ADVERTISEMENT

ದಿನ ಭವಿಷ್ಯ: ವೈಯಕ್ತಿಕ ಬದುಕಿನ ವಿಚಾರಗಳತ್ತ ಹೆಚ್ಚಿನ ಗಮನವಿರಲಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 25 ಅಕ್ಟೋಬರ್ 2024, 18:30 IST
Last Updated 25 ಅಕ್ಟೋಬರ್ 2024, 18:30 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ತಿಳಿಯಾದ ಮನಸ್ಸಿನಿಂದ ಆಲೋಚಿಸಿ ಅಥವಾ ಅನುಭವಸ್ಥರ ಅಭಿಪ್ರಾಯ ಕೇಳಿ ನಿರ್ಧಾರ ಕೈಗೊಳ್ಳಿ. ಕಾಗದ ಕಾರ್ಖಾನೆ ಮಾಲೀಕರಿಗೆ ವರಮಾನ ಹೆಚ್ಚಲಿದೆ. ಮಕ್ಕಳಿಂದ ಸುಖ ನೆಮ್ಮದಿ ದೊರೆಯಲಿದೆ.
  • ವೃಷಭ
  • ಹಳೆಯ ಕೆಲಸಕ್ಕಿಂತ ಹೊಸ ಉದ್ಯೋಗದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಹಾಗೂ ಕೆಲಸದ ವೇಳೆಯೂ ನಿಮಗೆ ಅನುಕೂಲವಾಗಿರುತ್ತದೆ. ಕಾರ್ಯಕ್ಷೇತ್ರದಲ್ಲಿ ನೀತಿ-ನಿಯಮಗಳಿಗೆ ಬದ್ಧರಾಗಿರುವ ತೀರ್ಮಾನ ಮಾಡುವುದು ಒಳ್ಳೆಯದು.
  • ಮಿಥುನ
  • ಕಾರ್ಖಾನೆ ವೃತ್ತಿಯವರಿಗೆ ಹೆಚ್ಚಿನ ಲಾಭ ಇಲ್ಲವಾದರೂ, ದೈನಂದಿನ ನೆಮ್ಮದಿಗಾಗಲಿ, ಸಂತೋಷಕ್ಕಾಗಲಿ ಯಾವುದೇ ತೊಂದರೆ ಇರಲಾರದು. ಮನೆಯ ಮಂಗಳ ಕಾರ್ಯಕ್ಕಾಗಿ ಶುಭದಿನದ ನಿಶ್ಚಯ ಮಾಡುವಿರಿ.
  • ಕರ್ಕಾಟಕ
  • ಖರ್ಚುಗಳಿಗೆ ತಕ್ಕಂತೆ ಆದಾಯವಿರುವುದರಿಂದ ಸಮಾದಾನ ಕರವಾದ ವಾತಾವರಣ ಇರುವುದು. ಹಾಡುಗಾರರಿಗೆ ನಿಮ್ಮ ಸಾಧನೆಯಿಂದ ಜನಪ್ರಿಯತೆ ಹೆಚ್ಚುತ್ತದೆ. ಕಾನೂನಿಗೆ ಗೌರವ ಕೊಡುವುದನ್ನು ಮರೆಯದಿರಿ.
  • ಸಿಂಹ
  • ಲೇಖನ ಮಾಲೆಯನ್ನು ಸಿದ್ಧಪಡಿಸುವ ನಿಮ್ಮ ಕನಸು ಈಡೇರಲಿದೆ. ಎಲ್ಲಾ ವಿಚಾರದಲ್ಲೂ ಅತ್ಯಂತ ಸಾವಧಾನವಾಗಿ ಮುಂದುವರಿಯುವುದು ಉತ್ತಮ. ಗುಡಿ ಕೈಗಾರಿಕೆ ವೃತ್ತಿಯವರಿಗೆ ಹೆಚ್ಚಿನ ಬೇಡಿಕೆ ಇರುತ್ತದೆ.
  • ಕನ್ಯಾ
  • ಚರ್ಮ ಸಂಬಂಧವಾದ ಅನಾರೋಗ್ಯವು ಕಾಣಿಸಿದಲ್ಲಿ ಆಯುರ್ವೇದದ ಮೊರೆ ಹೋಗುವುದರಿಂದ ಸಮಸ್ಯೆಗೆ ಶಾಶ್ವತವಾಗಿ ಉತ್ತರ ದೊರಕಲಿದೆ. ಕೆಲಸ ಕೊಂಚ ನಿಧಾನವಾಗಿ ಸಾಗುತ್ತಿದೆ ಎನಿಸಿದರೂ ಚಿಂತೆ ಬೇಡ.
