ADVERTISEMENT

ದಿನ ಭವಿಷ್ಯ: ಈ ರಾಶಿಯವರು ವಂಶಪಾರಂಪರ್ಯವಾಗಿ ಬಂದ ಉದ್ಯೋಗದಲ್ಲಿ ಏಳಿಗೆ ಕಾಣುವಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 11 ಆಗಸ್ಟ್ 2025, 23:30 IST
Last Updated 11 ಆಗಸ್ಟ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿರಂತರ ಕೆಲಸ ಕಾರ್ಯಗಳ ಮಧ್ಯೆ ಸ್ವಲ್ಪಮಟ್ಟಿನ ಬಿಡುವು ಆರಾಮವೆನಿಸುವುದು. ಕಚೇರಿಯಲ್ಲಿ ಎಲ್ಲರೊಂದಿಗೆ ಸಂತೋಷವಾಗಿರಿ. ರಚನಾತ್ಮಕ ಕೆಲಸಗಳಿಗೆ ಪ್ರಾಶಸ್ತ್ಯ ಕೊಡುವುದರಿಂದ ಸಂತಸ.
  • ವೃಷಭ
  • ಅನಿವಾರ್ಯವಾಗಿ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರೂ  ಸುಲಭವಾಗಿ ನಡೆಯುವುದಿಲ್ಲ. ಮೊದಲ ಆದ್ಯತೆ  ವೃತ್ತಿಪರ ಕೆಲಸಗಳ ಬಗೆಗೆ ಮಾತ್ರ ಇರಲಿ.
  • ಮಿಥುನ
  • ಲಾಭದಾಯಕ ಎನಿಸುವ ಕೆಲಸ ಅಥವಾ ವ್ಯಕ್ತಿಗಳೊಂದಿಗೆ ಮಾತ್ರ  ವ್ಯವಹರಿಸಿದ ಪರಿಣಾಮ ಪಶ್ಚಾತಾಪ ಪಡುವಂತಾಗುವುದು. ಅಸಹಕಾರ, ಏಕಾಂಗಿತನ  ಕಾಡಬಹುದು. ಶ್ರೀರಾಮನ ಆರಾಧನೆ ಮಂಗಳಕರ.
  • ಕರ್ಕಾಟಕ
  • ಹಣದ ಮುಗ್ಗಟ್ಟು ತೀವ್ರವಾಗುವುದು. ಅಧಿಕಾರಸ್ಥರು ಹಿರಿಯ ನೌಕರರ ಜತೆ ಸ್ನೇಹ ಸಂಬಂಧ ಹೆಚ್ಚಾಗಿ ಬೆಳೆದು ವೃತ್ತಿಯಲ್ಲಿ ನವ ಉಲ್ಲಾಸ ಮೂಡಲಿದೆ. ಕುಲದೇವರ ಪ್ರಾರ್ಥನೆಯು ಶುಭತರುವುದು.
  • ಸಿಂಹ
  • ಮಾತಿನ ಚತುರತೆಯಿಂದ ಎಲ್ಲಾ ಕೆಲಸಗಳು ಸರಾಗವಾಗಿ ನೆರವೇರಲಿವೆ. ಪದವೀಧರರಿಗೆ ಉನ್ನತ ಶಿಕ್ಷಣಕ್ಕಾಗಿ ಉತ್ತಮ ಸ್ಥಳ ಲಭಿಸಲಿದೆ. ಅಧ್ಯಯನಕ್ಕೆ ಪ್ರೋತ್ಸಾಹ ದೊರೆಯಲಿದೆ. ಶ್ರೀ ದುರ್ಗಾದೇವಿಯನ್ನು ಭಜಿಸಿ.
  • ಕನ್ಯಾ
  • ವಂಶಪಾರಂಪರ್ಯವಾಗಿ ಬಂದ  ಉದ್ಯೋಗದಲ್ಲಿ ಏಳಿಗೆ ಕಾಣುವಿರಿ. ಉನ್ನತ ಪೊಲೀಸ್ ಅಧಿಕಾರಿಗಳಿಗೆ ಸಂತಸದ ಸುದ್ದಿ ಇರುವುದು. ಸ್ವಪ್ರಯತ್ನದಿಂದ ಕೆಲಸಗಳನ್ನು ಸಾಧಿಸಿಕೊಂಡ ಸಂತಸ ಇರಲಿದೆ.
