ನಿಶ್ಚಿತ ಗುರಿ ಸಾಧಿಸಲು ಬಹಳ ಶ್ರಮಪಡಬೇಕಾಗಿಲ್ಲ. ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅತ್ಯಗತ್ಯ
ವೃಷಭ
ಯಂತ್ರೋಪಕರಣಗಳ ಮಾರಾಟ, ಪಶು ಸಂಗೋಪನೆಯಿಂದ ಹೆಚ್ಚಿನ ಲಾಭ. ಜೀವನದ ಅಭಿವೃದ್ಧಿಗೆ ಬೇಕಾದ ಕಾರ್ಯ ಮುಂದುವರಿಯಲಿದೆ. ಕೆಲಸದ ಅನ್ವೇಷಣೆಯಲ್ಲಿರುವವರಿಗೆ ಶುಭ ಫಲಗಳು ಲಭಿಸುವುದು.
ಮಿಥುನ
ಸ್ವಯಂ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲವಿರುವುದು. ರಾಜಕೀಯ ವಿಷಯಗಳಲ್ಲಿ ಮೌನ ವಹಿಸುವುದು ಅತ್ಯಂತ ಲೇಸು. ಉದ್ವೇಗಕ್ಕೆ ಒಳಗಾಗದಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗುವುದು.
ಕರ್ಕಾಟಕ
ಮನೆಯಲ್ಲಿ ಅಹಿತಕರ ಘಟನೆ ನಡೆಯುವ ಸೂಚನೆ ಕಾಣಿಸಬಹುದು. ತಾಳ್ಮೆಯಿಂದ ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ದುರ್ಗಾಪರಮೇಶ್ವರಿಯ ಆರಾಧನೆಯು ನಿಮಗೆ ಶಾಂತಿದಾಯಕವಾಗಿರುತ್ತದೆ.
ಸಿಂಹ
ಆರ್ಥಿಕತೆ ಮತ್ತು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ನೆಮ್ಮದಿಯನ್ನು ನೀವು ಈ ದಿನ ಅಪೇಕ್ಷಿಸಬಹುದು. ಶನಿಯು ಪ್ರವಾಸದಿಂದ ಪ್ರಯಾಸ ಪಡಿಸುತ್ತಾನೆ. ಧಾರ್ಮಿಕ ಚಿಂತನೆಯನ್ನು ಮುಂದುವರಿಸಿ.
ಕನ್ಯಾ
ಗುರು-ಹಿರಿಯರ ಅನುಗ್ರಹದಿಂದ, ನಿಮ್ಮ ಶಾಂತಿಯುತ ಸ್ವಭಾವದಿಂದ ನೆಮ್ಮದಿ ಕಾಣುವಿರಿ. ನ್ಯಾಯಾಲಯದಲ್ಲಿ ಜಯ ಪ್ರಾಪ್ತಿಯಾಗುವುದು ಹಾಗೆಯೇ ಸರ್ಕಾರಿ ಕಛೇರಿಯಲ್ಲಿ ನಿಮ್ಮಿಷ್ಟದಂತೆ ಕೆಲಸ-ಕಾರ್ಯಗಳು ಆಗುತ್ತವೆ.
ತುಲಾ
ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯವಾಗುವುದು. ಹೂವು-ಹಣ್ಣು ಮಾರಾಟಗಾರರಿಗೆ ಲಾಭವು ದುಪ್ಪಟ್ಟಾಗಲಿದೆ. ಹೊಸ ಪರಿವರ್ತನೆ ನಿಮ್ಮ ಬಾಳಲ್ಲಿ ಬರಲಿದೆ. ಬಿಳಿ ಬಣ್ಣ ಶುಭವನ್ನು ಉಂಟುಮಾಡಲಿದೆ.
ವೃಶ್ಚಿಕ
ಸಮಸ್ಯೆಯ ಗೋಪುರವನ್ನು ಹೊತ್ತಿರುವ ನಿಮಗೆ ಹಂತಹಂತವಾಗಿ ಪರಿಹಾರ ದೊರಕಲಿದೆ. ನೂತನ ಮನೆ ನಿರ್ಮಾಣ ಅಥವಾ ನಿವೇಶನಗಳ ಖರೀದಿಗೆ ಪೂರಕವಾದ ವಾತಾವರಣ ಸ್ನೇಹಿತರಿಂದ ಸಿಗಲಿದೆ.
ಧನು
ಸರ್ಕಾರಿ ನೌಕರರಿಗೆ ವರ್ಗಾವಣೆಯ ಯೋಗವಿದೆ. ಲೋಹದ ಕಾರ್ಖಾನೆ ಯವರು, ಚಿನ್ನಾಭರಣ ವ್ಯಾಪಾರಿಗಳು ಅಧಿಕ ಲಾಭವನ್ನು ಹೊಂದುವಿರಿ. ಬದುಕಿನ ಬಗ್ಗೆ ಸರಿಯಾದ ಮಾರ್ಗದರ್ಶನ ದೊರೆಯಲಿದೆ.
ಮಕರ
ಗ್ರಹದ ಫಲಗಳು ಅನುಕೂಲಕರವಾಗಿ ತೋರುವುದರಿಂದ ದೈನಂದಿನ ವ್ಯಾಪಾರೋದ್ಯಮಗಳಲ್ಲಿ ನಿರೀಕ್ಷೆಗೂ ಮಿಕ್ಕಿ ಲಾಭವಾಗುವುದು. ನಿಮ್ಮನ್ನು ಕಾಡುವ ಸಮಸ್ಯೆ ಹೆಚ್ಚಿನ ಶ್ರಮವಿಲ್ಲದೆ ಪರಿಹಾರವಾಗುವುದು.
ಕುಂಭ
ಹೈನುಗಾರಿಕೆಯವರಿಗೆ ವೃತ್ತಿಯಲ್ಲಿ ಆಸಕ್ತಿ ಮೂಡಲಿದೆ. ತಾತ್ಕಾಲಿಕ ಹುದ್ದೆಯವರಿಗೆ ಕಾಯಂ ಆಗುವ ಸಾಧ್ಯತೆ ಇರುತ್ತದೆ. ಸಹೋದರರಿಂದ ಧನಾಗಮನ. ಜಗದ್ಗುರುಗಳ ಸೇವೆಯಿಂದ ಅಭೀಷ್ಟ ಸಿದ್ಧಿಯಾಗುವುದು.
ಮೀನ
ಸಮಯೋಚಿತ ಕಾರ್ಯ ನಡೆಸುವಲ್ಲಿ ಆಲಸ್ಯ, ವಾದ-ವಿವಾದಗಳಲ್ಲಿ ನಿಷ್ಕಾರಣ ವೈಷಮ್ಯ, ಪರಿವಾರದಲ್ಲಿ ಅಭಿಪ್ರಾಯ ಭೇದಗಳಿಂದ ತಾಪತ್ರಯಕ್ಕೆ ಗುರಿಯಾಗುವಿರಿ. ಪದವೀಧರರಿಗೆ ಸನ್ಮಾನದಂತಹ ಗೌರವ ದೊರಕಲಿದೆ.