ADVERTISEMENT

ದಿನ ಭವಿಷ್ಯ: ಪ್ರೇಮಿಗಳ ಪಾಲಿಗೆ ಈ ದಿನ ಅತ್ಯುತ್ತಮವಾಗಿರುವುದು..

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 16 ಆಗಸ್ಟ್ 2025, 23:30 IST
Last Updated 16 ಆಗಸ್ಟ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿಮ್ಮ ನಿರ್ಧಾರಗಳು ನಿಮ್ಮ ಏಕಾಂಗಿತನಕ್ಕೆ ಕಾರಣವಾಗುವುದು. ವಾಯು ಪ್ರಕೋಪದಿಂದ ದೈಹಿಕವಾಗಿ ಹಲವು ಸಮಸ್ಯೆಗಳು ಕಾಡಬಹುದು. ತಾಯಿಯ ಆರೋಗ್ಯ ಸುಧಾರಿಸಲು ಧಾರ್ಮಿಕ ಕಾರ್ಯವನ್ನು ಮಾಡಿ
  • ವೃಷಭ
  • ಚಲನಚಿತ್ರ ಹಾಗೂ ಧಾರವಾಹಿಗಳಲ್ಲಿ ಬರುವ ಸನ್ನಿವೇಶಗಳನ್ನು ನಿಮ್ಮ ನಿಜ ಜೀವನದಲ್ಲಿ ಕಲ್ಪಿಸಿಕೊಳ್ಳಬೇಡಿ. ಪ್ರೇಮಿಗಳ ಪಾಲಿಗೆ ಈ ದಿನ ಅತ್ಯುತ್ತಮವಾಗಿರುವುದು. ನಿಮ್ಮ ಸಾಧನೆಗಳ ಬಗ್ಗೆ ನಿಮಗೆ ಹೆಮ್ಮೆ ಎನಿಸುವುದು.
  • ಮಿಥುನ
  • ಸಂಧಾನ ಅಥವಾ ಕರಾರು ಒಪ್ಪಂದಗಳು ನಿಮಗೆ ಅನುಕೂಲಕರವೆನಿಸಲಿದೆ. ಬಯಕೆಗಳು ಈಡೇರುವುದು. ಶನೈಶ್ಚರನ ಆರಾಧನೆಯಿಂದ ಜಟಿಲ ಸಮಸ್ಯೆಯು ಇತ್ಯರ್ಥಗೊಂಡು ಪ್ರತಿವಾದಿಗಳು ನಿರುತ್ತರರಾಗುವರು.
  • ಕರ್ಕಾಟಕ
  • ಸಾರಿಗೆ ಉದ್ಯೋಗ, ಸಂಪಾದನೆಗೆ ನೂತನವಾಗಿ ತೊಡಗುವವರಿಗೆ ಈ ಸಮಯ ಅಭಿವೃದ್ಧಿದಾಯಕ. ತಂದೆಯ ಕಣ್ಣಿನ ಚಿಕಿತ್ಸೆ ಫಲಕಾರಿಯಾಗಲಿದೆ. ಧಾನ್ಯ ಬೆಳೆಗಳ ಮಾರಾಟದಿಂದ ಲಾಭವಿರುವುದು.
  • ಸಿಂಹ
  • ದಾಂಪತ್ಯ ಜೀವನದಲ್ಲಿ ಬಂದಿರುವ ಬಿರುಕನ್ನು ಸರಿಮಾಡಿಕೊಳ್ಳಲು ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಗುರು ಅನುಗ್ರಹ ಉತ್ತಮವಿರುವುದರಿಂದ ಕೆಲಸಕಾರ್ಯಗಳು ಸರಾಗವಾಗಿ ನಡೆಯಲಿದೆ.
  • ಕನ್ಯಾ
  • ನಿಮ್ಮ ಮನೆಯ ಕೆಲಸಗಾರರು ನಿಮಗಾಗಿ ಶ್ರಮಿಸುವುದರಿಂದ ಅವರನ್ನು ಗೌರವದಿಂದ ಕಾಣುವುದು ಸೂಕ್ತ. ಇಂದು ನೀವಾಡುವ ಮಾತು ಬಹಳ ಮುಖ್ಯವಾಗಿರುವುದರಿಂದ ಕಡಿಮೆ ಹಾಗೂ ತೂಕದ ಮಾತನಾಡಿ.
