ADVERTISEMENT

ದಿನ ಭವಿಷ್ಯ:ಈ ರಾಶಿಯವರಿಗೆ ಸಜ್ಜನರ ಸಹವಾಸದಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗಲಿದೆ

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಅವಕಾಶಗಳೊಂದಿಗೆ ಹೆಸರಾಂತ ಕಂಪನಿಯಲ್ಲಿ ಕೆಲಸ ಸಿಗುವ ಸಾಧ್ಯತೆಗಳು ಇವೆ. ಮನೆ ಹಾಗೂ ಮನದಲ್ಲಿ ಸುಖ-ಶಾಂತಿ ಸಮೃದ್ಢಿಯಾಗಿ ಕಾಣಲಿದೆ.
  • ವೃಷಭ
  • ವಿದ್ಯಾರ್ಥಿಗಳಿಗೆ ಸಹವಾಸ ದೋಷದಿಂದಾಗಿ ಮನಸ್ಸು ಬೇಡದ ದಿಕ್ಕಿನಲ್ಲಿ ಹರಿಯುವುದು. ಸಾಧನೆ ಕಷ್ಟಕರವೆನಿಸಲಿದೆ. ಆಕಸ್ಮಿಕ ಧನಾಗಮನ ದಿಂದಾಗಿ ಬಾಕಿ ಇರಿಸಿಕೊಂಡಿದ್ದ ವ್ಯವಹಾರವು ಪೂರ್ಣಗೊಳ್ಳುವುದು.
  • ಮಿಥುನ
  • ಮೇಲಾಧಿಕಾರಿಯ ಮೃದು ವರ್ತನೆಯಿಂದ ನಿಮಗೆ ಸರ್ಕಾರದ ಕೆಲಸ ಕಾರ್ಯಗಳು ಯಶಸ್ವಿಯಾಗಿ ಸಂಪೂರ್ಣಗೊಂಡು ತೃಪ್ತಿಯುಂಟಾಗಲಿದೆ. ನಿಮ್ಮ ಸಮಸ್ಯೆಗೆ ಬಂಧು ಮಿತ್ರರ ನೆರೆವು ಸಿಗಲಿದೆ.
  • ಕರ್ಕಾಟಕ
  • ಈ ದಿನ ಕೈಗೊಳ್ಳುವ ಮುಖ್ಯ ಕೆಲಸವು ಮುಕ್ತಾಯದ ಹಂತವನ್ನು ಬಹಳ ವಿಳಂಬವಾಗಿ ನೋಡುತ್ತದೆ. ಸತ್ಯಾಸತ್ಯತೆಗಳನ್ನು ಅರಿಯುವ ಬಗ್ಗೆ ಹೆಚ್ಚಿನ ಗಮನವಿರಲಿ. ಬೂದು ಬಣ್ಣ ಶುಭ ತರಲಿದೆ.
  • ಸಿಂಹ
  • ದಿನಸಿ ಮತ್ತು ಆಲಂಕಾರಿಕ ವಸ್ತುಗಳ ವ್ಯಾಪಾರಸ್ಥರಿಗೆ ಶುಭದಿನ. ಮಕ್ಕಳ ಹಿತಾಸಕ್ತಿಯ ಕುರಿತು ಹೆಚ್ಚಿನ ಗಮನವಿರಲಿ. ಆರ್ಥಿಕ ವಿಚಾರದಲ್ಲಿ ನಿಮ್ಮ ಶ್ರಮಕ್ಕೆ ಸರಿಸಮಾನವಾಗಿ ದಿನದಿಂದ ದಿನಕ್ಕೆ ಹೆಚ್ಚಿನ ಅಭಿವೃದ್ಧಿ ಕಾಣುವಿರಿ.
  • ಕನ್ಯಾ
  • ಸಜ್ಜನರ ಸಹವಾಸ ಮಾಡುವುದರಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗುತ್ತದೆ. ಮೂಳೆ ವೈದ್ಯರು ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದು. ಈ ದಿನದ ಸಂಜೆಯ ಸಮಯದಲ್ಲಿ ವಾಹನ ಚಾಲನೆಯಲ್ಲಿ ಜಾಗರೂಕತೆ ವಹಿಸಿ.
  • ತುಲಾ
  • ಅವಿವೇಕಿಗಳ ನಡುವೆ ವಾದಿಸಲು ಹೋಗಬೇಡಿ. ವಿವೇಕಯುತ ನಡವಳಿಕೆಯು ಸಹಾಯಕ. ಹೊಸದನ್ನು ಕಲಿಯುವುದಕ್ಕೆ ಬಹಳ ಉತ್ಸುಕರಾಗಿದ್ದೀರಿ. ವಕೀಲರು ಕೈಗೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುವಿರಿ.
  • ವೃಶ್ಚಿಕ
  • ಏಜೆನ್ಸಿಯಂತಹ ಉದ್ಯೋಗ ತೆರೆಯಲು ಸೂಕ್ತ ಸ್ಥಳದ ಹುಡುಕಾಟ ದಲ್ಲಿರುವ ನಿಮಗೆ ಉತ್ತಮ ಸ್ಥಳ ದೊರೆಯುವುದು. ಅನಾರೋಗ್ಯ ಸ್ಥಿತಿ ಎದುರಾಗಿ ಸಂಪಾದನೆಯಲ್ಲಿ ಕೊರತೆ, ಉಳಿತಾಯದಲ್ಲಿ ನಷ್ಟ ವಾಗಬಹುದು.
  • ಧನು
  • ಮಹತ್ವದ ನಿರ್ಧಾರವನ್ನು ಕೈಗೊಳ್ಳಬೇಕಾದ ಸಮಯ ಎದುರಾಗಬಹುದು. ಉಪಹಾರ ಗೃಹಗಳಿಂದ ಅಧಿಕ ಲಾಭ. ಆತ್ಮೀಯರ ಸಲಹೆ ಮತ್ತು ಸಹಕಾರದಿಂದ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಬರಲಿದೆ.
  • ಮಕರ
  • ರೈತರ ಬೆಳೆಗೆ ಅದರಲ್ಲೂ ಅಧಿಕವಾಗಿ ಹಣ್ಣು ಹಂಪಲುಗಳ ಬೆಳೆಗಾರರಿಗೆ ಕೀಟಬಾಧೆ ಕಾಡುವುದು. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸವಿರಲಿದೆ. ಕುಲದೇವರ ಆರಾಧನೆಯಿಂದ ಶುಭ.
  • ಕುಂಭ
  • ತೆರಿಗೆ ಇಲಾಖೆ ಸಿಬ್ಬಂದಿಗೆ ಹೆಚ್ಚಿನ ಕೆಲಸವಿರುವುದು ದೇಹಾಯಾಸಕ್ಕೆ ಕಾರಣವಾಗಲಿದೆ. ಶಿಸ್ತುಬದ್ಧ ಜೀವನವೆಂದು ಅನ್ಯರಿಂದ ಶ್ಲಾಘಿಸಲ್ಪಡುವಿರಿ. ರಫ್ತು ಕೆಲಸಗಳಲ್ಲಿ ಪ್ರಗತಿಯನ್ನು ಹೊಂದಲು ಆಂಜನೇಯನನ್ನು ಆರಾಧಿಸಿ.
  • ಮೀನ
  • ಇಂದು ನಡೆಯುವ ಹಲವು ಸಂದರ್ಭಗಳಲ್ಲಿ ಮೂಕಪ್ರೇಕ್ಷಕರಂತೆ ಇರುವ ನಿಮ್ಮ ಗುಣದಿಂದಾಗಿ ಸಮಸ್ಯೆಗಳಿಂದ ತಪ್ಪಿಸಿಕೊಳ್ಳುವಿರಿ. ಹಳೆಯ ಭಾವಚಿತ್ರಗಳನ್ನು ನೋಡಿ ಆ ಕ್ಷಣಗಳನ್ನು ನೆನಪಿಸಿಕೊಳ್ಳುವಂತೆ ಆಗಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.