ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಸಂಪಾದನೆಯ ವಿಷಯದಲ್ಲಿ ಆಸೆ ಇರಲಿ, ದುರಾಸೆ ಬೇಡ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 1 ಅಕ್ಟೋಬರ್ 2025, 23:30 IST
Last Updated 1 ಅಕ್ಟೋಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ನಿವೇಶನ ಕೊಳ್ಳುವ ನಿಮ್ಮ ಕನಸು ನನಸಾಗಲಿದೆ. ಕೆಲಸ ಕಾರ್ಯಗಳು ನಿಧಾನವಾಗಿಯಾದರೂ ಸಂಪೂರ್ಣವಾಗಿ ನೆರವೇರುವುದು. ಹೋಟೆಲ್‌ ಉದ್ಯಮದವರಿಗೆ ಇಂದು ಹೆಚ್ಚಿನ ವರಮಾನ ದೊರೆಯಲಿದೆ.
  • ವೃಷಭ
  • ಇನ್ನೊಬ್ಬರಿಗೆ ಮೋಸ ಮಾಡಲು ಪ್ರೇರೇಪಣೆ ಸಿಗಲಿದೆ. ಆದರೆ ನಿಮ್ಮ ಬುದ್ಧಿಯನ್ನು ಸ್ಥಿಮಿತದಲ್ಲಿ ಇರಿಸಿಕೊಳ್ಳಿರಿ. ರೈತರು ಧವಸ ಧಾನ್ಯಗಳನ್ನು ಪ್ರಾಣಿಪೀಡೆಗಳ ದಾಳಿಗೆ ತುತ್ತಾಗದಂತೆ ಜಾಗ್ರತೆಯನ್ನು ಮಾಡಿ ಸಂರಕ್ಷಿಸಿ.
  • ಮಿಥುನ
  • ಹೊಸ ಉದ್ಯೋಗಿಗಳಿಗೆ ಅವಿತರ ದುಡಿಮೆಯ ಬಿಸಿ ತಟ್ಟಲಿದೆ. ಸ್ವತಂತ್ರವಾಗಿ ತರಕಾರಿ, ಹಣ್ಣು, ಹೂವು ವ್ಯಾಪಾರ ನಡೆಸಲು ಯೋಚಿಸಿದವರಿಗೆ ಶುಭ ದಿನ. ವಿವಾಹಕ್ಕಾಗಿ ಧಾರ್ಮಿಕ ಮಾರ್ಗದಲ್ಲಿ ಪ್ರಯತ್ನವನ್ನು ಮಾಡಿರಿ.
  • ಕರ್ಕಾಟಕ
  • ಸಂಪಾದನೆಯ ವಿಷಯದಲ್ಲಿ ಆಸೆ ಇರಲಿ, ದುರಾಸೆ ಬೇಡ. ಅವಿತರ ಕಾರ್ಯದ ಒತ್ತಡಗಳು ದೇಹಕ್ಕೆ ಆಯಾಸವನ್ನು ತರಲಿದೆ. ಕಾರ್ಯ ಸಾಧನೆಗೆ ಪೂರಕವಾದಂತಹ ಸ್ನೇಹಿತನ ಬೇಟಿಯು ಹೆಚ್ಚಿನ ಸಂತೋಷವನ್ನು ಉಂಟುಮಾಡುತ್ತದೆ.
  • ಸಿಂಹ
  • ನಿಮ್ಮ ಸಹೋದ್ಯೋಗಿಗಳಿಗೆ ಆಗದಿರುವ ಹಾಗು ಅತ್ಯಂತ ಕ್ಲಿಷ್ಟಕರವಾದ ಸಮಸ್ಯೆಯನ್ನು ಬಿಡಿಸುವಲ್ಲಿ ಯಶಸ್ವಿಯಾಗುವಿರಿ. ಗೃಹಾಲಂಕಾರ ವಸ್ತುಗಳ ಖರೀದಿಯು ಮನೆಯಲ್ಲಿ ಹರ್ಷದ ವಾತಾವರಣವನ್ನು ಸೃಷ್ಟಿಸುತ್ತದೆ.
