ADVERTISEMENT

ದಿನ ಭವಿಷ್ಯ: ಮಾಡಿದ ಕೆಲಸದಿಂದ ನೈತಿಕ ಧೈರ್ಯ ಹೆಚ್ಚುವುದು

ಸೋಮವಾರ, 15 ಸೆಪ್ಟೆಂಬರ್ 2025

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 14 ಸೆಪ್ಟೆಂಬರ್ 2025, 23:30 IST
Last Updated 14 ಸೆಪ್ಟೆಂಬರ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಪಾಠದ ರೂಪದಲ್ಲಿ ಮಗನಿಗೆ ಹೇಳುವ ಅನಿವಾರ್ಯತೆಯ ಸನ್ನಿವೇಶ ಎದುರಾಗುವುದು. ಮಾಡಿದ ಕೆಲಸದಿಂದ ನೈತಿಕ ಧೈರ್ಯ ಹೆಚ್ಚುವುದು.
  • ವೃಷಭ
  • ನಿರ್ದಿಷ್ಟ ಕೆಲಸಗಳನ್ನು ನಿರ್ದಿಷ್ಟ ಸಮಯದಲ್ಲಿ ಮಾಡಿ ಮುಗಿಸಿಕೊಳ್ಳುವಿರಿ. ವೈದ್ಯಕೀಯ ವೃತ್ತಿಯನ್ನು ಅನುಸರಿಸುವವರಿಗೆ ಆಯ-ವ್ಯಯ ಸಮತೋಲನದಲ್ಲಿದ್ದರೂ ಅಪವಾದದ ಭೀತಿ ಎದುರಾಗುವುದು.
  • ಮಿಥುನ
  • ಉದ್ಯೋಗದಲ್ಲಿ ಬದಲಾವಣೆಯ ಆಲೋಚನೆಯನ್ನು ಹೊಂದಿದವರು ಆ ಯೋಚನೆಯನ್ನು ಮರೆಯುವುದು ಒಳ್ಳೆಯದು. ಕೈಗಾರಿಕೆಯನ್ನು ನಡೆಸುವವರಿಗೆ ಅಧಿಕ ಖರ್ಚು ಸಂಭವಿಸಲಿದೆ.
  • ಕರ್ಕಾಟಕ
  • ಬಾಲ್ಯದ ಮುಗ್ಧತೆಯಿಂದ ತಪ್ಪಿಸಿಕೊಂಡ ಹಲವು ಅವಕಾಶಗಳನ್ನು ನೆನೆದು ಮರುಗುವಿರಿ. ಇಷ್ಟರ ತನಕ ಬಾರದೆ ಇದ್ದ ಸಂಬಂಧಿಕರ ಆಗಮನವು ಆಶ್ಚರ್ಯದ ಜತೆ ಸಂತಸವನ್ನು ತರುತ್ತದೆ. ಓದಿನಲ್ಲಿ ಏಕಾಗ್ರತೆ ಹೆಚ್ಚುವುದು.
  • ಸಿಂಹ
  • ಬದಲಾಗದೆ ಇರುವ ಕೆಲವೊಂದು ಮೊಂಡು ತೀರ್ಮಾನಗಳ ಬಗ್ಗೆ ಕುಟುಂಬದವರ ಅಸಮಾಧಾನ ವ್ಯಕ್ತವಾಗಬಹುದು. ನಿಮ್ಮ ಸಂತತಿಯವರೆ ವಿರೋಧಿಸುತ್ತಾರೆ. ಉದ್ಯೋಗದ ಗೌಪ್ಯತೆ ಬಿಟ್ಟುಕೊಡುವುದು ಸರಿಯಲ್ಲ.
  • ಕನ್ಯಾ
  • ಕೆಲಸದ ಗಡಿಬಿಡಿಯಿಂದಾಗಿ ಹಲವು ಬಾರಿ ಕೈಕಾಲುಗಳನ್ನು ಪೆಟ್ಟು ಮಾಡಿಕೊಳ್ಳುವ ಸಂಭವವಿದೆ. ಒಡನಾಡಿಗಳ ಪ್ರೀತಿ, ವಿಶ್ವಾಸ ಸಹಕಾರದಿಂದ ಕಾರ್ಯವನ್ನು ಸುಲಭದಲ್ಲಿ ಸಾಧಿಸುವಿರಿ.
