ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಗಣಪತಿಯ ಆರಾಧನೆಯಿಂದ ವಿಘ್ನ ನಿವಾರಣೆಯಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 26 ಅಕ್ಟೋಬರ್ 2025, 23:30 IST
Last Updated 26 ಅಕ್ಟೋಬರ್ 2025, 23:30 IST
   
ಮೇಷ
  • ವಿದ್ಯಾರ್ಥಿಗಳ ಮುಂದೆ ಪಾಠ ಮಾಡಲು ತೆರಳಿ ವಿಷಯಗಳು ಅದಲು ಬದಲು ಮಾಡಿಕೊಳ್ಳುವ ಸಾಧ್ಯತೆ ಇದೆ. ಪೂರ್ವತಯಾರಿ ಅಗತ್ಯ. ಮನೆಯಲ್ಲಿ ನಡೆಯುವ ಶುಭ ಸಮಾರಂಭಕ್ಕೆ ಪಿತೃ ಸಮಾನರಿಂದ ಆಶೀರ್ವಾದ ಸಿಗುವುದು.
  • ವೃಷಭ
  • ಮಕ್ಕಳ ಸರ್ವತೋಮುಖ ಚಟುವಟಿಕೆ ಮತ್ತು ವಿದ್ಯಾಭ್ಯಾಸ ಉತ್ತಮ ವಾಗಿದ್ದು, ಕುಟುಂಬದಲ್ಲಿ ಸುಖ-ಶಾಂತಿ ತುಂಬಿರುತ್ತವೆ. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ಹಸನವಾಗಲಿದೆ.
  • ಮಿಥುನ
  • ವಸ್ತ್ರವಿನ್ಯಾಸ ಸಲಹೆಗಾರರಿಗೆ ಪ್ರತಿಷ್ಠಿತ ಗಾರ್ಮೆಂಟ್ ಸಂಸ್ಥೆಯೊಂದ ರಲ್ಲಿ ಉದ್ಯೋಗ ಸಿಗುವ ಕುರುಹುಗಳು ಸಿಗುತ್ತವೆ. ಸಲಹೆ ಸೂಚನೆಗಳನ್ನು ಮೇಲಧಿಕಾರಿಗಳು ವ್ಯತ್ಯಾಸವಿಲ್ಲದೆ ಜಾರಿಗೆ ತಂದದ್ದಕ್ಕೆ ಸಂತೋಷವಾಗಲಿದೆ.
  • ಕರ್ಕಾಟಕ
  • ಮನರಂಜನೆಗಾಗಿ ದುಂದುವೆಚ್ಚ ಮಾಡಿ ಮುಂದಿನ ದಿನಗಳಲ್ಲಿ ಕೊರಗುವಂತೆ ಮಾಡಿಕೊಳ್ಳದಿರಿ. ಭೂಮಿ ಅಥವಾ ವಾಹನ ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ ಇದ್ದು, ಎಚ್ಚರವಿರಲಿ.
  • ಸಿಂಹ
  • ಸ್ನೇಹಪರ ಸ್ವಭಾವದಿಂದಾಗಿ ಕಾರ್ಯಕ್ಷೇತ್ರದಲ್ಲಿ ವೈಯಕ್ತಿಕ ಸ್ಥಾನಮಾನಗಳು ಲಭಿಸಲಿವೆ. ಎಲ್ಲವನ್ನು ಮಾಡಬಲ್ಲೆನೆಂಬ ಹುಮ್ಮಸ್ಸು ಅನುಭವದಿಂದ ಬಂದಿದೆ. ಸುಲಭವಾಗಿ ಕೆಲಸ ಪೂರೈಸುವಿರಿ.
  • ಕನ್ಯಾ
  • ದೈವಾನುಗ್ರಹ ನಿಮ್ಮ ಪಾಲಿಗೆ ಸಂಪೂರ್ಣವಿದ್ದು ತೊಂದರೆಗಳನ್ನು ನಿವಾರಿಸಿ ವೃತ್ತಿರಂಗದಲ್ಲಿ ಉತ್ತಮ ರೀತಿಯಲ್ಲಿ ಮುಂದುವರಿಯಲು ಪೂರಕ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಇರುವುದು.
