ಸರ್ಕಾರಿ ಲೋಕೋಪಯೋಗಿ ಕೆಲಸದ ಗುತ್ತಿಗೆದಾರರು ಕಾಮಗಾರಿಗಳನ್ನು ನಿಮ್ಮೆಡೆಗೆ ಮಾಡಿಕೊಳ್ಳುವ ವಿಚಾರದಲ್ಲಿ ಎಡವಿ ಬೀಳುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗುವುದು.
ವೃಷಭ
ಮನೆಯ ಹತ್ತಿರದಲ್ಲಿನ ಅತಿ ಜನಸಂಖ್ಯೆ ಸೇರುವ ಕಾರ್ಯಕ್ರಮವು ಶಾಂತಚಿತ್ತಕ್ಕೆ ಭಂಗ ತರುವುದು. ಮದುವೆಯ ಪ್ರಯುಕ್ತ ವಿಲಾಸೀ ಸಾಮಗ್ರಿ
ಗಳನ್ನು ಖರೀದಿಸುವಿರಿ. ವಿವಾಹ ಅಪೇಕ್ಷಿಗಳಿಗೆ ಶುಭವಿದೆ.
ಮಿಥುನ
ಕಾರ್ಮಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿರ್ಧಾರವು ಬಹಳ ಅನುಕೂಲಕರವಾಗುವುದು. ಮನಸ್ಸಿನಲ್ಲಿ ನೋವಿದ್ದರೂ ಇತರರ ಎದುರು ನಗುಮೊಗದ ಮುಖವಾಡವನ್ನು ಧರಿಸಬೇಕಾದ ಪರಿಸ್ಥಿತಿ ಇರುತ್ತದೆ.
ಕರ್ಕಾಟಕ
ಜಮೀನು ಖರೀದಿ ಅಥವಾ ನಿವೇಶನಗಳ ಖರೀದಿಯ ವ್ಯವಹಾರಗಳಿಂದ ಲಾಭ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಸಂಗೀತಗಾರ ಕಂಠಸಿರಿಗೆ ಉತ್ತಮ ಪ್ರಶಂಸೆಗಳು ಕೇಳಿಬರುತ್ತವೆ.
ಸಿಂಹ
ಬಹುವಾಗಿ ಬೇಕಾದ ವ್ಯಕ್ತಿಗಳ ಅನುಪಸ್ಥಿತಿಯಿಂದ ಮಾಡುವ ಎಲ್ಲಾ ಕೆಲಸಗಳಲ್ಲೂ ಸಣ್ಣಪುಟ್ಟ ಗಡಿಬಿಡಿಗಳುಂಟಾಗಲಿವೆ. ಹತ್ತಿ ಬಟ್ಟೆಯ ತಯಾರಕರಿಗೆ ಹಾಗೂ ವ್ಯಾಪಾರಸ್ಥರಿಗೆ ಗ್ರಾಹಕರು ದೊರಕಲಿದ್ದಾರೆ.
ಕನ್ಯಾ
ತಾಂತ್ರಿಕ ವಿದ್ಯಾರ್ಥಿಗಳು ಉದ್ಯೋಗಕ್ಕಾಗಿ ಪರಿಶ್ರಮ ಮತ್ತು ದೇವರ ಕೃಪಾಕಟಾಕ್ಷ ಪಡಬೇಕಾಗುವುದು. ಸಂತುಷ್ಟವಾಗಿ ಜೀವಿಸುತ್ತಿರುವ ನೀವು ಇತರರ ಬೇಡದ ಮಾತುಗಳಿಗೆ ಬೆಲೆ ಕೊಡದಿರಿ.
ತುಲಾ
ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ದೊರಕುವ ಸುದ್ದಿಯಿಂದ ತುಸು ಸಮಾಧಾನ ಸಿಗುವುದು. ಬಹಳ ದಿನಗಳಿಂದ ಅಪೇಕ್ಷಿಸಿದ ಯಾತ್ರೆಗೆ ಶುಭ ಮುಹೂರ್ತ ಸಿಗುವುದು. ನರಸಿಂಹ ದೇವರ ಸೇವೆಯಿಂದ ಉತ್ತಮ ಫಲ.
ವೃಶ್ಚಿಕ
ಗಣಪತಿಗೆ ಸಂಬಂಧಿಸಿದಂತೆ ಹರಕೆಯ ರೂಪದಲ್ಲಿರುವ ಅಥವಾ ಬಹಳ ದಿನಗಳಿಂದ ಅಂದುಕೊಂಡಿದ್ದ ದೇವರ ಕೆಲಸಗಳನ್ನು ಮುಗಿಸುವ ಪ್ರಯತ್ನಮಾಡಿ. ದಾಯಾದಿಗಳು ಅಭಿವೃದ್ಧಿಗೆ ಅಡ್ಡಗಾಲು ಹಾಕಬಹುದು.
ಧನು
ಭಾವನೆಯ ಕಲ್ಪನಾ ಲೋಕದ ಬದಲು ವಾಸ್ತವದತ್ತ ಗಮನ ಹರಿಸಲು ಸೂಕ್ತ ಸಮಯ . ಕೆಲವು ದಿನಗಳ ಬಿಡುವಿಲ್ಲದ ದಿನಚರಿಯ ನಂತರ ಸ್ವಲ್ಪ ಬಿಡುವಿನ ದಿನ ಇಂದಾಗುವುದು.
ಮಕರ
ಕೈಯಲ್ಲಿರುವ ಹಣವನ್ನು ಪೂರ್ಣ ಪ್ರಮಾಣದಲ್ಲಿ ಖಾಲಿ ಮಾಡಿಕೊಳ್ಳುವುದು ಸರಿಯಲ್ಲ. ಮನೆಯ ಖರ್ಚಿನ ಮೇಲೆಯೂ ಹಿಡಿತವಿರಲಿ. ಸಮಸ್ಯೆಗಳು ಸರಾಗವಾಗಿ ಪರಿಹಾರವಾಗುವುದು.
ಕುಂಭ
ಹುಕಾಲ ನೆನಪಿನಲ್ಲಿ ಉಳಿಯುವಂಥ ಮಧುರ ಘಟನೆ ನಡೆಯಲಿದೆ ಬಹುದಿನದ ನಿವೇಶನ ಕೊಳ್ಳುವ ಕನಸು ನನಸಾಗಲಿದೆ. ಹಣದ ವಿಷಯದಲ್ಲಿ ದಾಕ್ಷಿಣ್ಯದ ಮಾತುಗಳಿಗೆ ಮರುಳಾಗಬೇಡಿ.
ಮೀನ
ಮುಜುಗರ ಮೀರಿ ನಿಮ್ಮ ಭಾವಿ ಜೀವನ ಸಂಗಾತಿಯಲ್ಲಿ ಮನಸ್ಸಿನ ಮಾತನ್ನು ಆಡುವುದರಿಂದ ಜೀವನದ ಅಡಿಪಾಯ ನಿಮ್ಮದಾಗುವುದು. ಧಾರ್ಮಿಕ ಕ್ಷೇತ್ರದಲ್ಲಿ ದುಡಿಯುವವರಿಗೆ ದೇವರ ರಕ್ಷಣೆ ಸಿಗುವುದು.