ಅಗರಬತ್ತಿಗೆ ದೋನಿ ರಾಯಭಾರಿ
ಜೆಡ್ಬ್ಲ್ಯಾಕ್ ಅಗರಬತ್ತಿ ಕಂಪೆನಿಗೆ ಕ್ರಿಕೆಟಿಗ ದೋನಿ ರಾಯಭಾರಿ ಆಗಿದ್ದಾರೆ.
ನಗರದ ಐಟಿಸಿ ವಿಂಡ್ಸರ್ ಹೋಟೆಲ್ನಲ್ಲಿ ಕಂಪೆನಿಯು ತನ್ನ 25ನೇ ವಾರ್ಷಿಕೋತ್ಸವ ಆಚರಣೆ ಜೊತೆಗೆ ‘ಪ್ರಾರ್ಥನಾ ಬದಲು ಸ್ವೀಕಾರ್’ ಎಂಬ ಅಭಿಯಾನಕ್ಕೆ ಚಾಲನೆ ನೀಡಿತು.
ಯುವಕರಲ್ಲಿ ಪ್ರಾರ್ಥನೆಯ ಮಹತ್ವ ಸಾರುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದ್ದು, ದೇಶದ ವಿವಿಧ ನಗರಗಳಲ್ಲಿ ಅಭಿಯಾನ ನಡೆಯಲಿದೆ.
‘ಮೈಸೂರು ದೀಪ್ ಪರ್ಫ್ಯೂಮರಿ ಹೌಸ್ 2011ರಲ್ಲಿ ಕರ್ನಾಟಕದ ಮಾರುಕಟ್ಟೆ ಪ್ರವೇಶಿಸಿತ್ತು. ವರ್ಷದಿಂದ ವರ್ಷಕ್ಕೆ ಆರ್ಥಿಕ ಪ್ರಗತಿ ಕಾಣುತ್ತಿದೆ’ ಎನ್ನುತ್ತಾರೆ ಜೆಡ್ ಬ್ಲ್ಯಾಕ್ನ ನಿರ್ದೇಶಕ ಅಂಕಿತ್ ಅಗರ್ವಾಲ್.
***
‘ಏರ್ಲೂಮ್’ ಪ್ರದರ್ಶನ
ಅನಘಾ ಮತ್ತು ನಾವಿಕ ಕ್ಲಾದಿಂಗ್ ಲೈಫ್ಸ್ಟೈಲ್ ಕಂಪೆನಿ ಜೂನ್16 ಮತ್ತು 17ರಂದು ‘ಏರ್ ಲೂಮ್’ ಪ್ರದರ್ಶನ ಆಯೋಜಿಸಿದೆ.
ಪ್ರದರ್ಶನದಲ್ಲಿ ನೇಯ್ಗೆ ಸೀರೆಗಳು, ಕುರ್ತಾಗಳು, ಬಗೆಬಗೆ ವಿನ್ಯಾಸದ ಪ್ಯಾಂಟ್ಗಳು ಇರುತ್ತವೆ.
ಪ್ರದರ್ಶನದ ಸಮಯ: ಬೆಳಿಗ್ಗೆ11 ರಿಂದ ಸಂಜೆ 7.
ಸ್ಥಳ– ರೇನ್ ಟ್ರೀ ಲೈಫ್ಸ್ಟೈಲ್, ನಂ 4, ಸ್ಯಾಂಕಿ ರಸ್ತೆ, ಐಟಿಸಿ ವಿಂಡ್ಸರ್ ಮ್ಯಾನರ್ ಎದುರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.