ADVERTISEMENT

ದಿನಭವಿಷ್ಯ: ಈ ರಾಶಿಯ ಉದ್ಯೋಗಸ್ಥರಿಗೆ ಬಡ್ತಿ ದೊರೆತು ಉತ್ತಮ ಫಲ ದೊರೆಯಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 23 ಆಗಸ್ಟ್ 2024, 23:30 IST
Last Updated 23 ಆಗಸ್ಟ್ 2024, 23:30 IST
   
ಮೇಷ
  • ದೈವಾನುಕೂಲದಿಂದ ನಡೆಯಬೇಕಾದ ಶುಭ ಕಾರ್ಯಗಳನ್ನು ಹಿರಿಯರೊಂದಿಗೆ ಕುಳಿತು ನಿಶ್ಚಯ ಮಾಡಬಹುದು. ನಿಮ್ಮ ಶಕ್ತಿಗೂ ಮೀರಿ ನೀವು ಮಾಡಿದ ಕೆಲಸಗಳಿಂದಾಗಿ ದೈಹಿಕ ಆಯಾಸ ಉಂಟಾಗಬಹುದು.
  • ವೃಷಭ
  • ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ ಹಾಗೂ ಅದ್ದರಿಂದ ಹಗುರಾಗುವಿರಿ. ಮಗಳ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ.
  • ಮಿಥುನ
  • ಪೂರ್ವ ನಿಯೋಜಿತವಾದ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ನಡೆಯುತ್ತದೆ. ಆರೋಗ್ಯದಲ್ಲಿ ಉದಾಸೀನತೆ ತೋರದಿರಿ. ಇನ್ನೊಬ್ಬರನ್ನು ಅಥವಾ ಮೂಕ ಪ್ರಾಣಿಯನ್ನು ದಂಡಿಸುವುದು ಸರಿಯಲ್ಲ.
  • ಕರ್ಕಾಟಕ
  • ಲೇವಾದೇವಿ ವ್ಯವಹಾರ ಮಾಡುವವರಿಗೆ ಜವಾಬ್ದಾರಿಯ ಹೊರೆ, ಮಾನಸಿಕ ಒತ್ತಡ ಹೆಚ್ಚಲಿದೆ. ಕಾರ್ಖಾನೆಯಲ್ಲಿ ಹೊಸ ವಿದ್ಯುತ್ ಉಪಕರಣಗಳನ್ನು ಅಳವಡಿಸುವಲ್ಲಿ ಅಧಿಕ ಬಂಡವಾಳವನ್ನು ಹೂಡುವಿರಿ.
  • ಸಿಂಹ
  • ಸ್ನೇಹಿತರ ಹಾಗೂ ಬಂಧುಗಳ ಸಹಕಾರದಿಂದ ವ್ಯಾಪಾರ ವಹಿವಾಟುಗಳ ಆದಾಯದಲ್ಲಿ ಗಣನೀಯ ಏರಿಕೆ ಕಾಣಲಿರುವಿರಿ. ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸುವ ಬಗ್ಗೆ ತಂದೆಯವರಲ್ಲಿ ಮಾತನಾಡಿ.
  • ಕನ್ಯಾ
  • ಅದೃಷ್ಟವು ಚೆನ್ನಾಗಿರುವ ಕಾರಣ ಬಂದ ಅವಕಾಶಗಳನ್ನು ಬಳಸಿಕೊಂಡಲ್ಲಿ ವ್ಯಾಪಾರ ವ್ಯವಹಾರದಲ್ಲಿ ಅಧಿಕ ಲಾಭ ಕಾಣಬಹುದು. ನಿಮ್ಮ ಉದ್ಯೋಗದಲ್ಲಿನ ಬದಲಾವಣೆಯು ಉತ್ಸಾಹವನ್ನು ಹೆಚ್ಚಿಸುವುದು.
  • ತುಲಾ
  • ಹಿರಿಯ ಅಧಿಕಾರಿಗಳೊಬ್ಬರ ಭೇಟಿಯಿಂದ ಎಲ್ಲಾ ಕಾರ್ಯಗಳು ಸರಾಗವಾಗಿ ನಡೆಯುವುದು. ನೆರೆ-ಹೊರೆಯವರ ವಿಶ್ವಾಸ ಹೆಚ್ಚಿ ವ್ಯವಹಾರದಲ್ಲಿ ಲಾಭ ಅಧಿಕವಾಗುವುದು. ಕಾಗದದ ಉದ್ಯಮದವರಿಗೆ ಲಾಭ ಇರುವುದು.
  • ವೃಶ್ಚಿಕ
  • ನೂತನ ಮನೆ ನಿರ್ಮಾಣ, ನಿವೇಶನ ಖರೀದಿಯ ಆಲೋಚನೆಗಳಿಗೆ ಪೂರಕ ವಾತಾವರಣ ಸ್ನೇಹಿತರಿಂದ ಸಿಗಲಿದೆ. ವೀರಾಂಜನೇಯನಿಗೆ ಜೇನುತುಪ್ಪ ಅಭಿಷೇಕದಿಂದ ವ್ಯಾಧಿಗಳು ದೂರವಾಗುತ್ತದೆ.
  • ಧನು
  • ಹಣದ ಆಸೆಯಿಂದ ಹೊರಬರುವ ಪ್ರಯತ್ನವು ನೆಮ್ಮದಿಯ ಜೀವನಕ್ಕೆ ಕಾರಣವಾಗುತ್ತದೆ. ಮಗನ ಸಹಾಯದಿಂದ ಸಂಬಂಧಿಕರೊಬ್ಬರ ಕೆಲಸ ಸುಗಮವಾಗಿ ಕೈಗೂಡುವುದರಿಂದ ಹೆಚ್ಚಿನ ಸಂತಸವಿರುವುದು.
  • ಮಕರ
  • ಬಂಧುಗಳ ಮನೆಯಲ್ಲಿನ ಕೆಲವು ವಿಚಿತ್ರವಾದ ಆಚರಣೆಗಳು ಗೊಂದಲ ಉಂಟುಮಾಡಬಹುದು. ಅವಿವಾಹಿತರಿಗೆ ನಿರೀಕ್ಷೆಗೆ ಪೂರಕವಾದ ಪ್ರಚೋದನೆ ಲಭಿಸಲಿದೆ. ತಾಯಿಯ ಆರೋಗ್ಯದ ಬಗ್ಗೆ ಗಮನವಿರಲಿ.
  • ಕುಂಭ
  • ವಿವೇಚನೆಯಿಂದ ಆಲೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನವಹಿಸುವುದರಿಂದ ಯಶಸ್ಸು. ಸಂಸಾರದ ಜೊತೆಯಲ್ಲಿ ಕಾಲಕಳೆಯುವ ಸಮಯವಾಗಿದೆ.
  • ಮೀನ
  • ಕಾರ್ಯಶೈಲಿಯು ಆಫೀಸಿನಲ್ಲಿ ಮೆಚ್ಚುವ ಮಾತಾಗುವುದು. ಮನೆಯಲ್ಲಿ ಶುಭ ಕಾರ್ಯಗಳ ತಯಾರಿ ಉತ್ತಮ ರೀತಿಯಲ್ಲಿ ನಡೆಯುವುದು. ಉದ್ಯೋಗಸ್ಥರಿಗೆ ಬಡ್ತಿ ದೊರೆತು ಉತ್ತಮ ಫಲ ದೊರೆಯಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.