ADVERTISEMENT

ಇಂದು ‘ವ್ಯೂಹ’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಮೇ 2014, 19:30 IST
Last Updated 20 ಮೇ 2014, 19:30 IST
ಇಂದು ‘ವ್ಯೂಹ’ ಪ್ರದರ್ಶನ
ಇಂದು ‘ವ್ಯೂಹ’ ಪ್ರದರ್ಶನ   

ಶಶಿ ಕಲಾವಿದರು ಅರ್ಪಿಸುತ್ತಿರುವ ಹೊಸ ಪತ್ತೆದಾರಿ ನಾಟಕ ‘ವ್ಯೂಹ’, ಬುಧವಾರ (ಮೇ 21) ಸಂಜೆ 7ಕ್ಕೆ ಹನುಮಂತ ನಗರದಲ್ಲಿರುವ ಕೆ.ಎಚ್.ಕಲಾಸೌಧದಲ್ಲಿ ಪ್ರದರ್ಶನಗೊಳ್ಳಲಿದೆ. ಕಲಾವಿದ ಶ್ರೀನಾಥ್ ವಸಿಷ್ಠ ಅವರು ಈ ನಾಟಕದ ರಚನೆ ಮತ್ತು ನಿರ್ದೇಶನವನ್ನು ಮಾಡಿದ್ದಾರೆ.

ಹಣದ ಆಮಿಷಕ್ಕೆ ಸಿಲುಕಿ, ಹೆತ್ತವರನ್ನು ಕಡೆಗಣಿಸಿ, ಅಪರಿಚಿತರಿಗೆ ಆಶ್ರಯ ಕೊಟ್ಟು, ಅವರು ಹಾಕುವ ತಾಳಕ್ಕೆ ಕುಣಿಯುವ ಒಬ್ಬ ಯುವಕನ ಸುತ್ತ ಹೆಣೆದಿರುವ ಕಥೆ ಇದು. ಮಗನ ಪ್ರತಿ ನಡವಳಿಕೆಗಳನ್ನು ವಿರೋಧಿಸುವ ತಂದೆ ಹಾಗೂ ಸೋದರ ಮಾವನ ಕೊಲೆಯಾಗುತ್ತದೆ. ಈ ಎರಡು ಕೊಲೆಗಳ ಸುತ್ತ ನಾಟಕ ಸಾಗುತ್ತದೆ, ಯಾರು ಕೊಲೆ ಮಾಡಿದರು? ಹೇಗೆ ಪತ್ತೆಯಾಯಿತು? ಎನ್ನುವ ಕುತೂಹಲ ಮೂಡಿಸುವ ಕಥಾ ಹಂದರವನ್ನು ವ್ಯೂಹ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.