ADVERTISEMENT

ದಿನ ಭವಿಷ್ಯ: ಈ ರಾಶಿಯವರು ಸಮಸ್ಯೆ ಬಗೆಹರಿಸಲು ಜಾಣತನ, ಬುದ್ಧಿವಂತಿಕೆ ಬಳಸಿಕೊಳ್ಳಿ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
   
ಮೇಷ
  • ಕೊನೆ ಕ್ಷಣದವರೆಗೂ ಜೊತೆಯನ್ನು ಕೊಡುವಂಥ ಸ್ನೇಹಿತರನ್ನು ಸಂಪಾದನೆ ಮಾಡುವಿರಿ. ಕಾರ್ಮಿಕ ವರ್ಗದವರ ಹೆಚ್ಚಿನ ಬೇಡಿಕೆಗಳು ವ್ಯವಸ್ಥಾಪಕರಿಂದ ಈಡೇರಲಿವೆ. ಹಿತವಾದ ಆಹಾರ ಸೇವಿಸಿರಿ.
  • ವೃಷಭ
  • ಸ್ವಚ್ಛಂದವಾಗಿ ಯೌವನವನ್ನು ಅನುಭವಿಸುತ್ತಿರುವ ನಿಮಗೆ ಮದುವೆ ಎನ್ನುವ ಹೆಚ್ಚುವರಿ ಜವಾಬ್ದಾರಿಯನ್ನು ಹೊರೆಸಲು ಪರಿವಾರದವರೆಲ್ಲರೂ ಕಾತರರಾಗುವರು. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದಂತೆ ಆಗಲಿದೆ.
  • ಮಿಥುನ
  • ಆತ್ಮಗೌರವಕ್ಕೆ ಹೆಚ್ಚು ಪ್ರಾಶಸ್ತ ನೀಡುವ ನಿಮಗೆ ಅಹಿತಕರ ಘಟನೆ ಮರೆಯಲು ಹೆಚ್ಚಿನ ಸಮಯ ಬೇಕಾಗುವುದು. ಭೂಸಂಬಂಧಿ ವ್ಯವಹಾರದಲ್ಲಿರುವವರಿಗೆ ಧನಲಾಭ. ಸಾಲ ತೀರಿಸುವ ಬಗ್ಗೆ ಯೋಚಿಸಿ.
  • ಕರ್ಕಾಟಕ
  • ಸಹಾಯ ಗುಣ ಹೊಂದಿರುವ ಕಾರಣದಿಂದ ಸಹಪಾಠಿಗಳೊಂದಿಗಿನ ಬಾಂಧವ್ಯ ಉತ್ತಮಗೊಳ್ಳುವುದು. ಮನುಷ್ಯ ಪ್ರಯತ್ನದ ಜತೆ ಆಂಜನೇಯನ ಮೊರೆ ಹೋಗುವುದರಿಂದ ಕಾರ್ಯಸಿದ್ಧಿ.
  • ಸಿಂಹ
  • ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಅಥವಾ ವಿಶೇಷ ಗೌರವಗಳು ಲಭಿಸಲಿವೆ. ಕೆಲಸ ಕಾರ್ಯಗಳಲ್ಲಿ ಉತ್ಸಾಹವನ್ನು ಕಾಣುವಿರಿ. ಅಸಮರ್ಪಕ ನಿರ್ಧಾರಗಳನ್ನು ಕೈಗೊಳ್ಳದಿರಿ.
  • ಕನ್ಯಾ
  • ಕಾರ್ಯಸಾಧನೆಗೆ ಪ್ರಯತ್ನದ ಹೊರತಾಗಿ ದೈವಬಲ ಇರಬೇಕಾಗುತ್ತದೆ ಎಂದು ಅರಿತುಕೊಂಡು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿ. ವದಂತಿಗಳಿಗೆ ಬೆಲೆಕೊಟ್ಟು ತೀರ್ಮಾನಕ್ಕೆ ಬರುವುದು ಸರಿಯಲ್ಲ.
