ADVERTISEMENT

ದಿನ ಭವಿಷ್ಯ: ಈ ರಾಶಿಯವರು ಧರ್ಮ ವಿರುದ್ಧ ಕಾರ್ಯಗಳನ್ನು ಮಾಡದಿರಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 15 ಜುಲೈ 2024, 21:05 IST
Last Updated 15 ಜುಲೈ 2024, 21:05 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ನಿನ್ನೆಯ ಭೂರಿ ಭೋಜನದ ಸಲುವಾಗಿ ಅಜೀರ್ಣ ಮೊದಲಾದ ಸಮಸ್ಯೆಗಳನ್ನು ಎದುರಿಸುವಿರಿ. ನಿಮ್ಮ ವ್ಯವಹಾರಗಳ ಬಗ್ಗೆ ನೀವೇ ಹೆಚ್ಚಿನ ಗಮನ ಹರಿಸುವುದು ಸರಿ ಎನಿಸಲಿದೆ. ಧರ್ಮ ವಿರುದ್ಧ ಕಾರ್ಯಗಳನ್ನು ಮಾಡದಿರಿ.
  • ವೃಷಭ
  • ಆಯಾ ಋತುವಿನಲ್ಲಿ ಸಿಗುವ ಆಹಾರಗಳನ್ನು ಸಿದ್ಧ ಪಡಿಸಿ ಮಾರಾಟ ಮಾಡುವವರು ದೊಡ್ಡ ಮಟ್ಟದಲ್ಲಿ ಉದ್ಯೋಗವನ್ನು ಶುರುಮಾಡುವಿರಿ. ಹಿರಿಯರ ಮಾತಿನಂತೆ ನಡೆದುಕೊಳ್ಳುವುದರಿಂದ ಶುಭವಾಗುತ್ತದೆ.
  • ಮಿಥುನ
  • ನ್ಯಾಯವಾದಿಗಳಿಗೆ ಉತ್ತಮ ದಿನ, ಜಯ ಸಾಧಿಸುವ ಬಗ್ಗೆ ಉತ್ತಮವಾದ ಅಂಶ ಸಿಗಲಿದೆ. ಮನೆಯ ಪರಿಸ್ಥಿತಿ ಸುಧಾರಣೆ. ಹಣಕಾಸಿನ ಬಗ್ಗೆ ಚಿಂತಿಸಬೇಕಾಗಿಲ್ಲ. ವಾಸ್ತು ಶಿಲ್ಪದ ವಿದ್ಯಾರ್ಥಿಗಳಿಗೆ ಉತ್ತಮ ಬೇಡಿಕೆ ಬರಲಿದೆ.
  • ಕರ್ಕಾಟಕ
  • ಮನೆಯಲ್ಲಿ ನೆಡೆಯಬೇಕಾದ ಮಂಗಳ ಕಾರ್ಯದ ಕುರಿತು ಹಿರಿಯೊರೊಂದಿಗೆ ಹೆಚ್ಚಿನ ಸಮಾಲೋಚನೆ ನಡೆಸುವಿರಿ, ವ್ಯವಸ್ಥಿತವಾಗಿ ನೆಡೆಯುವುದು. ಸರಕಾರಿ ಅಧಿಕಾರಿಗಳಿಗೆ ಕೆಲಸದ ಒತ್ತಡ ಕಡಿಮೆಯಾಗಲಿದೆ.
  • ಸಿಂಹ
  • ಎಲ್ಲಾ ಕಾರ್ಯಗಳನ್ನು ಸಫಲತೆಗೆ ಮಾರ್ಪಡಿಸುವತ್ತ ಪ್ರಯತ್ನಿಸಬೇಕು, ಅದರಿಂದಾಗಿ ಒಂದು ರೀತಿಯ ಸ್ಪರ್ಧಾತ್ಮಕ ವಾತಾವರಣ ಇರಲಿದೆ. ಕೃಷಿಕರಿಗೆ ತೋಟದ, ಹೊಲದ ಕೆಲಸಗಳು ಸರಾಗವಾಗಿ ನೆಡೆಯುವಂತಾಗಲಿದೆ.
