ಆಕಾಶವಾಣಿ ಕೇಂದ್ರವು ಸಂಗೀತ ಸಮ್ಮೇಳನ ಕಛೇರಿಗಳಿಗೆ ಪೂರಕವಾಗಿ ಪ್ರತಿವರ್ಷ ಸಂಗೀತ ತ್ರಿಮೂರ್ತಿಗಳು ಮತ್ತು ಇತರ ವಾಗ್ಗೇಯಕಾರರ ಸಂಗೀತೋತ್ಸವವನ್ನು ಆಯೋಜಿಸುತ್ತಿದೆ.
ಕರ್ನಾಟಕ ಸಂಗೀತ ಸಂಪ್ರದಾಯಕ್ಕೆ ವಿಶಿಷ್ಟವಾಗಿರುವ ವಾಗ್ಗೇಯಕಾರರ ಪರಿಕಲ್ಪನೆಯನ್ನು ಗೌರವಿಸುವ ಮತ್ತು ಅವರ ರಚನಾ ವೈವಿಧ್ಯಗಳನ್ನು ಸಂಗೀತಾಸಕ್ತರಿಗೆ ಪರಿಚಯಿಸುವ ಉದ್ದೇಶದೊಂದಿಗೆ ಈ ವಿಶೇಷ ಸಂಗೀತ ಉತ್ಸವ ಆಯೋಜಿಸುತ್ತಿದೆ.
ಬೆಂಗಳೂರು ಆಕಾಶವಾಣಿ ಕೇಂದ್ರ ಈ ಬಾರಿ ಸಂಗೀತೋತ್ಸವವನ್ನು ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ ಇದೇ ಏಪ್ರಿಲ್ 20, 21 ಮತ್ತು 22ರಂದು ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಪ್ರವೇಶ ಉಚಿತ.
ಶುಕ್ರವಾರ (ಏ.20)ಸಂತ ತ್ಯಾಗರಾಜರ ರಚನೆಗಳು; ಗಾಯತ್ರಿ ಶಂಕರನ್- ಗಾಯನ, ರಾಮದಾಸ್- ವಯೊಲಿನ್, ಬಿ.ನಟೇಶನ್-ಮೃದಂಗ,ಪಿ.ಎನ್.ರಾಮಚಂದ್ರನ್-ಘಟ.
ಪದ, ಜಾವಳಿ ಮತ್ತು ತಿಲ್ಲಾನಗಳು: ಮಲ್ಲಾಡಿ ಸೂರಿಬಾಬು- ಗಾಯನ, ಮಲ್ಲಾಡಿ ರವಿಕುಮಾರ್: ಸಹಗಾಯನ, ಎಂ.ಎಸ್.ಎನ್ ಮೂರ್ತಿ -ವಯೊಲಿನ್, ಡಿ.ಎಸ್.ಆರ್ ಮೂರ್ತಿ- ಮೃದಂಗ, ಪಿ.ವಿ.ರಮಣಮೂರ್ತಿ-ಘಟ.
ಶನಿವಾರ (ಏ.21) ಶ್ಯಾಮಾಶಾಸ್ತ್ರಿ, ಸುಬ್ಬರಾಯಶಾಸ್ತ್ರಿ ಮತ್ತು ಅಣ್ಣಾಸ್ವಾಮಿ ಶಾಸ್ತ್ರಿಯವರ ರಚನೆಗಳು. ಆಡೂರ್ ಪಿ.ಸುದರ್ಶನ- ಗಾಯನ, ಎಂ.ಆರ್.ದಯಾಕರ್ -ವಯೊಲಿನ್, ಕೊಟ್ಟಾಯಮ್ ಜಿ.ಸಂತೋಷ್ಕುಮಾರ್- ಮೃದಂಗ, ಮಂಜೂರ್ ಉನ್ನಿಕೃಷ್ಣನ್ - ಘಟ.
ತಮಿಳು ವಾಗ್ಗೇಯ ರಚನೆಗಳು: ತಿರುವಯ್ಯೊರು ಬಿ.ಜಯಶ್ರಿ- ಗಾಯನ, ಕಲ್ಯಾಣಿ ಶಂಕರ್- ವಯೊಲಿನ್, ಟ್ರಿಚ್ಚಿ ಎಸ್.ರಂಗರಾಜನ್- ಮೃದಂಗ, ಆಲತ್ತೂರ್ ಟಿ.ರಾಜಗಣೇಶ್- ಖಂಜಿರ.
ಭಾನುವಾರ ( ಏ.22) ಮುತ್ತುಸ್ವಾಮಿ ದೀಕ್ಷಿತರ ರಚನೆಗಳು: ಆರ್.ಚಂದ್ರಿಕಾ- ಗಾಯನ, ಸಿ.ಎನ್.ಚಂದ್ರಶೇಖರ್- ವಯೊಲಿನ್, ವಿ.ಎಸ್.ರಾಜಗೋಪಾಲ್- ಮೃದಂಗ, ಎಸ್.ಎನ್. ನಾರಾಯಣಮೂರ್ತಿ- ಘಟ.
ಕನ್ನಡ ಹರಿದಾಸರ ರಚನೆಗಳು; ಟಿ.ಎನ್.ಅಶೋಕ್- ಗಾಯನ, ಎನ್.ಸಂಪತ್- ವಯೊಲಿನ್, ಕೆ.ಎಸ್.ಗಣೇಶ್- ಮೃದಂಗ, ಬಿ.ಎನ್.ಚಂದ್ರಮೌಳಿ- ಖಂಜಿರ, ಟಿ.ಎನ್.ರಮೇಶ್- ಘಟ. ನಿತ್ಯ ಸಂಜೆ 5.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.