  • ತುಲಾ
  • ದೈಹಿಕವಾಗಿ ಬಲಾಢ್ಯರಾಗಿರುವ ನಿಮಗೆ ಮಾನಸಿಕವಾಗಿ ಬಹಳ ದೊಡ್ಡ ಹೊಡೆತ ಬೀಳುವ ಸಂಭವವಿದೆ. ವಾಣಿಜ್ಯ ಅಥವಾ ಆರ್ಥಿಕ ಒಪ್ಪಂದಗಳು ಏರ್ಪಡಲಿವೆ. ರಾಜಕೀಯ ವ್ಯಕ್ತಿಗಳಿಂದ ಕಾರ್ಯ ಸಾಧಿಸಿಕೊಳ್ಳುವುದು ಕಷ್ಟ.
  • ವೃಶ್ಚಿಕ
  • ಜೀವನದ ಶೈಲಿಯಲ್ಲಿ ಬದಲಾವಣೆಯ ಗಾಳಿ ಬೀಸಲು ಆರಂಭಿಸಲಿದೆ.  ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿಯೇ ಇರುತ್ತದೆ. ಯಾವುದೇ ಸಂಶಯಬೇಡ. ಇಂದಿನ ಎಲ್ಲಾ ಘಟನೆಗಳು ಶುಭಕರ.
  • ಧನು
  • ಅನಾರೋಗ್ಯದಿಂದ ಬಳಲಿದ ನೀವು ಇಂದಿನಿಂದ ಚೇತರಿಕೆ ಕಾಣುವಿರಿ, ಮತ್ತೊಬ್ಬರ ಮೇಲೆ ಅವಲಂಬನೆ ಬೇಡವೆನಿಸುತ್ತದೆ.  ಕೆಲಸ ಮಾಡುತ್ತಿರುವ ಜಾಗದಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ. ಕೂಡಲೇ ಬಗೆಹರಿಸಿಕೊಳ್ಳಿರಿ.
  • ಮಕರ
  • ಸಾಧ್ಯವಾದಷ್ಟು ಶಾಂತಿಯಿಂದ ಕೆಲಸವನ್ನು ಸಾಧಿಸಿ. ಕುಟುಂಬ ಸದಸ್ಯರ ಅಭಿಪ್ರಾಯಗಳ ಬಗ್ಗೆ ಚಿಂತಿಸಿ ನಂತರ ಮನ್ನಣೆ ನೀಡಿ. ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಫಲಿತಾಂಶ ದೊರೆಯಲಿದೆ.
  • ಕುಂಭ
  • ಸೋಲು ನಿಮ್ಮನ್ನು ಬಾಧಿಸುತ್ತಿದ್ದರೂ ಅಂಜದೆ ಮುನ್ನುಗ್ಗಿದರೆ ಮಾತ್ರ ಜಯದ ದಾರಿ ಕಾಣುವುದು. ಪ್ರಯತ್ನದಲ್ಲಿ ಕೊರತೆ ಬೇಡ. ವಿದ್ಯಾರ್ಥಿಗಳು  ವಿದ್ಯಾಭ್ಯಾಸದಲ್ಲಿ ಗಮನಹರಿಸಬೇಕು.
  • ಮೀನ
  • ನಿರುದ್ಯೋಗಿಗಳು ಬಂದ ಅವಕಾಶವನ್ನು ಒಪ್ಪಿಕೊಳ್ಳುವುದು ಸದ್ಯದ ಪರಿಸ್ಥಿತಿಗೆ ಉತ್ತಮವಾಗಿ ಕಾಣುತ್ತದೆ. ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿವೆ. ಷೇರು ವ್ಯವಹಾರಗಳಲ್ಲಿ ಹೆಚ್ಚು ಹಣ ತೊಡಗಿಸಬಹುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.