ಭಾವನೆಗಳನ್ನು ಹಂಚಿಕೊಂಡು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ವ್ಯಕ್ತಿಗಳ ಪರಿಚಯ, ಸ್ನೇಹವು ಆಗಲಿದೆ. ಬಂಗಾರದ ಮೇಲೆ ಬಂಡವಾಳ ಹಾಕಲು ದಿನ ಉತ್ತಮ. ಪೊಲೀಸ್ ಹುದ್ದೆಯಲ್ಲಿರುವವರಿಗೆ ಮುಂಬಡ್ತಿ.
ವೃಷಭ
ಸಹಾಯ ಅಪೇಕ್ಷಿಗಳಿಗೆ ಸಹಾಯ ಹಸ್ತ ತೋರುವುದು ದೇವರು ಮೆಚ್ಚುವ ಕೆಲಸವೆಂದು ತಿಳಿದುಬರಲಿದೆ. ನೆಂಟಸ್ತಿಕೆಯಲ್ಲಿಯೇ ಉತ್ತಮ ಸಂಬಂಧ ಕೂಡಿ ಬರುವುದು.
ಮಿಥುನ
ಸುಖಕ್ಕಿಂತ ಹೆಚ್ಚಾಗಿ ಭವಿಷ್ಯದ ಕುರಿತು ಗಂಭೀರ ಆಲೋಚನೆ ಮಾಡಿ. ವಕೀಲರಿಗೆ ಹೆಚ್ಚಿನ ಆದಾಯ ಗಳಿಕೆಯಾದರೂ ಆತ್ಮಸಾಕ್ಷಿ ಒಪ್ಪಿಕೊಳ್ಳಲಾಗದ ಘಟನೆ ನಡೆಯಬಹುದು.
ಕರ್ಕಾಟಕ
ಆತ್ಮಸ್ಥೈರ್ಯ ಹಾಗೂ ದೇವರ ಮೇಲಿರುವ ನಂಬಿಕೆಯಿಂದಾಗಿ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಪರಿಹರಿಸಿಕೊಳ್ಳುವಿರಿ. ಹೊಸ ಯೋಜನೆಗಳ ತಯಾರಿಗೆ ಉತ್ತಮ ಸಮಯ.
ಸಿಂಹ
ಬದುಕಿನ ಕವಲುದಾರಿಯಲ್ಲಿರುವ ನಿಮಗೆ ದೇವತಾನುಗ್ರಹದಿಂದ ಸರಿಯಾದ ಮಾರ್ಗದರ್ಶನ ಸಿಗುವುದು. ಸಮಾಜ ಸೇವೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡಿರುವವರಿಗೆ ಪ್ರಚಾರ ಸಿಗುವುದು.
ಕನ್ಯಾ
ಆದಾಯಕ್ಕಿಂತ ಜಾಸ್ತಿ ಅನಿವಾರ್ಯತೆಯ ಖರ್ಚುಗಳು ಎದುರಾಗಲಿವೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ವಹಿಸಿ. ವೃಥಾ ತಿರುಗಾಟದಿಂದ ಧನ ಹಾನಿ ಯಾದರೂ, ಸಂಭ್ರಮ ಇರಲಿದೆ.
ತುಲಾ
ವ್ಯವಹಾರದಲ್ಲೂ, ಸಂಬಂಧದಲ್ಲೂ ಧನಾತ್ಮಕ ಮನೋಭಾವವೇ ಸೋಲುಗಳಿಗೆ ಕಾರಣವೆಂಬುವುದನ್ನು ಮರೆಯದಿರಿ. ಮುಂದಿನ ಯೋಜನೆಗಳ ಕುರಿತು ತಜ್ಞರೊಂದಿಗೆ ಚರ್ಚೆ ನಡೆಸಿ.
ವೃಶ್ಚಿಕ
ಗುರಿಯನ್ನು ತಲುಪಲು ಪರಿಶ್ರಮ ಪಡಬೇಕಾದೀತು. ಮನಃಶಾಸ್ತ್ರ ವಿಚಾರದ ಅಧ್ಯಯನ ನಿರತರಿಗೆ ಅನುಕೂಲಕರ ದಿನ. ಯೋಗ, ಧ್ಯಾನಕ್ಕಾಗಿ ಅಲ್ಪ ಸಮಯವನ್ನು ಮೀಸಲಿಡಿ.
ಧನು
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಉದ್ಯೋಗವನ್ನು ದೊರಕಿಸಿಕೊಳ್ಳಬಹುದು. ಪಿತೃ ವರ್ಗದ ಆಶೀರ್ವಾದವಿದೆ. ವಾಹನ ಚಾಲನೆಯಂಥ ಕಾರ್ಯದಲ್ಲಿ ಆತುರವು ಒಳ್ಳೆಯದಲ್ಲ.
ಮಕರ
ಹಣಕಾಸು ನಿರ್ವಹಣೆಯ ವಿಚಾರದಲ್ಲಿ ಹೆಂಡತಿಯ ಕುಶಲಮತಿಯು ಉಪಯೋಗಕ್ಕೆ ಬರಲಿದೆ. ಬುದ್ಧಿವಂತಿಕೆ ಹಾಗೂ ಯೋಜನೆಗಳು ಸಂವಹನವನ್ನು ಸುಲಭಗೊಳಿಸುತ್ತವೆ. ಏಕಾಗ್ರತೆ ನಿಮಗೆ ಜಯ ತರಲಿದೆ.
ಕುಂಭ
ಪ್ರೀತಿ, ವಾತ್ಸಲ್ಯ ತೋರುವ ಜನರು ಇದ್ದಾರೆಂಬುದು ಆತ್ಮವಿಶ್ವಾಸ ಹೆಚ್ಚಲು ಕಾರಣ. ನೀವಾಡುವ ಮಾತುಗಳಿಂದ ಗೌರವವು ದೊರಕುವುದು. ಆಂಜನೇಯನನ್ನು ಆರಾಧಿಸಿ.
ಮೀನ
ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ನಿಮಗೆ ಸದ್ಯದ ಪರಿಸ್ಥಿತಿ ಅನುಕೂಲಕರವಾಗಿದೆ. ಸಂಸಾರದ ಹೊಣೆಗಾರಿಕೆಯ ಕಾರಣದಿಂದಾಗಿ ಆದಾಯ ವೆಚ್ಚಗಳು ಸರಿ ಸಮವಾಗಿರುವುದು.