ದಿನ ಭವಿಷ್ಯ: ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 9 ಫೆಬ್ರುವರಿ 2026, 18:30 IST
Last Updated 9 ಫೆಬ್ರುವರಿ 2026, 18:30 IST
ದಿನ ಭವಿಷ್ಯ
ಮೇಷ
ಕೆಲವು ವೈಯಕ್ತಿಕ ವಿಚಾರಗಳನ್ನು ಆಪ್ತ ಮಿತ್ರರೊಬ್ಬರಲ್ಲಿ ಹೇಳಿಕೊಳ್ಳ ಬೇಕಾದ ಸಂದರ್ಭ ಬರಲಿದೆ. ಗೃಹಸೌಖ್ಯ ಉತ್ತಮವಿದ್ದು ಸಾಮಾಜಿಕವಾಗಿ ಸ್ಥಾನಮಾನ ಪ್ರಾಪ್ತಿ. ಆದಾಯವು ಸಾಕಷ್ಟು ಕೂಡಿ ಬರಲಿದೆ.
ವೃಷಭ
ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಬರುತ್ತದೆ. ಆಂಜನೇಯನ ಸೇವೆ ಮಾಡುವುದರಿಂದ ಗೊಂದಲ ನಿವಾರಣೆ. ತೆರಿಗೆ ಅಧಿಕಾರಿಗಳಿಗೆ ಉತ್ತಮವಾದ ಹೊಗಳಿಕೆಯು ಇರುವುದು.
ಮಿಥುನ
ಮಾತು ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಇರುವ ಬಗ್ಗೆ ಗಮನ ನೀಡಿ. ಕದಡಿದ ಮನಸ್ಸಿಗೆ ಸಂಜೆಯ ವೇಳೆಗೆ ತಣ್ಣನೆಯ ವಾತಾವರಣ ಸಂತೋಷ ನೀಡುತ್ತದೆ. ಎಲ್ಲರೊಂದಿಗೂ ತಾಳ್ಮೆಯಿಂದ ವರ್ತಿಸಿ.
ಕರ್ಕಾಟಕ
ಮಹಿಳೆಯರಿಗೆ ಋಣಾತ್ಮಕ ಚಿಂತನೆಯಿಂದ ಆರೋಗ್ಯ ಹಾಳಾಗಬಹುದು. ವಿದೇಶ ಪ್ರವಾಸದ ಯೋಜನೆಗಳು ಲಾಭ ನೀಡಲಿವೆ. ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ಜಾಗ್ರತೆ ವಹಿಸಿ.
ಸಿಂಹ
ಅಪರಿಚಿತ ವ್ಯಕ್ತಿಯೊಬ್ಬರು ಉತ್ತಮ ಉಪಾಯಗಳನ್ನು ಮತ್ತು ಅವರ ಅನುಭವಗಳನ್ನು ನೀಡುವುದಾಗಿ ಹೇಳಿ ದಾರಿ ತಪ್ಪಿಸುವ ಮಾರ್ಗಕ್ಕೆ ಎಳೆಯಲಿದ್ದಾರೆ. ಬುದ್ಧಿವಂತಿಕೆಯಿಂದ ಬದುಕ ಬೇಕಾದ ದಿನ.
ಕನ್ಯಾ
ಬಿಡುವಿಲ್ಲದ ಕೆಲಸದಿಂದ ಬಳಲಿದ ವಿಶ್ರಾಂತಿಗೆ ಸೂಕ್ತ ಸಮಯ ಸಿಗುವುದು. ಯಾವುದೇ ಉದ್ವೇಗಕ್ಕೆ ಒಳಗಾಗದೆ ಹೊಸ ಸ್ಫೂರ್ತಿಯಿಂದ ಗೃಹಕಾರ್ಯ ನಿರ್ವಹಿಸುವಿರಿ. ಯೋಗಾಭ್ಯಾಸ ಮನಸ್ಸಿಗೆ ಹಿತವೆನಿಸುವುದು.
ತುಲಾ
ತೆರೆಮರೆಯಲ್ಲಿ ನಡೆಸಿದ ಕೆಲಸಗಳಿಂದ ಅಧಿಕಾರವನ್ನು ಪಡೆದುಕೊಳ್ಳುವಿರಿ. ಆಫೀಸಿನ ಕೆಲಸಗಳನ್ನು ಮಾಡಿ ಮುಗಿಸುವಲ್ಲಿ ಆತುರ ತೋರುವುದು ಸರಿಯಲ್ಲ. ರಾಜಕೀಯದಲ್ಲಿನ ಬದಲಾವಣೆಯ ಲಾಭ ಪಡೆಯುವಿರಿ.
ವೃಶ್ಚಿಕ
ಮಕ್ಕಳು ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸಿ ತಿಳಿ ಹೇಳಿ, ಈ ದಿನ ಮಕ್ಕಳನ್ನು ಶಿಕ್ಷಿಸಬೇಡಿ. ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪುನಃ ಪುನಃ ಪಾಠ ಕಲಿಯುವಂತಾಗಲಿದೆ.
ಧನು
ಭಾವನಾ ಪ್ರಪಂಚ ಈ ದಿನ ನಿಮ್ಮನ್ನು ಮತ್ತೆ ಮತ್ತೆ ಸೆಳೆಯುತ್ತದೆ. ಮನೆ ಕಟ್ಟುವ ಸಲುವಾಗಿ ಹಣಕಾಸಿನ ವ್ಯವಸ್ಥೆಯಲ್ಲಿ ತಂದೆಗೆ ಸಹಕರಿಸುವಿರಿ. ಜನರ ಸಂಪರ್ಕ ಬೆಳೆಸಿಕೊಳ್ಳುವುದನ್ನು ಅಭ್ಯಾಸಮಾಡಿ.
ಮಕರ
ಕೆಲಸ ಆರಂಭಿಸುವ ಮುನ್ನ ಆಮೂಲಾಗ್ರ ಚಿಂತನೆ ಅಗತ್ಯ ಎಂಬುದು ತಿಳಿದು ಬಂದಿದೆ. ವಿವಾಹದ ವಿಚಾರದಲ್ಲಿ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ. ಅಧಿಕ ಹೊತ್ತು ವಿಶ್ರಾಂತಿ ಬೇಕೆನಿಸಲಿದೆ.
ಕುಂಭ
ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕಗಳು ಇರುವುದಿಲ್ಲ. ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ.
ಮೀನ
ಗಡಿಬಿಡಿಯ ಸ್ವಭಾವದಿಂದಾಗಿ ಕಂಪನಿಯಲ್ಲಿ ಉಂಟಾದ ತಪ್ಪುಗಳಿಗೆ ನೇರ ಹೊಣೆಗಾರಿಕೆ ಇರುತ್ತದೆ. ಕಲಾವಿದರು ಅದರಲ್ಲೂ ಸಂಗೀತ ಕಲಾವಿದರಿಗೆ ಸಿಕ್ಕ ಅವಕಾಶವನ್ನು ತಿರಸ್ಕರಿಸಬೇಡಿ.