ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿರಂಗದಲ್ಲಿ  ಅದೃಷ್ಟದ ಬಾಗಿಲು ತೆರೆಯುವುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 7 ಅಕ್ಟೋಬರ್ 2025, 23:36 IST
Last Updated 7 ಅಕ್ಟೋಬರ್ 2025, 23:36 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಒಳ್ಳೆಯತನದಿಂದಾಗಿ ನೀವು ನುಂಗಿಕೊಂಡ ಸಿಟ್ಟು ತಪ್ಪು ಮಾಡಿದವರ ನಿರ್ಲಕ್ಷ್ಯಕ್ಕೆ ಕಾರಣವಾಗುತ್ತದೆ. ವೃತ್ತಿರಂಗದಲ್ಲಿ  ಅದೃಷ್ಟದ ಬಾಗಿಲು ತೆರೆಯುವುದು. ವಿದ್ಯಾರ್ಥಿನಿಯರಿಗೆ ವಿಶೇಷ  ಪ್ರಗತಿ ಪ್ರಾಪ್ತಿಯಾಗಬಹುದು.
  • ವೃಷಭ
  • ಯಾವುದೇ ಪರಿಸ್ಥಿತಿಯಲ್ಲಿಯೂ ಮನಸ್ಸಿನ ಭಾವನೆಗಳಿಗೆ ಮಾನ್ಯತೆ ನೀಡದಿರುವ ತೀರ್ಮಾನ ಮಾಡದಿರಿ. ತಂದೆ ಅಥವಾ ಹಿರಿಯ ಸಹೋದರರಲ್ಲಿ ಸಂಯಮದ ನಡವಳಿಕೆ ಅಗತ್ಯ.
  • ಮಿಥುನ
  • ಜೀವನದಲ್ಲಿ ಹೊಸ ರೀತಿಯ ಚಲನೆ ಇಲ್ಲದೆ ಬಂದ ಬೇಸರವು ದಿನಚರಿಯ ಬದಲಾವಣೆಯಿಂದ ನಿವಾರಣೆಯಾಗಬಹುದು. ಕಾರ್ಯರಂಗದಲ್ಲಿ ಅನುಭವಸ್ಥರ ಸಹಯೋಗದಿಂದ ಉನ್ನತಿ ನೋಡಬಹುದು.
  • ಕರ್ಕಾಟಕ
  • ಒಂದೇ ಸಮಯದಲ್ಲಿ ಎಲ್ಲ ಕಡೆ ಗಮನ ಹರಿಸುವ ನಿಮ್ಮತನವನ್ನು ನೀವು ಕಲೆ ಎಂದು ಭಾವಿಸಿದ್ದರೂ ಇತರರು ಚಂಚಲತೆ ಎಂದು ದೂಷಿಸುವ ಸಾಧ್ಯತೆ ಇದೆ. ಇರುವ ವಸ್ತುಗಳಲ್ಲಿ ಸಂತೃಪ್ತಿಯನ್ನು ತಂದುಕೊಳ್ಳಿ.
  • ಸಿಂಹ
  • ಇಷ್ಟು ದಿನ ಇದ್ದಂಥ ಕೆಲವು ಜವಾಬ್ದಾರಿಗಳ ಭಾರ ಕಡಿಮೆ ಆದುದರಿಂದ ನಿರಾಳದ ಜೀವನವನ್ನು ನಡೆಸುವಿರಿ. ಸ್ವಂತವಾಗಿ ಉದ್ಯೋಗ ಮಾಡುವವರು ಪ್ರಗತಿ ಕಾಣಲಿದ್ದೀರಿ. ಸಣ್ಣ ಪ್ರಮಾಣದ ಪ್ರಯಾಣ ಮಾಡುವಿರಿ.
  • ಕನ್ಯಾ
  • ಸ್ನೇಹಿತನ ಕೆಲವು ಅನಿರೀಕ್ಷಿತ ನಡೆಗಳನ್ನು ಗುರುತಿಸಿ ಆತನ ಮಾನಸಿಕ ಖಿನ್ನತೆಯನ್ನು ಬೆಳಕಿಗೆ ತರುವಂಥ ಕೆಲಸವನ್ನು ಮಾಡುವ ಸಾಧ್ಯತೆ ಇದೆ. ಜನಮಾನಸದಲ್ಲಿ ಅಚ್ಚಾಗಿರುವ  ಕಾರ್ಯಗಳನ್ನು ನಿಲ್ಲಿಸಲು ಹೋಗಬೇಡಿ.