  • ತುಲಾ
  • ಕಾರ್ಖಾನೆಯ ನಿರಂತರತೆಯನ್ನು ಗಮನವಿಟ್ಟುಕೊಳ್ಳುವುದಕ್ಕಾಗಿ ಈಗಿರುವ ವ್ಯವಸ್ಥೆಗೆ ಹೊರತಾಗಿ ಪರ್ಯಾಯ ವ್ಯವಸ್ಥೆಗೆ ತಯಾರಾಗಿರಿ. ಅಡಿಕೆ ಮಾರಾಟ ಪ್ರತಿನಿಧಿಗಳಿಗೆ ಈ ದಿನ ಹೆಚ್ಚಿನ ಕಮೀಷನ್ ಸಿಗಲಿದೆ.
  • ವೃಶ್ಚಿಕ
  • ಸಂಪಾದನೆಯ ವಿಚಾರದಲ್ಲಿ ವೈರಾಗ್ಯ ಹೊಂದಿರುವ ನೀವು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಪರಿಶ್ರಮದಿಂದ ದುಡಿದರೆ ಪ್ರಗತಿಯ ಹಾದಿಯನ್ನು ಕಾಣುವಿರಿ. ಹಿರಿಯರ ಆಶೀರ್ವಾದ ನಿಮ್ಮ ಪಾಲಿಗಿದೆ.
  • ಧನು
  • ಹಾಲು, ಮೊಸರು ಮತ್ತು ಬೆಣ್ಣೆಯ ವ್ಯಾಪಾರಸ್ಥರಿಗೆ ಹೆಚ್ಚಿನ ಉತ್ಪಾದನೆಯಿಂದ ಲಾಭವಾಗುವುದು. ಪಾಕ ಪ್ರವೀಣರಿಗೆ ಇಂದು ಬಿಗುವಿನ ವೇಳಾಪಟ್ಟಿಯೊಂದಿಗೆ ವೃತ್ತಿಯಲ್ಲಿ ಉನ್ನತ ಸ್ಥಾನ ದೊರೆಯುವುದು.
  • ಮಕರ
  • ತಂತ್ರಜ್ಞಾನಿಗಳಿಗೆ ವೃತ್ತಿಯಲ್ಲಿ ಪ್ರಸ್ತುತವಾಗಿ ಇರುವ ಮೇಲಧಿಕಾರಿಗಳ ಒತ್ತಡಗಳು ಕಡಿಮೆಯಾಗಲಿದೆ. ವೈಯಕ್ತಿಕ ಬದುಕಿನ ವಿಚಾರಗಳತ್ತ ಹೆಚ್ಚಿನ ಗಮನವಿರಲಿ. ವೃತ್ತಿಯಲ್ಲಿ ಸಾಕಷ್ಟು ಪೈಪೋಟಿಯನ್ನು ಎದುರಿಸುವಿರಿ.
  • ಕುಂಭ
  • ಮೂರ್ನಾಲ್ಕು ಕಾರ್ಯಗಳ ಅಥವಾ ವಿಚಾರಗಳಲ್ಲಿನ ನಿಮ್ಮ ಗಮನದಿಂದ, ಕೆಲಸವನ್ನು ಪೂರ್ಣಗೊಳಿಸುವುದು ಕಷ್ಟಕರವೆನಿಸುವುದು. ಉದ್ಯೋಗಕ್ಕಾಗಿ ಪರಸ್ಥಳದಲ್ಲಿ ವಾಸ ಮಾಡುವ ಅನಿವಾರ್ಯತೆ ಬರಬಹುದು.
  • ಮೀನ
  • ಪ್ರಯಾಣಗಳಿಂದ ದೇಹಾಯಾಸ ಕಂಡು ಬಂದರೂ ಕಾರ್ಯಾನುಕೂಲವಾಗಿ ಧನ ಲಾಭ ದೊರೆಯಲಿದೆ. ಷೇರು ಮಾರಾಟದಿಂದ ಲಾಭ ಬರುವುದು. ಸಮಸ್ಯೆಯಲ್ಲಿದ್ದ ಆಸ್ತಿ ವ್ಯವಹಾರಗಳು ಇತ್ಯರ್ಥಗೊಳ್ಳಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.