ADVERTISEMENT

ಅರುಶಿ,ಲಕ್ಷ್ಮಿನೃತ್ಯ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 19:30 IST
Last Updated 19 ಅಕ್ಟೋಬರ್ 2011, 19:30 IST

ದಿ ಟ್ಯಾಮರಿಂಡ್ ಟ್ರಿ ಮತ್ತು ಒಕ್ ಟ್ರಿ ಕಿಚನ್ಸ್: ಶುಕ್ರವಾರ ಕಾರ್ತಿಕ ದೀಪೋತ್ಸವದಲ್ಲಿ ಅರುಶಿ ಮುದ್ಗಲ್ ಅವರಿಂದ ಒಡಿಸ್ಸಿ ಮತ್ತು ಲಕ್ಷ್ಮಿ ಗೋಪಾಲಸ್ವಾಮಿ ಅವರಿಂದ ಭರತನಾಟ್ಯ.

ಎಳವೆಯಲ್ಲೇ ಮಾಧವಿ ಮುದ್ಗಲ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯದಲ್ಲಿ ಮೊದಲ ಹೆಜ್ಜೆ ಇಟ್ಟ ಅರುಶಿ ಈಗ ಉದಯೋನ್ಮುಖ ಕಲಾವಿದೆ. ಈಕೆ ಮಾಧವಿ ಅವರ ಸಹೋದರ ಸಂಬಂಧಿಯೂ ಹೌದು.

ಕನ್ನಡತಿ ಲಕ್ಷ್ಮಿ ಗೋಪಾಲಸ್ವಾಮಿ ಭರತನಾಟ್ಯ ಕ್ಷೇತ್ರದಲ್ಲಿ ಖ್ಯಾತ ಹೆಸರು. ಅಲ್ಲದೆ ಕನ್ನಡ, ತಮಿಳು, ಮಲಯಾಳಂನ ಧಾರಾವಾಹಿ, ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ.

ಸ್ಥಳ: ದಿ ಟ್ಯಾಮರಿಂಡ್ ಟ್ರಿ, ಆವಲಹಳ್ಳಿ, ಅಂಜನಾಪುರ. ಸಂಜೆ 7. ಟಿಕೆಟ್ ದರ 150 ರೂ. ಮಾಹಿತಿಗೆ: 98450 82329. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.