ADVERTISEMENT

ದಿನ ಭವಿಷ್ಯ: ಈ ರಾಶಿಯ ವರ್ತಕರಿಗೆ ಶ್ರಮಕ್ಕೆ ತಕ್ಕ ಫಲ ದೊರಕಲಿದೆ..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 10 ಆಗಸ್ಟ್ 2025, 23:30 IST
Last Updated 10 ಆಗಸ್ಟ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಜವಾಬ್ದಾರಿಯುತ ಸ್ಥಾನದಲ್ಲಿರುವ ನೀವು ಕೆಲಸವನ್ನು ನಿರ್ಲಕ್ಷಿಸುವುದು ಸರಿಯಲ್ಲ.  ಕೆಲಸದ ಹೊರೆ  ಕಡಿಮೆ ಮಾಡಿಕೊಳ್ಳಲು ಅನ್ಯರಿಗೆ ಜವಾಬ್ದಾರಿ  ಹಂಚಬೇಡಿ. ಕರ್ತವ್ಯದಲ್ಲಿ ಲೋಪ ಬೇಡ.
  • ವೃಷಭ
  • ಯಾರದ್ದೋ ಮಾತು ಕೇಳಿ ಸಣ್ಣ ಪುಟ್ಟ ಅನಾರೋಗ್ಯವನ್ನು ನಿವಾರಿಸಿಕೊಳ್ಳಲು  ಸ್ವ ಔಷಧಗಳನ್ನು ಮಾಡಿಕೊಳ್ಳಬೇಡಿ. ಸದ್ಗುರುವಿನ ಮಾತುಗಳನ್ನು ಪಾಲಿಸಿದ ದಿನಗಳನ್ನು ಮತ್ತೆ ನೆನೆಯುವಿರಿ.
  • ಮಿಥುನ
  • ಮನೆಯ ಪ್ರಶಾಂತತೆ ಕಾಪಾಡಿಕೊಂಡು ಉತ್ತಮ ಕಾರ್ಯಗಳಿಂದ ಅಭಿವೃದ್ಧಿಯ ಪಥದಲ್ಲಿ ಸಾಗಿ. ಇಷ್ಟದ ತಿಂಡಿ ತಿನಿಸುಗಳೊಂದಿಗೆ ದಿನ ಕಳೆಯುವಿರಿ.
  • ಕರ್ಕಾಟಕ
  • ಜನವಾಣಿಗೆ ಸ್ಪಂದಿಸುವ ರಾಜಕಾರಣಿಗಳಿಗೆ ಹಿಂಬಾಲಕರ ಬೆಂಬಲ ಹೆಚ್ಚಾಗಿ ಸಿಗಲಿದೆ. ಮೈದುನನ ಸಹಾಯದಿಂದ ತವರು ಮನೆಯ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಬೆಂಕಿಯ ಬಗ್ಗೆ ಜಾಗ್ರತೆಯಿಂದಿರಿ.
  • ಸಿಂಹ
  • ವಿಶೇಷ ಸಂಗತಿಗಳನ್ನು ಬೇರೆಯವರಿಗೆ ತಿಳಿಸಿ ಆಶ್ಚರ್ಯ ಪಡುವುದರಲ್ಲಿ ಖುಷಿ ಪಡಿ. ಹೊಸ ವ್ಯವಹಾರವೊಂದರ ಪ್ರಾರಂಭಕ್ಕೆ ಬೇಕಾದ ಮಾಹಿತಿಗಳ ಸಂಗ್ರಹ  ನಡೆಯುವುದು.
  • ಕನ್ಯಾ
  • ದಿನಸಿ ವರ್ತಕರಿಗೆ ವೃತ್ತಿರಂಗದಲ್ಲಿ ಅಭಿವೃದ್ಧಿಯ ಲಕ್ಷಣಗಳಿವೆ. ನಿವೇಶನ ಖರೀದಿಗೆ ಸ್ಥಳದ ಹುಡುಕಾಟ ನಡೆಸುವವರು ವಾಸ್ತುವಿನ ಬಗ್ಗೆ ಗಮನ ನೀಡಿ. ನಂಬಿಕೆ ದ್ರೋಹದಿಂದ ಲೇವಾದೇವಿ ವ್ಯವಹಾರಕ್ಕೆ ತಡೆ ಉಂಟಾಗಬಹುದು.
