ADVERTISEMENT

ದಿನ ಭವಿಷ್ಯ: ಪ್ರಾಪಂಚಿಕ ವಿಷಯಗಳಲ್ಲಿ ಮಹತ್ವಾಕಾಂಕ್ಷೆ ಇರುವವರಿಗೆ ಶುಭ ದಿನ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ನವೆಂಬರ್ 2025, 1:07 IST
Last Updated 23 ನವೆಂಬರ್ 2025, 1:07 IST
ದಿನ ಭವಿಷ್ಯ
ದಿನ ಭವಿಷ್ಯ   
ಮೇಷ
  • ಬಹುಜನರ ಅಭಿಪ್ರಾಯವನ್ನು ಕೇಳಿ ನೀವು ಆರಂಭಿಸಲು ಹೊರಟ ಕೆಲಸದಲ್ಲಿ ವಿಭಿನ್ನ ಅಭಿಪ್ರಾಯದಿಂದಾಗಿ ಗೊಂದಲಕ್ಕೆ ಒಳಗಾಗುವಿರಿ. ಪ್ರಾಪಂಚಿಕ ವಿಷಯಗಳಲ್ಲಿ ಮಹತ್ವಾಕಾಂಕ್ಷೆ ಇರುವವರಿಗೆ ಶುಭ ದಿನ.
  • ವೃಷಭ
  • ವೈದ್ಯರು ಹೊಸ ಖಾಸಗಿ ಕಾರ್ಯಾಲಯವನ್ನು ಮಾಡುವ ಯೋಚನೆ ಮಾಡುವಿರಿ. ಧರ್ಮ ಕಾರ್ಯದಿಂದ ಶ್ರೇಯೋಭಿವೃದ್ಧಿಯಾಗುವುದು. ಅನುಭವದ ಕೊರತೆಯಿಂದಾಗಿ ಕೆಲಸಗಳಲ್ಲಿ ವಿಳಂಬವಾಗಬಹುದು.
  • ಮಿಥುನ
  • ಯಾವುದೇ ರೀತಿಯ ಅವಘಡಗಳಿಗೆ ನೇರವಾಗಿ ನೀವೇ ಹೊಣೆಯಾಗಿರುತ್ತೀರಿ. ಮಗನಲ್ಲಿ ಅನುಭವದ ಕೊರತೆಯನ್ನು ಕಂಡು ಬೇಸರಿಸುವಿರಿ. ಇದ್ದುದರಲ್ಲಿ ಖುಷಿ ಪಡುವುದು ಅಗತ್ಯವಾಗಿದೆ.
  • ಕರ್ಕಾಟಕ
  • ಪ್ರಾಣಿ ದಯಾ ಸಂಘದಲ್ಲಿ ಕೆಲಸ ಮಾಡುತ್ತಿರುವವರಿಗೆ ಇಂದಿನ ಹೃದಯ ವಿದ್ರಾವಕ ಘಟನೆಯು ಕಣ್ಣೀರಿಗೆ ಕಾರಣವಾಗುತ್ತದೆ. ಕಂಪನಿಯ ಕೆಲಸಕ್ಕಾಗಿ ತುರ್ತು ಪ್ರಯಾಣ ಮಾಡಬೇಕಾದ ಸಂದರ್ಭ ಬರುವುದು.
  • ಸಿಂಹ
  • ಆತ್ಮೀಯ ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯವನ್ನು ಹೊಂದುವಿರಿ. ಸ್ಥಿರವಾಗಿ ನಡೆಯುತ್ತಿದ್ದ ನಿಮ್ಮ ಉದ್ಯೋಗದಲ್ಲಿ ಅಭದ್ರತೆ ಕಾಡಬಹುದು. ಪ್ರಾಪಂಚಿಕ ಬದುಕಿನ ಬಗ್ಗೆ ತಿಳಿದುಕೊಳ್ಳಿ.