  • ಕನ್ಯಾ
  • ಊರಿನ ರಾಜಕಾರಣದ ವಿಷಯಗಳಲ್ಲಿ ಹೆಚ್ಚು ಸಮಯ ಕಳೆಯುವಂತಾ ಗುವುದು. ಮನೆ ದೇವರ ದರ್ಶನ, ಸೇವೆಗಳಿಂದ ಮಂಗಳ ಪ್ರದವಾಗಲಿದೆ. ಆರೋಗ್ಯದಲ್ಲಿ ಉತ್ತಮವಾದ ಸುಧಾರಣೆ ತೋರುವುದು.
  • ತುಲಾ
  • ಮುಂದಿನ ಗುರಿ ಸಾಧನೆಗೆ ಇಂದು ಅತಿ ಮುಖ್ಯವಾದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಖಾದ್ಯ ತೈಲಗಳ ಮಾರಾಟ ಉತ್ತಮವಾಗಿದ್ದು, ಲಾಭಾಂಶ ಹೆಚ್ಚುವುದು. ಸಣ್ಣ ಮಕ್ಕಳಿಂದಾಗಿ ಮರ್ಯಾದೆ ಹೋಗಬಹುದು.
  • ವೃಶ್ಚಿಕ
  • ಮಾಡುವ ವೃತ್ತಿಯ ಬಗ್ಗೆ ಅಧ್ಯಯನ ನಡೆಸುವ ಅಥವಾ ಹೆಚ್ಚಿನ ಮಾಹಿತಿಯನ್ನು ಕಲೆಹಾಕಬೇಕಾಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬರಲಿದೆ. ದಾಂಪತ್ಯದಲ್ಲಿ ಬಿರುಕು ಬರದಂತೆ ನೋಡಿಕೊಳ್ಳಿ.
  • ಧನು
  • ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕುವುದರಿಂದ ಮಾರ್ಗಮಧ್ಯದ ಅಡೆತಡೆಗಳು ನಿವಾರಣೆಯಾಗಲಿವೆ. ಸಮಾಜದಲ್ಲಿ ಬದಲಾವಣೆ ತರಲು ಕ್ರಾಂತಿಕಾರಿ ನಡೆಯೊಂದನ್ನು ಕೈಗೊಳ್ಳುವಿರಿ.
  • ಮಕರ
  • ಕೆಲ ದಿನಗಳ ಹಿಂದಿನ ತೀರ್ಮಾನ ಸರಿಯಾದುದೇ ಎಂಬುದರ ಬಗ್ಗೆ ಇಂದು ಆಲೋಚಿಸಿ ಮುಂದಿನ ಉತ್ತಮವಾದ ತೀರ್ಮಾನವನ್ನು ತೆಗೆದುಕೊ ಳ್ಳಬೇಕಾಗುವುದು. ಆಧ್ಯಾತ್ಮಿಕ ವಿಷಯಗಳತ್ತ ನಿಮ್ಮ ಮನಸ್ಸು ಹೊರಳುವುದು.
  • ಕುಂಭ
  • ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳುವ ಉಪಾಯವನ್ನು ಆಪ್ತರು ತಿಳಿಸಿಕೊಡುವರು. ವಕೀಲರು, ನ್ಯಾಯಾಂಗ ಇಲಾಖಾ ಅಧಿಕಾರಿಗಳಿಗೆ ಹೆಚ್ಚಿನ ಪ್ರಗತಿ. ಭೋಜನದ ಸಮಯವು ಹೆಚ್ಚು ಕಡಿಮೆ ಆಗುತ್ತದೆ.
  • ಮೀನ
  • ನೂತನ ಮನೆ ನಿರ್ಮಾಣದಲ್ಲಿರುವ ಸಹೋದರರಿಗೆ ಸಹಾಯ ಹಸ್ತ ನೀಡುವ ಮನಸ್ಸಾಗುವುದು. ಯೋಗ ಪಟುಗಳಿಗೆ ದೊಡ್ಡ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಮಾಡುವ ಅವಕಾಶ ದೊರೆಯುವ ಸಾಧ್ಯತೆಗಳಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.