ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 13 ಅಕ್ಟೋಬರ್ 2025, 0:20 IST
Last Updated 13 ಅಕ್ಟೋಬರ್ 2025, 0:20 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ವಾಸಸ್ಥಾನದ ಬದಲಾವಣೆ ಬಯಸಿದ ನಿಮಗೆ ಹರ್ಷದ ಸಮಯವಾಗಿದೆ.ಇಷ್ಟದ ದೇವಾಲಯ ಅಥವಾ ಮನೆದೇವರ ಸ್ಥಾನಗಳಿಗೆ ಭೇಟಿ ಕೊಡುವ ಯೋಗವಿದೆ. ತವರಿನ ಸೆಳೆತ ಹೆಚ್ಚಾಗುತ್ತದೆ.
  • ವೃಷಭ
  • ನಿಮ್ಮ ಪಾತ್ರವನ್ನು ಬಹಳವಾಗಿ ಪ್ರಶಂಸಿಸಿ ಜನರು ಮಾತನಾಡುವರು. ಹೊಸ ಹಿಂಬಾಲಕರನ್ನು ಸಂಪಾದಿಸುವಿರಿ. ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪಾಠ ಕಲಿಯುವಿರಿ.
  • ಮಿಥುನ
  • ಸಣ್ಣ ಸಣ್ಣ ಸಮಸ್ಯೆಗಳನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡಿಕೊಂಡು ಪರಿಹಾರವನ್ನು ಕ್ಲಿಷ್ಟಕರವನ್ನಾಗಿ ಮಾಡಿಕೊಳ್ಳದಿರಿ. ಸಾಕಿದ ಜಾನುವಾರು ಆರೋಗ್ಯ ನಿರ್ವಹಣೆಗೋಸ್ಕರ ಹಣವನ್ನು ವಿನಿಯೋಗ ಮಾಡುವಿರಿ.
  • ಕರ್ಕಾಟಕ
  • ಅರಣ್ಯ ಚಾರಣಿಗರಿಗೆ ಬಯಸಿದ ಸ್ಥಾನಕ್ಕೆ ತೆರಳುವ ಅವಕಾಶವು ಸಿಗದೆ ಬಹಳ ಬೇಸರವಾಗುತ್ತದೆ. ಅವಘಡವನ್ನು ಸರಿಪಡಿಸಿಕೊಂಡು ಮರೆಯಲು ಹೆಚ್ಚಿನ ಸಮಯ ಹಿಡಿಯಬಹುದು.
  • ಸಿಂಹ
  • ಆತ್ಮೀಯರ ಅಗಲಿಕೆಯಿಂದಾಗಿ ಕ್ಷಣವು ಸಹ ಯುಗಗಳನ್ನು ಕಳೆದ ಅನುಭವವಾಗಬಹುದು. ಭೂಮಿ ಖರೀದಿ ವಿಚಾರ ಮುಂದಕ್ಕೆ ಹಾಕುವ ಪರಿಸ್ಥಿತಿ ಕಂಡುಬಂದೀತು. ದಿನನಿತ್ಯದ ಹಣಕಾಸಿನ ಕೊರತೆ ಇರುವುದಿಲ್ಲ.
  • ಕನ್ಯಾ
  • ಶೈಕ್ಷಣಿಕ ಹಾಗೂ ಸಾಂಸಾರಿಕ ಪರೀಕ್ಷೆಗಳೆರಡರಲ್ಲೂ ಫಲಿತಾಂಶವನ್ನು ಪಡೆಯಲು ಪ್ರಯತ್ನ ಈಗಿನದ್ದಕ್ಕಿಂತ ಹೆಚ್ಚು ಅಗತ್ಯವಿದೆ. ಮಾಡಿದ ಪ್ರಯಾಣದ ಪರಿಣಾಮವಾಗಿ ದೇಹಾಯಾಸ ಹಾಗೂ ನೋವನ್ನು ಅನುಭವಿಸುವಿರಿ.