  • ತುಲಾ
  • ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಹೋಗಿ ಅದರಿಂದ ಅಪಮಾನಕ್ಕೊಳಗಾಗುವ ಸಾಧ್ಯತೆ ಇದೆ. ಬಂಧುಗಳ ಸಲಹೆ-ಸಹಕಾರ ನೂತನ ಕಾರ್ಯಗಳಿಗೆ ಉತ್ತಮ ಫಲ ಕೊಡುವುದು. ಬಿಳಿ ಬಣ್ಣ ಶುಭವನ್ನು ತರಲಿದೆ.
  • ವೃಶ್ಚಿಕ
  • ಪಾರಮಾರ್ಥಿಕವಾಗಿ ಸಾಧನೆಗಳೆಷ್ಟೇ ಇದ್ದರೂ ಸಮಾಜದಲ್ಲಿ ಬದುಕುವಾಗ ಲೌಕಿಕ ಜ್ಞಾನದ ಅಗತ್ಯ ಇದ್ದೇ ಇರಬೇಕೆಂಬುವುದನ್ನು ಸ್ಮರಿಸಿ. ಶಿಕ್ಷಕ ವೃತ್ತಿ ಆರಂಭಿಸುವ ಬಗ್ಗೆ ಆಲೋಚಿಸಿ. ಆಮಿಷಗಳಿಗೆ ಮರುಳಾಗದಿರಿ
  • ಧನು
  • ಬುದ್ಧಿವಂತಿಕೆಯನ್ನು ಉಪಯೋಗಿಸಿ ಗ್ರಾಹಕರಲ್ಲಿ ವ್ಯವಹರಿಸಿದರೆ ಲಾಭದ ದಿನವಾಗುತ್ತದೆ. ಮಗನು ಅನಿವಾರ್ಯ ಕಾರಣಗಳಿಂದ ಪರ ಊರಿಗೆ ತೆರಳುವುದು ದುಃಖಕರ ಸಂಗತಿಯಾಗಬಹುದು
  • ಮಕರ
  • ಕಾರ್ಯಕ್ಷೇತ್ರದಲ್ಲಿ ಕೋಪವು ಮನೆಯ ಮಡದಿ ಹಾಗೂ ಮಗನ ಮೇಲೆ ಪ್ರಯೋಗವಾಗುವುದು ಬೇಡ. ತಂದೆಯವರ ವ್ಯವಹಾರದ ವಿಷಯಗಳನ್ನು ತಿಳಿದುಕೊಂಡು ಮುಂದುವರಿಯುವಿರಿ. ವಿಶ್ರಾಂತಿ ಪಡೆಯಿರಿ.
  • ಕುಂಭ
  • ಉತ್ತಮ ಕೆಲಸ ನಿರ್ವಹಣೆಯಿಂದ ಬಡ್ತಿಯ ವಿಚಾರ ಸುಳಿದಾಡಿ ಸಹೋದ್ಯೋಗಿಗಳ ಈರ್ಷ್ಯೆಗೆ ಕಾರಣವಾಗುತ್ತದೆ. ಕಣ್ಣಿನ ದೃಷ್ಟಿಯಲ್ಲಿ ಬದಲಾವಣೆ ಅನುಭವಕ್ಕೆ ಬಂದಲ್ಲಿ ತಡಮಾಡದೆ ವೈದ್ಯರನ್ನು ಭೇಟಿ ಮಾಡಿ.
  • ಮೀನ
  • ನಿರುದ್ಯೋಗಿಗಳು ಬಂದ ಅವಕಾಶವನ್ನು ಒಪ್ಪಿಕೊಳ್ಳುವುದು ಸದ್ಯದ ಪರಿಸ್ಥಿತಿಗೆ ಉತ್ತಮವಾಗಿ ಕಾಣುತ್ತದೆ. ಅಕ್ಕ-ಪಕ್ಕದವರಲ್ಲಿ ಸ್ನೇಹಪರ ಸ್ವಭಾವ ತೋರುವುದರಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸುವುದು.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.