ADVERTISEMENT

ದಿನ ಭವಿಷ್ಯ: ವೆಂಕಟೇಶ ಸ್ವಾಮಿಯ ಕೃಪೆಯಿಂದ ಕಷ್ಟಗಳು ಪರಿಹಾರವಾಗಲಿವೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಡಿಸೆಂಬರ್ 2025, 0:30 IST
Last Updated 31 ಡಿಸೆಂಬರ್ 2025, 0:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಕಾನೂನು ವಿಷಯದಲ್ಲಿ ನಂಬಿಕಸ್ಥ ಹಾಗು ತಿಳಿವಳಿಕೆಯುಳ್ಳ ವ್ಯಕ್ತಿಯಿಂದ ಸಲಹೆ ಪಡೆದುಕೊಳ್ಳುವಿರಿ. ಕೆಲಸದ ಹೊರೆ ಹೆಚ್ಚಾಗಿ ಮಡದಿ ಮಕ್ಕಳಿಂದ ಸಹಕಾರ ಯಾಚಿಸಬೇಕಾಗುವುದು.
  • ವೃಷಭ
  • ಕೌಟುಂಬಿಕವಾಗಿ ನಡೆದುಕೊಂಡು ಬಂದಂಥ ದೇವತಾ ಅಥವಾ ದೈವ ಕಾರ್ಯವನ್ನು ಹಮ್ಮಿಕೊಳ್ಳುವ ತೀರ್ಮಾನ ಆಗುವುದು. ಸಹೋದ್ಯೋಗಿಯ ನೆರವಿನಿಂದ ಕಾರ್ಯಗಳು ಶೀಘ್ರ ಸಂಪನ್ನಗೊಳ್ಳಲಿವೆ.
  • ಮಿಥುನ
  • ಸೃಜನಶೀಲ ಬರವಣಿಗೆಗಳಿಂದ ಖ್ಯಾತಿ, ಹಣವನ್ನು ಗಳಿಸುವಿರಿ. ಧ್ಯಾನ ಮತ್ತು ಯೋಗದತ್ತ ಗಮನ ಹರಿಸುವಿರಿ. ಸಾಹಿತ್ಯ ವಿದ್ವಾಂಸರು ಅನವಶ್ಯಕ ಮಾತುಗಳಿಂದ ದೂರವಿರುವುದು ಒಳಿತು.
  • ಕರ್ಕಾಟಕ
  • ಮನೆತನದ ವೃತ್ತಿಯನ್ನೇ ಮುಂದುವರಿಸಿಕೊಂಡು ಹೋಗುತ್ತಿರುವವರಿಗೆ ಹಿರಿಯರಿಂದ ಪಡೆದ ಸಲಹೆಯು ಜೀವನಕ್ಕೆ ಹೊಸ ಬುನಾದಿಯಾಗಲಿದೆ. ಆದಾಯ ವೆಚ್ಚಗಳನ್ನು ಸರಿದೂಗಿಸಿಕೊಳ್ಳುವಿರಿ.
  • ಸಿಂಹ
  • ಧರ್ಮ-ಕರ್ಮಗಳಲ್ಲಿ ಆಸಕ್ತಿ ತೋರಿದರೆ, ಕಾರ್ಯ ಕ್ಷೇತ್ರ ಹಾಗೂ ಜೀವನದಲ್ಲಿ ಅಭೀಷ್ಟ ಪಡೆಯಬಹುದು. ಆಸ್ಪತ್ರೆ ಸಿಬ್ಬಂದಿ ವರ್ಗಕ್ಕೆ ಸೌಲಭ್ಯ ಸಿಗಲಿದೆ. ಶಾರೀರಿಕ ಆರೋಗ್ಯ ಉತ್ತಮವಾಗುವುದು.
  • ಕನ್ಯಾ
  • ನಿರೀಕ್ಷಿಸಿದ ಕಾರ್ಯಗಳು ಅವಿಘ್ನವಾಗಿ ನೆರವೇರಿ ಮನಸ್ಸಿಗೆ ನೆಮ್ಮದಿ ಉಂಟಾಗಲಿದೆ. ಕೆಲವೊಂದು ಪ್ರತಿಕೂಲ ಫಲಗಳೇ ಕಾರ್ಯಕ್ಷೇತ್ರದಲ್ಲಿದ್ದರೂ ಚಿಂತಿಸುವ ಅವಶ್ಯಕತೆ ಇಲ್ಲ. ಭಾವನೆಗಳನ್ನು ಹೊರ ಹಾಕುವಂತಾಗಲಿದೆ.