  • ತುಲಾ
  • ಮನೆಗೆ ಹೊಂದಿಕೊಂಡಂತೆ ಇರುವಂತಹ ದೇವಾಲಯದ ಜೀರ್ಣೊದ್ಧಾರ ಮಾಡುವ ಮಾತುಕತೆ ಆಗಬಹುದು. ಹವಾನಿಯಂತ್ರಣದ ವಾತಾವರಣವು ಸರಿಹೋಗದೆ ಇರಬಹುದು. ಅಲರ್ಜಿ ಉಂಟಾಗಬಹುದು.
  • ವೃಶ್ಚಿಕ
  • ಮನೆಯಲ್ಲಿ ನಿಮ್ಮ ಶಕ್ತಿಗೂ ಮೀರಿ ನೀವು ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಇತರರು ಲಘುವಾಗಿ ಮಾತನಾಡಿದಾಗ ಕೋಪ ಬಂದರೂ ಸುಮ್ಮನಿರಬೇಕಾದ ಪರಿಸ್ಥಿತಿ ನಿಮ್ಮನ್ನು ಹೈರಾಣಾಗಿಸುತ್ತದೆ.
  • ಧನು
  • ತಂತ್ರಜ್ಞಾನದಲ್ಲಿ ಅನುಭವವು ಹೊಸ ಕಾರ್ಯಕ್ಷೇತ್ರದಲ್ಲಿ ಕಡಿಮೆ ಎಂದು ಅನ್ನಿಸುವುದು. ಸುಮುಹೂರ್ತದಲ್ಲಿ ನಡೆದ ಒಳ್ಳೆಯ ಕಾರ್ಯಕ್ರಮ ಉತ್ತಮ ಫಲ ನೀಡುವುದರಲ್ಲಿ ಸಂಶಯವಿಲ್ಲ.
  • ಮಕರ
  • ಸಮಸ್ಯೆ ಬಗೆಹರಿಸಲು ಜಾಣತನ, ಬುದ್ಧಿವಂತಿಕೆ ಬಳಸಿಕೊಳ್ಳಿ. ನಿತ್ಯದ ಕೆಲಸಗಳಲ್ಲಿ ಬದಲಾವಣೆ ಇರುವುದಿಲ್ಲ. ಖುಷಿ ಕೊಡುವ ಹವ್ಯಾಸದ ಕೆಲಸಗಳನ್ನು ಎಷ್ಟೇ ಬಿಡುವಿಲ್ಲದ ದಿನವಾಗಿದ್ದರೂ ಮಾಡುವಿರಿ.
  • ಕುಂಭ
  • ಸಹಜೀವನದಲ್ಲಿ ದೊರೆಯುವ ಸಹಕಾರ ಹಾಗೂ ಖುಷಿಯನ್ನು ಒಬ್ಬಂಟಿಯಾಗಿ ಜೀವಿಸುತ್ತಿರುವ ಬಹಳವಾಗಿ ನೆನೆಸಿಕೊಳ್ಳುವಿರಿ. ಉದ್ಯೋಗದಲ್ಲಿ ಕಂಡುಬಂದ ತಾಂತ್ರಿಕ ಸಮಸ್ಯೆ ನಿವಾರಣೆಯಾಗುವುದು.
  • ಮೀನ
  • ಕೂದಲೆಳೆಯಷ್ಟು ತಪ್ಪುಗಳನ್ನು ಮಾಡಿದ್ದಕ್ಕೆ ಆತಂಕಕ್ಕೆ ಒಳಗಾಗುವ ಪರಿಸ್ಥಿತಿ ಎದುರಾಗಬಹುದು. ವೈಯಕ್ತಿಕ ತೃಪ್ತಿ ಧ್ಯೇಯೋದ್ದೇಶ ತಿಳಿದು ಸಮಾಜಮುಖಿ ಆಗಬೇಕಾಗುತ್ತದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.