  • ತುಲಾ
  • ಒಂದೇ ಸಂಸ್ಥೆಯಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದವರಿಗೆ ಬಡ್ತಿ ಸಿಗುವ ಅವಕಾಶವಿದೆ. ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರುವುದು. ನಿರಂತರ ಚಟುವಟಿಕೆಯಿಂದ ದೇಹಾಲಸ್ಯವನ್ನು ಹೋಗಲಾಡಿಸಿಕೊಳ್ಳಿ.
  • ವೃಶ್ಚಿಕ
  • ಹೊಸದಾಗಿ ಆರಂಭಿಸಿದ ಭೂ ವ್ಯವಹಾರದಲ್ಲಿ ಲಾಭ ದೊರೆತು ಸಂತೋಷ ತರಲಿದೆ. ರೈತಾಪಿ ವರ್ಗದವರು ವೃತ್ತಿ ಬದುಕಿನಲ್ಲಿ ನೆರೆಯವರಿಂದ ಸಹಕಾರ ಕೇಳುವುದು ಅನಿವಾರ್ಯ. ಕ್ರೀಡಾಪಟುಗಳಿಗೆ ಜಯ ಸಿಗುವುದು.
  • ಧನು
  • ಇಚ್ಚೆಯಂತೆ ಇರಲು ಬಯಸುವವರು ನಿಯಮವನ್ನು ಅನುಸರಿಸಿ. ಸರ್ಕಾರಿ ಅಧಿಕಾರಿ ವರ್ಗದವರಿಗೆ ಸ್ಥಳ ಬದಲಾವಣೆ ಸಂಭವ ಇರುವುದು. ವರ್ತಕರಿಗೆ ಶ್ರಮಕ್ಕೆ ತಕ್ಕ ಫಲ ದೊರಕಲಿದೆ.
  • ಮಕರ
  • ಪ್ರೇಮಿಗಳಿಗೆ ಹಿರಿಯರಿಂದ ಒಪ್ಪಿಗೆ ದೊರೆತು ನಿಟ್ಟುಸಿರು ಬಿಟ್ಟಂತೆ ಆಗುವುದು. ನಿರುದ್ಯೋಗಿಗಳಿಗೆ ಕೆಲಸ ಸಿಗುವ ಲಕ್ಷಣವಿದೆ. ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಗಳು ರಕ್ಷಣೆಯ ಬಗ್ಗೆ  ಗಮನವಹಿಸಬೇಕಾಗುವುದು.
  • ಕುಂಭ
  • ಆರೋಗ್ಯದಲ್ಲಿನ ವ್ಯತ್ಯಾಸಕ್ಕೆ ನಿದ್ರಾಭಂಗವೇ ಮೂಲ ಕಾರಣವಾಗುವುದು. ಮೃದು ಹಾಗೂ ಸ್ನಿಗ್ಧವಾದ ಮನಸ್ಸನ್ನು ಹೊಂದಿರುವಂಥವರಿಗೆ ನುಡಿಯುವ ಎಲ್ಲಾ ಮಾತುಗಳು ಚುಚ್ಚಿದಂತಾಗುತ್ತದೆ.
  • ಮೀನ
  • ಉತ್ತಮ ನೆನಪಿನ ಶಕ್ತಿಯು  ಕೆಲಸಗಳಲ್ಲಿ ಅತ್ಯಂತ ಸಹಾಯಕಾರಿ. ಸಂದಿಗ್ಧ ಪರಿಸ್ಥಿತಿಯಲ್ಲಿರುವ ನೀವು ಪರಿಸ್ಥಿತಿಯನ್ನು ಅವಲೋಕಿಸಿ ಇಷ್ಟದೇವರನ್ನು ಪ್ರಾರ್ಥಿಸಿ ತೀರ್ಮಾನ ಕೈಗೊಳ್ಳಿ. 
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.