  • ತುಲಾ
  • ಎಲ್ಲರೊಂದಿಗೆ ಬೆರೆಯುವ ಭಾವ ಹೆಚ್ಚುವುದು. ವ್ಯವಹಾರಗಳನ್ನು ವ್ಯವಸ್ಥಿತಗೊಳಿಸಲು ಸರಿಯಾದ ಸಮಯ. ಜೀವನದಲ್ಲಿ ಭದ್ರತೆ ಒದಗಿ ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ. ಜಗನ್ಮಾತೆಯನ್ನು ಆರಾಧಿಸಿ ಶುಭವಾಗುವುದು.
  • ವೃಶ್ಚಿಕ
  • ಎಲ್ಲ ದಾರಿಗಳೂ ಸುಗಮ ಎನಿಸಿ, ಕಷ್ಟಗಳೂ ನಿವಾರಣೆಯಾಗಲಿವೆ. ಕೆಲಸಗಳನ್ನು ಮುಂದುಹಾಕದೆ ಪೂರ್ಣಗೊಳಿಸಲು ಪ್ರಯತ್ನಿಸಿ. ಮಿತ್ರರ ಸಹಕಾರದಿಂದ ಮತ್ತು ಅವರ ಚಾಣಾಕ್ಷ ವರ್ತನೆಯಿಂದ ವ್ಯಾಪಾರದಲ್ಲಿ ಪ್ರಗತಿ.
  • ಧನು
  • ರಾತ್ರಿ ಅನಿವಾರ್ಯ ಕಾರಣಗಳಿಂದ ಆದ ನಿದ್ರಾಹೀನತೆಯು ಕೆಲಸದ ಸಮಯದಲ್ಲಿ ಬಹಳ ಕಾಡುವ ಸಂಭವವಿದೆ. ಯಾವ ಪರಿಸ್ಥಿತಿಯಲ್ಲಿಯೂ ಧೈರ್ಯಗೆಡುವುದು ಸರಿಯಲ್ಲ. ಸ್ವಂತ ವಿಚಾರಕ್ಕೆ ಜಿಪುಣರ ರೀತಿ ವರ್ತಿಸಬೇಡಿ.
  • ಮಕರ
  • ದಿನಗೂಲಿ ಲೆಕ್ಕದಲ್ಲಿ ದುಡಿಮೆ ಮಾಡುತ್ತಿರುವವರಿಗೆ ಜೀವನದಲ್ಲಿ ಅಸ್ಥಿರತೆ ಕಾಡಲು ಶುರುವಾಗುತ್ತದೆ. ನೀವು ತೆಗೆದುಕೊಳ್ಳುವ ಆಹಾರದ ವಿಚಾರವಾಗಿ ನಿರ್ಲಕ್ಷ್ಯವು ಆರೋಗ್ಯಕ್ಕೆ ಒಳ್ಳೆಯದಲ್ಲ.
  • ಕುಂಭ
  • ಚರ್ಮ ಸಂಬಂಧಿ ಕಾಯಿಲೆಗಳಿದ್ದಲ್ಲಿ ಆಯುರ್ವೇದ , ನಾಟಿ ಚಿಕಿತ್ಸೆ ಪರಿಣಾಮಕಾರಿಯಾಗಿ ಕಾಣುತ್ತದೆ. ಮಗಳ ಶಿಫಾರಸ್ಸಿನ ಮೇಲೆ ಖರೀದಿಸಿದ ಆಸ್ತಿಯು ಲಾಭದಾಯಕವಾದದ್ದು ಎಂದು ಮನವರಿಕೆಯಾಗುತ್ತದೆ.
  • ಮೀನ
  • ಬರಹಗಾರರಿಗೆ ಉತ್ತೇಜನ, ಪ್ರಕಾಶಕರಿಂದ ಪ್ರಶಂಸೆ ಜೊತೆಗೆ ಹೊಸ ಪ್ರಕಟನೆಗಾಗಿ ಸಮಾಲೋಚನೆ ನಡೆಸುವರು. ಆಮದು ಹಾಗೂ ರಫ್ತು ವ್ಯಾಪಾರಸ್ಥರಿಗೆ ಕೆಲವೊಂದು ನಿಯಮಗಳ ಸಡಿಲಿಕೆಯಿಂದ ಹೆಚ್ಚಿನ ವಹಿವಾಟು ಸಾಧ್ಯ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.