ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ವ್ಯವಹಾರದಲ್ಲಿ ನಷ್ಟವಾಗಬಹುದು

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 12 ಅಕ್ಟೋಬರ್ 2025, 0:22 IST
Last Updated 12 ಅಕ್ಟೋಬರ್ 2025, 0:22 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಸಕಾರಾತ್ಮಕವಾಗಿ ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ನೇಕಾರರಿಗೆ ಉತ್ತಮ ಆದಾಯ ಇರಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಬಂಧುಗಳ ಸಹಾಯ ದೊರಕುವುದು. ಕುಲದೇವರ ಆರಾಧನೆಯಿಂದ ಶುಭವಾಗುವುದು.
  • ವೃಷಭ
  • ನೀವು ಈ ದಿನ ಮಾಡುವ ಬುದ್ಧಿವಂತಿಕೆಯ ಕೆಲಸದಿಂದಾಗಿ ಗುಂಪಿನಲ್ಲಿ ಗುರುತಿಸುವಂಥ ವ್ಯಕ್ತಿಯಾಗುವ ಲಕ್ಷಣ ಕಾಣುತ್ತಿದೆ.
  • ಮಿಥುನ
  • ರಾಜಕೀಯ ಕ್ಷೇತ್ರದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ನಿಮ್ಮ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಹವಾಮಾನದಲ್ಲಿ ಆಗುವ ಬದಲಾವಣೆಯು ನಿಮ್ಮ ಆರೋಗ್ಯದ ಮೇಲೆ ಸಂಪೂರ್ಣ ಪ್ರಭಾವ ಬೀರಲಿದೆ. ಜಾಗ್ರತೆವಹಿಸಿರಿ.
  • ಕರ್ಕಾಟಕ
  • ನಿಮ್ಮ ಶೀಘ್ರವಾದ ಕಲಿಕಾ ಸಾಮರ್ಥ್ಯವು ಇತರರು ಹುಬ್ಬೇರುವಂತೆ ಮಾಡುತ್ತದೆ. ಪೌಷ್ಠಿಕ ಆಹಾರ, ಬೇಳೆ ಕಾಳುಗಳನ್ನು ಹೆಚ್ಚಾಗಿ ಸೇವಿಸುವುದರ ಮೂಲಕ ನಿಮಗೆ ಉಂಟಾಗಿರುವ ನಿಶ್ಶಕ್ತಿಯನ್ನು ನಿವಾರಿಸಿಕೊಳ್ಳಬಹುದು.
  • ಸಿಂಹ
  • ಹಠಮಾರಿತನದಿಂದ ಮಕ್ಕಳ ಪ್ರತಿಯೊಂದು ಹೆಜ್ಜೆಗೂ ಸಹ ವಿವಿಧ ಕಾರಣಗಳನ್ನು ನೀಡಿ ಅವರನ್ನು ಅಸಮಾಧಾನಪಡಿಸಲು ಹೋಗಬೇಡಿ.
  • ಕನ್ಯಾ
  • ಇತ್ತೀಚಿಗಷ್ಟೆ ವೈವಾಹಿಕ ಜೀವನ ಆರಂಭಿಸಿರುವವರು ಧೈರ್ಯದಿಂದ ಎಲ್ಲ ಕಷ್ಟವನ್ನು ಎದುರಿಸುವ ಮನಸ್ಥಿತಿಯನ್ನು ಬೇಗ ಹೊಂದಬೇಕು. ಸಂಗೀತ ಹಾಗೂ ಭರತನಾಟ್ಯದಂತಹ ಇತರೆ ಚಟುವಟಿಕೆಯಲ್ಲಿ ಆಸಕ್ತಿ ಹೆಚ್ಚಾಗಬಹುದು.