  • ತುಲಾ
  • ಕುಟುಂಬದ ಸದಸ್ಯರಲ್ಲಿ ಆದಷ್ಟು ತಾಳ್ಮೆ-ಸಮಾಧಾನದಿಂದ ವರ್ತಿಸಬೇಕಾದೀತು. ಹೊಸ ಕಾರ್ಯಗಳ ಚಾಲನೆಗೆ ಸೂಕ್ತ ಸಮಯವಲ್ಲ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಯೋಗವಿದೆ.
  • ವೃಶ್ಚಿಕ
  • ಉದ್ಯೋಗ-ವ್ಯವಹಾರಗಳಲ್ಲಿ ತೊಂದರೆ ಕಂಡುಬರಬಹುದು. ಜಾಗ್ರತೆಯಿಂದಿರಿ. ಕೋರ್ಟು-ಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ಪಡೆಯುವಲ್ಲಿ ತೊಡಕು ಇರಲಿದೆ. ಗಣಪತಿಯ ಆರಾಧನೆಯಿಂದ ವಿಘ್ನ ನಿವಾರಣೆ.
  • ಧನು
  • ಅತಿಯಾಗಿ ಪ್ರೀತಿಸುವ ಹಾಗೂ ಆದರಿಸುವ ಜನರೊಂದಿಗೆ ಕಾಲ ಕಳೆಯಲು ಸಕಾಲ. ವ್ಯಾಪಾರದ ವಿಚಾರದಲ್ಲಿ ಬದಲಾವಣೆ ಇದ್ದಲ್ಲಿ, ಅವರೊಂದಿಗೆ ಗಂಭೀರ ಚರ್ಚೆ ನಡೆಸಿ,ತೀರ್ಮಾನಕ್ಕೆ ಬನ್ನಿರಿ.
  • ಮಕರ
  • ಸರ್ಕಾರಿ ಉದ್ಯೋಗ ಅಥವಾ ಕೆಲಸಗಳು ನೆರವೇರಲಿವೆ. ಅಧ್ಯಾಪಕ ವರ್ಗದವರಿಗೆ ವಿಧ್ಯಾರ್ಥಿಗಳ ಮೇಲುಗೈಯಿಂದ ಸಂತೋಷ ಹಾಗೂ ಗೌರವ ಸಿಗುವುದು. ಮುಂದಾಲೋಚನೆ ಇಲ್ಲದೇ ಭರವಸೆಯನ್ನೂ ನೀಡಬೇಡಿ.
  • ಕುಂಭ
  • ಅವಕಾಶದ ಜೊತೆಯಲ್ಲಿ ಅದೃಷ್ಟವೂ ಪಾಲಿಗಿದೆ. ಯಾವುದೇ ಕೆಲಸ ಮಾಡುವ ಮುನ್ನ ಅದರ ಫಲಾಫಲಗಳನ್ನು ಅರಿತು ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿದಲ್ಲಿ ಕಹಿಯ ಸನ್ನಿವೇಶಗಳು ಸಹಜ ಸ್ಥಿತಿಗೆ ಮರಳಲಿವೆ.
  • ಮೀನ
  • ಬಂಗಾರದ ಮೇಲಿನ ಹೂಡಿಕೆ ವಿಚಾರಗಳು ಮಹತ್ವ ಪಡೆಯುವುದು. ಸಮಾಜದಲ್ಲಿ ಹೆಸರು ಲಭಿಸುವುದರ ಜತೆಗೆ ಬೇಡಿಕೆ ಹೆಚ್ಚಾಗಲಿದೆ. ಕಾಲಿನ ನೋವು ನಿವಾರಣೆಗೆ ವ್ಯಾಯಾಮ, ತೈಲ ಲೇಪನ ನೆರವಾಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.