  • ಕನ್ಯಾ
  • ಹೂಡಿಕೆಯಿಂದ ಅಧಿಕ ಲಾಭ ಬಂದಿರುವ ಸುದ್ದಿ ತಿಳಿದು ಅತೀವ ಸಂತೋಷಗೊಳ್ಳುವಿರಿ. ಮಾತು ಅತಿರೇಕವಾಗದಂತೆ ಎಚ್ಚರ ವಹಿಸುವಿರಿ. ನಟನಾ ವೃತ್ತಿಯವರಿಗೆ ಖ್ಯಾತಿ ಮತ್ತು ಸಂಪತ್ತು ಹರಿದು ಬರಲಿದೆ.
  • ತುಲಾ
  • ಮಗಳು ವಿವಾಹ ವಿಚಾರದಲ್ಲಿ ತೋರುತ್ತಿರುವ ಅಸಡ್ಡೆಯು ನಿಮ್ಮ ಅಸಮಾಧಾನಕ್ಕೆ ಕಾರಣವಾಗುವುದು. ಕಂಕಣ ಭಾಗ್ಯ ಕೂಡಿಬಂದಾಗ ತಳ್ಳಿಹಾಕುವುದು ತರವಲ್ಲ. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಲಾಭಪಡೆಯುವಿರಿ.
  • ವೃಶ್ಚಿಕ
  • ದ್ಯುತಿತಂತು ಸಾಧನಗಳ ತಯಾರಕ ಹಾಗೂ ಮಾರಾಟಗಾರರಿಗೆ ಲಾಭದಾಯಕ ದಿನವಾಗಿರುತ್ತದೆ. ಉನ್ನತ ವ್ಯಾಸಂಗಕ್ಕೆ ಅವಕಾಶ ಲಭಿಸುತ್ತದೆ. ಸದ್ಗುರು ದತ್ತಾತ್ರೇಯರ ಆರಾಧನೆಯಿಂದ ಜ್ಞಾನ ಸಂಪಾದಿಸಿಕೊಳ್ಳಿರಿ.
  • ಧನು
  • ಕೆಲ ವಿಚಾರಗಳನ್ನು ಅರಿತ ಮೇಲೆ ನೀವಿರುವ ಜಾಗದಲ್ಲಿ ನೀವು ಅಂದುಕೊಂಡ ರೀತಿಯ ಭವಿಷ್ಯ ಇರುವುದೇ ಎಂಬ ಚಿಂತೆ ಉಂಟಾಗುತ್ತದೆ. ತಂದೆಯ ನಿರ್ಧಾರಗಳನ್ನು ಗೌರವಿಸುವುದರಿಂದ ನಿಮ್ಮ ಗೌರವ ವೃದ್ಧಿಸುತ್ತದೆ. ‌
  • ಮಕರ
  • ಊರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅದರಲ್ಲೂ ವಿಶೇಷವಾಗಿ ಸುಗಮ ಸಂಗೀತದಲ್ಲಿ ನೀವು ಭಾಗವಹಿಸುವಿರಿ. ಏಕ ಕಾಲದಲ್ಲಿ ಹತ್ತಾರು ಕೆಲಸಗಳನ್ನು ಮಾಡುವಂತಹ ಉತ್ಸಾಹ ಉಂಟಾಗುವುದು.
  • ಕುಂಭ
  • ವೃತ್ತಿಯಲ್ಲಿ ಬಡ್ತಿಯನ್ನು ಬಯಸುವ ನೀವು ಅದರೊಂದಿಗೆ ಸ್ಥಾನ ಬದಲಾವಣೆಗೂ ಸಹ ತಯಾರಿರಬೇಕಾಗುತ್ತದೆ. ನಿಮ್ಮ ಜೀವನದ ಹಳೆಯ ನೆನಪುಗಳನ್ನು ಮರೆತು ಭವಿಷ್ಯದತ್ತ ಗಮನಹರಿಸುವುದು ಉತ್ತಮ.
  • ಮೀನ
  • ರಕ್ಷಕರು ಕಾವಲಿಗೆ ಇರುವ ಸಮಯದಲ್ಲಿ ಯಾವುದೇ ಸೋಮಾರಿತನ ಮಾಡಬೇಡಿ, ನಿಮ್ಮ ನಿರ್ಲಕ್ಷ್ಯ ಹಲವು ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ಒಳ್ಳೆಯ ಕನಸುಗಳಿಗೆ ಜೀವ ಬಂದಂತೆ ಭಾಸವಾಗುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.