  • ತುಲಾ
  • ಭವಿಷ್ಯವನ್ನು ಗ್ರಹಿಸುವ ನಿಮ್ಮ ವಿಶೇಷ ಗುಣವನ್ನು ಮಿತ್ರರೆದುರು ಪ್ರದರ್ಶಿಸಿದಾಗ ಅವರು ಅವಕ್ಕಾಗುವ ಸಂಭವವಿದೆ. ನಿಮ್ಮ ನಿಲುವಿನಲ್ಲಿ ಆದಷ್ಟು ಸ್ಥಿರವಾಗಿರುವಂತಹ ಯೋಚನೆಯು ಜೀವನದಲ್ಲಿ ದಡ ಸೇರಲು ಸಹಾಯ‌ ಮಾಡುತ್ತದೆ.
  • ವೃಶ್ಚಿಕ
  • ಭಾವನಾತ್ಮಕವಾಗಿ ವರ್ತಿಸಿದಾಗ ಪರಿಹಾರವಾಗದ ಸಂಗತಿಯು, ತಾಳ್ಮೆಯಿಂದ ಕಾದರೆ ಸರಿಹೋಗುತ್ತದೆ. ಉತ್ತಮವಾದ ಮಾತಿನ ಕಲೆಯು ನಿಮ್ಮ ಬೆಂಬಲಕ್ಕೆ ಸದಾ ಇದ್ದೇ ಇರುತ್ತದೆ. ಗಣಪತಿಯ ಆರಾಧನೆ ಶುಭಪ್ರದ.
  • ಧನು
  • ನಿಮ್ಮ ವಿಶಿಷ್ಟ ರೀತಿಯ ವೃತ್ತಿ ಕೌಶಲ್ಯದ ಸೂಕ್ಷ್ಮ ವಿಚಾರಗಳನ್ನು ತಿಳಿಯಲು ಸಹೋದ್ಯೋಗಿಯೊಬ್ಬರು ಅಪೇಕ್ಷಿಸುವರು. ಸಕುಟುಂಬ ಸಮೇತರಾಗಿ ಯಾವುದಾದರು ಶಕ್ತಿಪೀಠಕ್ಕೆ ಭೇಟಿ ನೀಡುವಂತಹ ಯೋಚನೆ ಮಾಡಿ.
  • ಮಕರ
  • ಊರಿನ ಅಭಿವೃದ್ಧಿಗೆ ನಿಮ್ಮಿಂದ ಅಡಿಪಾಯ ಹಾಕುವಂತಹ ಕೆಲಸ ಕಾರ್ಯಗಳು ಜರುಗುವುದು. ಓದಿನಲ್ಲಿ ಹೆಚ್ಚಿನ ಆಸಕ್ತಿ ಮೂಡುವುದು.‌
  • ಕುಂಭ
  • ಅಭಿಪ್ರಾಯ ವಿನಿಮಯಗಳಿಂದ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನ ಸಿಗುವುದು. ಅದರಿಂದಾಗಿ ಮನಸ್ಸಿಗೆ ನೆಮ್ಮದಿ ಮೂಡುವುದು. ಹಣ್ಣು-ತರಕಾರಿಗಳ ವ್ಯಾಪಾರಿಗಳಿಗೆ ಲಾಭಾಂಶ ವೃದ್ಧಿಯಾಗುತ್ತದೆ.
  • ಮೀನ
  • ಮನೆಯ ಅಲಂಕಾರಿಕ ವಸ್ತುಗಳ ಖರೀದಿಗಾಗಿ ಅಧಿಕ ಖರ್ಚು ಬಂದೀತು. ಸಗಟು ವ್ಯಾಪಾರಿಗಳಿಗೆ ಖರ್ಚು-ವೆಚ್ಚಗಳು ಆದಾಯದ ಮಿತಿಯೊಳಗಿರುವುದು. ವ್ಯವಹಾರದಲ್ಲಿ ನಷ್ಟವಾಗಬಹುದು, ಜಾಗ್ರತೆ ವಹಿಸಿರಿ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.