  • ತುಲಾ
  • ಗೆಲುವು ಅತ್ಯಂತ ಸಮೀಪ ಇರುವುದು, ದೂರ ಇದ್ದಂತೆ ಭಾಸವಾಗಿ ಬೇಸರಗೊಂಡು ಕೈಬಿಡದಿರಿ. ಕೆಲಸಗಾರರ ಸಮಸ್ಯೆಗಳಿಗೆ ಸ್ಪಂದಿಸುವುದು ಅನಿವಾರ್ಯ‌. ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯವಹಾರಗಳಿಂದ ಲಾಭವಿರುವುದು.
  • ವೃಶ್ಚಿಕ
  • ತಪ್ಪುಗಳನ್ನು ತಿದ್ದಿಹೇಳುವಲ್ಲಿ ಹಿರಿಯ ಅಧಿಕಾರಿಗಳು ನೆರವಿಗೆ ನಿಲ್ಲುವರು. ಮನಸ್ಸಿಗೆ ಕಡಿವಾಣ ಹಾಕುವುದು ಉತ್ತಮ. ಭಾರತಿದೇವಿಯ ಸದ್ಪರಂಪರೆಯಲ್ಲಿ ಇರುವುದಕ್ಕೆ ಹೆಮ್ಮೆ ಪಡುವಂತೆ ಆಗುತ್ತದೆ. ‌
  • ಧನು
  • ಇಂಪಾದ ವಾದ್ಯ ಸಂಗೀತ ಕದಡಿದ ನಿಮ್ಮ ಮನಸ್ಸನ್ನು ತಿಳಿಗೊಳಿಸುವಲ್ಲಿ ಸಹಕಾರಿ. ವ್ಯವಹಾರದ ಪಾರದರ್ಶಕತೆ ಶುಭವನ್ನುಂಟು ಮಾಡುತ್ತದೆ. ಹೆಚ್ಚು ಜ್ಞಾನ ಪಡೆಯುವ ಮನಸ್ಸಿನಿಂದ ಪರ ಊರಿಗೆ ತೆರಳುವ ಸಾಧ್ಯತೆ ಇದೆ.
  • ಮಕರ
  • ಕುಟುಂಬದ ವ್ಯಕ್ತಿಗಳ ನಿರೀಕ್ಷೆಗಳನ್ನು ಸೂಕ್ಷ್ಮವಾಗಿ ತಿಳಿದು ಅದರಂತೆ ಬದುಕುವುದು ಸರ್ವಕ್ಷೇಮ. ಮಕ್ಕಳ ಆಟಿಕೆ ಸಾಮಾನು ಮಾರಾಟಗಾರರಿಗೆ ಲಾಭ. ವಿವಿಧ ಹೊಸ ಮೂಲಗಳಿಂದ ಧನಾಗಮವಾಗುವುದು.
  • ಕುಂಭ
  • ವೃತ್ತಿಯಲ್ಲಿ ರಾತ್ರಿ ಪಾಳಿ ತಪ್ಪುವಂಥ ಘಟನೆ ನಡೆದ ಕಾರಣದಿಂದಾಗಿ ಮನಸ್ಸಿಗೆ ಸಮಾಧಾನವಾಗುವುದು. ಉತ್ತರ ತಿಳಿಯದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಗೋಜಿನಲ್ಲಿ ವಾಸ್ತವವನ್ನು ಮರೆಯದಿರಿ.
  • ಮೀನ
  • ಸಸ್ಯಶಾಸ್ತ್ರಜ್ಞರು ಶಿಲೀಂಧ್ರಗಳ ಅಧ್ಯಯನ ನಡೆಸುವುದಿದ್ದಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸುವುದು ಸೂಕ್ತ. ಮನೆಯ ದುರಸ್ತಿ ಕಾರ್ಯಗಳು ಅಥವಾ ನೂತನ ಮನೆಯ ನಿರ್ಮಾಣವನ್ನು ಬೇಗ ಮುಗಿಸುವುದು ಸೂಕ್ತ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.