  • ತುಲಾ
  • ಶಿಕ್ಷಕ ವೃತ್ತಿಯನ್ನು ಮಾಡುವವರಿಗೆ ಬೋಧನಾ ಕೆಲಸಕ್ಕಿಂತ ಮುಖ್ಯವಾಗಿ ದಾಖಲೆಯ ನಿರ್ವಹಣೆ ತಲೆಬಿಸಿ ಎನಿಸಲಿದೆ. ಸಣ್ಣ ವಿಚಾರದಲ್ಲಿ ಅಶಾಂತಿ ತೋರಿಬಂದು ದಾಂಪತ್ಯದಲ್ಲಿ ಕಿರಿಕಿರಿ ಎನಿಸುವುದು.
  • ವೃಶ್ಚಿಕ
  • ಹಲವಾರು ಕೆಲಸಗಳಲ್ಲಿ ಅಡೆತಡೆ ಉಂಟಾಗುತ್ತಿರುವುದು ದೇವರ ಹರಕೆಯನ್ನು ತೀರಿಸದ ಪ್ರಭಾವ ಇದ್ದಿರಬಹುದು. ಲಾಭದಾಯಕವೆನಿಸುವ ವ್ಯಕ್ತಿಗಳೊಂದಿಗೆ ಮಾತ್ರ ಮಾತನಾಡುವುದು ಸರಿಯಲ್ಲ.
  • ಧನು
  • ವೈದ್ಯರ ಸಲಹೆಯಂತೆ ದೇಹಾರೋಗ್ಯಕ್ಕಾಗಿ ಆಹಾರ ಸೇವನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗಬಹುದು. ಆಗು-ಹೋಗುಗಳನ್ನು ಪೂರ್ಣಗೊಳಿಸಲು ಹಣಕಾಸಿನ ಕೊರತೆ ಅಷ್ಟಾಗಿ ಕಾಡದು.
  • ಮಕರ
  • ಮುತ್ತು–ರತ್ನಗಳ ಆಭರಣದ ಖರೀದಿ ಮಾಡುವ ಸಂದರ್ಭದಲ್ಲಿ ಸ್ನೇಹಿತೆಯ ಅಭಿರುಚಿ ಸರಿ ಎನ್ನಿಸಬಹುದು. ನೆರೆಯವರ ಸಂಬಂಧಗಳು ಸುಧಾರಿಸುವುದು. ವನವಿಹಾರದಿಂದ ಮನಸ್ಸನ್ನು ತಿಳಿಗೊಳಿಸಬಹುದು.
  • ಕುಂಭ
  • ಸೋದರ ಮಾವನ ಸಹಾಯದಿಂದಾಗಿ ಕಟ್ಟಡ ನಿರ್ಮಾಣಕ್ಕೆ ಸಹಾಯವಾಗಬಹುದು. ದಿನಚರಿಯಲ್ಲಿ ಕೋಪ ಹಾಗೂ ಆಕ್ರಮಣಶೀಲತೆ ಎಲ್ಲರಿಗೂ ಗೋಚರವಾಗಬಹುದು. ಕೈತಪ್ಪಿ ಹೋದ ಹಣ ಪುನಃ ಕೈ ಸೇರುವುದು.
  • ಮೀನ
  • ಆರೋಗ್ಯದ ವಿಷಯದಲ್ಲಿ ಗೋಚರಕ್ಕೆ ಬಂದ ಸಮಸ್ಯೆಗಳನ್ನು ಗುರುತಿಸಿಕೊಂಡು ಅದನ್ನು ಪರಿಹರಿಸುವ ಬಗೆಯನ್ನು ಕಂಡುಹಿಡಿದರೆ ಉತ್ತಮ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಳ್ಳಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.