  • ಕನ್ಯಾ
  • ಕಾರ್ಯ ಕ್ಷೇತ್ರದ ಸಮಸ್ಯೆಗಳನ್ನು ಮನೆಗೆ ತರವುದು ಸರಿಯಲ್ಲ. ಮಹನೀಯರ ಸಂದೇಶ ವಾಣಿಗಳ ಪಾಲನೆ ಮಾಡುವಿರಿ. ಕೃಷಿ ಉತ್ಪನ್ನಗಳ ಸ್ವಂತ ವ್ಯವಹಾರ ನಡೆಸಲು ಇಂದು ಉತ್ತಮವಾದ ಸಮಯವಾಗಿರುತ್ತದೆ.
  • ತುಲಾ
  • ಆಟಿಕೆಗಳ ಅಥವಾ ಕ್ರೀಡಾ ವಸ್ತುಗಳ ವ್ಯಾಪಾರಿಗಳಿಗೆ ವ್ಯವಹಾರದಲ್ಲಿ ಲಾಭದಾಯಕ ಬೆಳವಣಿಗೆ ಉಂಟಾಗುತ್ತದೆ. ಆಂಜನೇಯನ ಅನುಗ್ರಹವನ್ನು ಪಡೆದಲ್ಲಿ ಮಾನಸಿಕ ಧೈರ್ಯ ಹೆಚ್ಚಾಗುವುದು. ಹೈನು ಉತ್ಪನ್ನಗಳಿಂದ ಉತ್ತಮ ಆದಾಯ ಪಡೆಯುವಿರಿ.
  • ವೃಶ್ಚಿಕ
  • ಜಮೀನು ಖರೀದಿ ಅಥವಾ ಜಮೀನಿನ ಗುತ್ತಿಗೆಯಂತಹ ವ್ಯವಹಾರಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ವೈದ್ಯಕೀಯ ವಿಭಾಗದ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಪರಿಶ್ರಮ ವಹಿಸುವುದು ಅಗತ್ಯವಾಗುತ್ತದೆ.
  • ಧನು
  • ಮನೆಯಲ್ಲಿ ಗುರು-ಹಿರಿಯರ ಶುಭ ಆಶೀರ್ವಾದದಿಂದ ಮಂಗಳ ಕೆಲಸ ನೆಡೆಯಲಿದೆ. ಹೊಸ ಮನೆಯನ್ನು ಕೊಳ್ಳುವ ಬಗ್ಗೆ ದಲ್ಲಾಳಿಗಳೊಂದಿಗೆ ಮಾತುಕತೆ ನಡೆಸಬಹುದು. ವ್ಯವಹಾರದಲ್ಲಿ ಸ್ವಲ್ಪ ಜಾಣತನವನ್ನು ಪ್ರದರ್ಶಿಸಿ.
  • ಮಕರ
  • ಈ ದಿನ ತಾಯಿಯ ಅಥವಾ ಬಾಳ ಸಂಗಾತಿಯ ಮಾತನ್ನು ಮೀರದಿರುವುದು ಲೇಸು. ಉದ್ಯೋಗದಲ್ಲಿ ಎದುರಾಗುವ ಆಯ್ಕೆಯಂಥಹ ಸಮಸ್ಯೆಗೆ ಈ ದಿನ ಉತ್ತರ ಕಂಡುಕೊಳ್ಳುವುದು ಸ್ವಲ್ಪ ಕಷ್ಟಕರವೆನಿಸುವುದು.
  • ಕುಂಭ
  • ಆರ್ಥಿಕವಾಗಿ ಬಲಿಷ್ಟರಾಗುವಿರಿ. ಕೃಷಿಯ ಮೇಲೆ ಹೆಚ್ಚು ಬಂಡವಾಳ ಹೂಡುವಿಕೆ ಲಾಭದಾಯಕವಾದದ್ದು. ಎಷ್ಟೆ ಕಷ್ಟಬಂದರೂ ಸಹ ನೀವು ನಿಮ್ಮ ಗುರಿಯನ್ನು ಸಾಧಿಸಿಯೇ ತೀರುತ್ತೀರಿ ಎಂಬ ಹಠದಿಂದ ಕಾರ್ಯಪ್ರವೃತ್ತರಾಗಿರಿ.
  • ಮೀನ
  • ವಿವಾಹದ ಅಥವಾ ದಾಂಪತ್ಯದ ವಿಚಾರದಲ್ಲಿ ಅಂತಿಮವಾಗಿ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ. ಮನೆಯಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿಬಂದು ಅಶಾಂತಿಯ ವಾತಾವರಣ ಕಂಡುಬರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.