರುವುದು. ಶಿಕ್ಷಕ ವರ್ಗದವರಿಗೆ ಅಧಿಕ ಕೆಲಸ .
  • ತುಲಾ
  • ಕೃತಕ ಅಂಗಾಂಗಗಳ ಕಸಿಯನ್ನು ಮಾಡಿಸಿಕೊಂಡಿರುವವರಿಗೆ ಅದರಿಂದಾಗಿ ಆರೋಗ್ಯ ತಪ್ಪುವ ಸಾಧ್ಯತೆ ಇದೆ. ಈ ದಿನ ಆಶಾದಾಯಕ. ಮನೆಯಲ್ಲಿ ಎಲ್ಲರ ಆರೋಗ್ಯ ಚೆನ್ನಾಗಿದ್ದು, ಮನಸ್ಸಿಗೆ ನೆಮ್ಮದಿ .
  • ವೃಶ್ಚಿಕ
  • ಮುಂಚೆಯೇ ನಿರ್ಧರಿಸಲಾಗಿದ್ದ ಪ್ರಯಾಣವನ್ನು ಅನಿವಾರ್ಯ ಕಾರಣಗಳಿಂದಾಗಿ ಮುಂದೂಡುವ ಅಥವಾ ಕೈಬಿಡುವ ಯೋಚನೆ ಮಾಡುವಿರಿ. ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆ ದೂರಾಗುವುದು.
  • ಧನು
  • ಜೆರಾಕ್ಸ್‌ ಅಥವಾ ಪ್ರಿಂಟಿಂಗ್‌ ಪ್ರೆಸ್‌ನವರಿಗೆ ಅತ್ಯಧಿಕ ಮಟ್ಟದ ಗ್ರಾಹಕರು ಬರುತ್ತಾರೆ. ದೇಹದಲ್ಲಿ ವಾಯು ಪೀಡೆಯು ಹೆಚ್ಚಾಗುವುದರಿಂದ ಕಿರಿಕಿರಿ ಎನಿಸಲಿದೆ. ರಸಗೊಬ್ಬರದ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ.
  • ಮಕರ
  • ಕೌಟುಂಬಿಕ ಕಲಹವನ್ನು ಬುದ್ಧಿವಂತಿಕೆ ಉಪಯೋಗಿಸಿ ತಿಳಿಗೊಳಿಸಬೇಕಾಗುತ್ತದೆ. ಮನೆ ಬದಲಾಯಿಸುವ ಯೋಚನೆ ಮಾಡಬೇಕಾಗಲಿದೆ. ಮಹಿಳೆಯರಿಗೆ ಉದ್ಯೋಗದಲ್ಲಿ ಲಾಭವಿರುತ್ತದೆ.
  • ಕುಂಭ
  • ಕುಟುಂಬದಲ್ಲಿ ಅಥವಾ ಮನೆಯಲ್ಲಿನ ನಿಮ್ಮ ಮೇಲಿನ ತಪ್ಪು ಕಲ್ಪನೆ ಹೋಗಲಾಡಿಸಿಕೊಳ್ಳುವಿರಿ. ಸಮಯವನ್ನು ವ್ಯರ್ಥ ಮಾಡದಿರಿ. ಮನೆಯ ಜವಾಬ್ದಾರಿಗಳನ್ನು ಮಗನಿಗೆ ಕೊಡುವ ಬಗ್ಗೆ ಯೋಚಿಸಿ.
  • ಮೀನ
  • ಮಕ್ಕಳ ವಿದ್ಯಾಭ್ಯಾಸದ ಬಗ್ಗೆ, ತಂದೆ-ತಾಯಿಯ ಆರೋಗ್ಯದ ಬಗ್ಗೆ ಗಮನವಹಿಸುವುದು ಅಗತ್ಯ. ವಸ್ತ್ರ ವಿನ್ಯಾಸದಲ್ಲಿ ವಿಶೇಷ ಪರಿಣತಿಯನ್ನು ಪಡೆದುಕೊಳ್ಳಬಹುದು. ಅನಿರೀಕ್ಷಿತ ಪ್ರಯಾಣದಿಂದಾಗಿ ಖರ್ಚು-ವೆಚ್ಚಗಳು ಅಧಿಕ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.