ADVERTISEMENT

ಓಣಂ ಸಡಗರ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ಎಂ ಎಸ್ ರಾಮಯ್ಯ ಹೋಟೆಲ್ ಮ್ಯಾನೇಜ್‌ಮೆಂಟ್ ಕಾಲೇಜು ಸಾಂಸ್ಕೃತಿಕ ವೈವಿಧ್ಯಕ್ಕೆ ಹೆಸರುವಾಸಿ. ಇಲ್ಲಿ ದೇಶದ ವಿವಿಧೆಡೆಯ ವಿದ್ಯಾರ್ಥಿಗಳು ಕಲಿಯುತ್ತಿರುವ ಕಾರಣ ನಾನಾ ಭಾಗಗಳ ಹಬ್ಬ ಹರಿದಿನಗಳನ್ನು ಆಚರಿಸುವ ಮೂಲಕ ಭಾವೈಕ್ಯತೆ ಮೆರೆಯಲಾಗುತ್ತದೆ.

ಈಚೆಗೆ ಕೇರಳದ ಸಾಂಪ್ರದಾಯಿಕ ಓಣಂ ಹಬ್ಬವನ್ನೂ ಇಲ್ಲಿ ಉಪನ್ಯಾಸಕ ಸುನೀಲ್ ಕೋಡ್ಕಣಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾರಿ ಸಂಭ್ರಮದಿಂದ ಆಚರಿಸಿದರು.

ಜತೆಗೆ ವಿಘ್ನವಿನಾಶಕ ಗಣೇಶನ ಮೂರ್ತಿಯನ್ನೂ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಕರ್ನಾಟಕ ಮತ್ತು ಕೇರಳದ ಘಮಘಮಿಸುವ ಅಡುಗೆಗಳು, ಸುