ADVERTISEMENT

ದಿನ ಭವಿಷ್ಯ: ಈ ರಾಶಿಯವರಿಗೆ ಧನಲಾಭವಾಗುವ ಸಾಧ್ಯತೆಗಳಿವೆ

ಸೋಮವಾರ – ಸೆಪ್ಟೆಂಬರ್‌ 09, 2024

ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
Published 8 ಸೆಪ್ಟೆಂಬರ್ 2024, 19:30 IST
Last Updated 8 ಸೆಪ್ಟೆಂಬರ್ 2024, 19:30 IST
<div class="paragraphs"><p>ದಿನ ಭವಿಷ್ಯ</p></div>

ದಿನ ಭವಿಷ್ಯ

   
ಮೇಷ
  • ಯಾವುದಾದರು ವಿಷಯದ ಬಗ್ಗೆ ಸಲಹೆಯನ್ನು ಎಷ್ಟು ಜನರಲ್ಲಿ ಕೇಳಿದರೂ ತೀರ್ಮಾನ ನಿಮ್ಮ ಸ್ವಂತದ್ದಾಗಿರಲಿ. ದಿನದ ಅಂತ್ಯದಲ್ಲಿ ಶುಭಸುದ್ದಿ ಕೇಳುವಿರಿ. ತೃಪ್ತಿಯ ಜೀವನ ನಡೆಸುವಿರಿ.
  • ವೃಷಭ
  • ಕಷ್ಟ ನಷ್ಟಗಳನ್ನೇ ಯೋಚಿಸುತ್ತ ಕೂರಬೇಡಿ. ಅವೆಲ್ಲವೂ ಸದ್ಯದ ಮಟ್ಟಿಗೆ ಕ್ಷಣಿಕವೇ ಆಗಿರುತ್ತದೆ. ತಪ್ಪಿದ್ದಲ್ಲಿ ಅದನ್ನು ಒಪ್ಪಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಿ. ಧನಲಾಭವಾಗುವ ಸಾಧ್ಯತೆಗಳಿವೆ.
  • ಮಿಥುನ
  • ಕೋಪವನ್ನು ಹೊಂದಿದ ಸಮಯದಲ್ಲಿ ಇತರರೊಂದಿಗೆ ಮಾತನಾಡುವುದಾಗಲಿ ಅಥವಾ ಏನಾದರು ಕೆಲಸ ಮಾಡುವುದನ್ನು ಮಾಡಬೇಡಿ. ವಂಶಕ್ಕೆ ಸಂಬಂಧಿಸಿದ ಆಸ್ತಿಯು ನಿಮಗೆ ಸಿಗಲಿದೆ.
  • ಕರ್ಕಾಟಕ
  • ಲಾಭ ಬರುವುದಿಲ್ಲ ಎಂದು ಅನಿಸಿದರೆ ಒಳ್ಳೆಯ ಕೆಲಸವಾದರೂ ನೀವು ಮಾಡುವುದಿಲ್ಲ. ಇಂದಿನ ಎಲ್ಲಾ ಕೆಲಸಗಳಲ್ಲಿಯೂ ವಿಶೇಷ ಆಸಕ್ತಿಯನ್ನು ತೋರುವಿರಿ.
  • ಸಿಂಹ
  • ಪ್ರೀತಿ ಹಾಗೂ ನಂಬಿಕೆಯ ಪದಗಳಿಗೆ ಅರ್ಥವಿಲ್ಲ ಎಂದು ಒಂದು ಕ್ಷಣ ಎನಿಸಿದರೂ ತಕ್ಷಣ ಆ ನಿರ್ಧಾರಕ್ಕೆ ಬರಬೇಡಿ. ಆರೋಗ್ಯದಲ್ಲಾಗುವ ಸಣ್ಣ ಪುಟ್ಟ ಏರುಪೇರಿನ ಬಗ್ಗೆ ಎಚ್ಚರಿಕೆ ವಹಿಸಿ.
  • ಕನ್ಯಾ
  • ಹೆಂಡತಿಯ ತವರು ಮನೆಯ ಕಡೆಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸುವ ಪ್ರಯತ್ನವನ್ನು ಮಾಡುವಿರಿ. ಪತ್ನಿಯ ಅವಶ್ಯಕತೆಗಳನ್ನು ಪೂರೈಸುವಲ್ಲಿ ಜಿಪುಣತನ ತೋರದಿರಿ.
  • ತುಲಾ
  • ಹಣಕಾಸಿನ ಅವಶ್ಯಕತೆಯನ್ನು ಪೂರೈಸುವ ಕಾರಣದಿಂದಾಗಿ ಅಧಿಕ ಸಮಯ ಕೆಲಸ ಮಾಡುವಿರಿ. ತಂದೆಯ ವಿಪರೀತ ಸ್ಥಿತಿಗಳಿಂದ ಅವರ ಕೆಲಸ ಗಳೆಲ್ಲವೂ ಹೆಗಲ ಮೇಲೆ ಬೀಳುವವು. ಭರವಸೆಯ ಮಾತುಗಳು ಸಿಗಬಹುದು.
  • ವೃಶ್ಚಿಕ
  • ಯಾವುದೇ ಕಾರಣಕ್ಕೂ ಸೋಲನ್ನು ಒಪ್ಪದೇ ಇರುವುದರಿಂದ ಕಾರ್ಯದಲ್ಲಿ ಜಯವನ್ನು ಸಾಧಿಸುವಿರಿ. ಏನೇ ಸಮಸ್ಯೆಗಳಿದ್ದರೂ ಅದನ್ನು ಮಾತಿನ ಮುಖಾಂತರ ಬಗೆಹರಿಸಿಕೊಳ್ಳುವಿರಿ.
  • ಧನು
  • ವೈಯಕ್ತಿಕ ಸಮಸ್ಯೆಗಳನ್ನು ಸಹೋದರನಲ್ಲಿ ಹೇಳಿಕೊಂಡಾಗ ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಸಹಾಯ ದೊರೆಯಲಿದೆ. ಕೋಪವನ್ನು ಸಂಬಂಧಪಡದ ವ್ಯಕ್ತಿಯ ಮೇಲೆ ತೋರಿಸುವುದು ಬೇಡ.
  • ಮಕರ
  • ಮನೆಯಲ್ಲಿನ ಆರ್ಥಿಕ ಸ್ಥಿತಿಗತಿಯನ್ನು ಗಮನಿಸಿದ ನೀವು ಪ್ರತಿಯೊಂದು ರುಪಾಯಿಯನ್ನು ಖರ್ಚು ಮಾಡುವಾಗಲೂ ಹಲವು ಬಾರಿ ಯೋಚಿಸುವಿರಿ. ಮಗನ ಪ್ರಬುದ್ಧತೆಯಿಂದ ಹೆಗಲ ಭಾರ ಕಡಿಮೆಯಾಗುತ್ತದೆ.
  • ಕುಂಭ
  • ನಿರ್ಧಾರಗಳನ್ನು ಎಲ್ಲರ ಮುಂದೆ ತಿಳಿಸುವ ಮುನ್ನ ಸಂಪೂರ್ಣವಾಗಿ ಯೋಚನೆ ಮಾಡಿ. ಮಾನಸಿಕ ಒತ್ತಡ ಕಡಿಮೆಯಾಗಬೇಕೆಂದರೆ ಜನರ ಜತೆಗೆ ಬೆರೆಯಬೇಕಾಗುತ್ತದೆ. ಅಣ್ಣ ತಮ್ಮಂದಿರ ಸಮಾಗಮವಾಗುವುದು.
  • ಮೀನ
  • ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರುವ ಘಟನೆಗಳು ನಡೆ ಯುವವು. ಸ್ವಂತ ವ್ಯವಹಾರಗಳು ಇದ್ದಲ್ಲಿ ಅವು ಲಾಭವನ್ನು ತಂದುಕೊಡುತ್ತವೆ. ಉತ್ಪಾದನಾ ಕೆಲಸಗಳು ಚುರುಕುಗತಿಯಿಂದ ಸಾಗಿ, ಲಾಭ ತರಲಿದೆ.
  • ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.