  • ತುಲಾ
  • ಪಿತ್ರಾರ್ಜಿತ ಆಸ್ತಿಗಳ ವಿಚಾರದಲ್ಲಿ ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಿಬರಲಿದೆ. ಅಂತಿಮ ಕ್ಷಣಗಳಲ್ಲಿ ಪಶ್ಚ್ತಾತ್ತಾಪ ಪಡುವ ಬದಲು ಮುಂಜಾಗ್ರತಾ ಕ್ರಮ ಕೈಗೊಳ್ಳಿ. ತೀರ್ಮಾನ ಬಹುಮಟ್ಟಿಗೆ ಸರಿಯಾಗಿರುವುದು.
  • ವೃಶ್ಚಿಕ
  • ಆದಾಯದಲ್ಲಿ ಸಣ್ಣ ಹೊಡೆತವನ್ನು ಎದುರಿಸುವಂತಾಗಬಹುದು. ಕಾರಣವನ್ನು ಹುಡುಕಿ ಪಾಠದ ರೀತಿಯಲ್ಲಿ ತೆಗೆದುಕೊಳ್ಳುವುದು ಉತ್ತಮ. ಮನೆಯಲ್ಲಿ ನವ ಶಿಶುವಿನ ಆಗಮನದಿಂದ ಸಂಭ್ರಮ ಉಂಟಾಗುವುದು.
  • ಧನು
  • ಗಂಡನ ಹಣಕಾಸಿನ ಪರಿಸ್ಥಿತಿಗೆ ಶ್ರಮಿಸಿ ಸಹಕರಿಸಬೇಕಾದಂತೆ ಆಗುವುದು. ಸುತ್ತಲಿನ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ. ತಂದೆ ತಾಯಿಯು ನಿಮ್ಮ ಕಷ್ಟಕಾರ್ಪಣ್ಯಗಳಿಗೆ ನೆರವಾಗಲಿದ್ದಾರೆ.
  • ಮಕರ
  • ಕಾರ್ಯಗಳ ಬಗ್ಗೆ ಹೆಚ್ಚಿನ ನಿಗಾವನ್ನು ಕೊಡುವಂತೆ ಅಧಿಕಾರಿಗಳಿಂದ ತೀಕ್ಷ್ಣವಾದ ಸಂದೇಶ ಬರಲಿದೆ. ವೈದ್ಯರಿಗೆ ವೃತ್ತಿಯಲ್ಲಿ ಸವಾಲೆನಿಸುವ ವಿಷಯಗಳಲ್ಲಿ ಯಶಸ್ಸು ಕಂಡುಬರಲಿದೆ. ದೇಹಕ್ಕೆ ಶೀತ ಬಾಧೆ ಬರಲಿದೆ.
  • ಕುಂಭ
  • ವೃತ್ತಿರಂಗದಲ್ಲಿ ಅನವಶ್ಯಕವಾಗಿ ಇತರರ ಕೋಪಕ್ಕೆ ಗುರಿಯಾಗುವುದನ್ನು ಸ್ನೇಹಿತರು ಅಥವಾ ಸಹೋದ್ಯೋಗಿಗಳು ತಪ್ಪಿಸುವರು. ಸಹೋದ್ಯೋಗಿಗಳೊಡನೆ ಅನವಶ್ಯಕವಾದ ವಾದ-ವಿವಾದಗಳು ನಡೆಯದಂತೆ ವರ್ತಿಸಿ.
  • ಮೀನ
  • ರಸಗೊಬ್ಬರ ಮತ್ತು ಕೀಟನಾಶಕ ವ್ಯಾಪಾರಿಗಳಿಗೆ ಲಾಭದ ಜೊತೆ ಆಯಾಸವೂ ಕಾಡಲಿದೆ. ಅನವಶ್ಯಕವಾಗಿ ದೂರದ ಪ್ರಯಾಣದ ಸಾಧ್ಯತೆ ಇದೆ. ವೆಂಕಟೇಶ ಸ್ವಾಮಿಯ ಕೃಪೆಯಿಂದ ಕಷ್ಟಗಳು ಪರಿಹಾರವಾಗಲಿವೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.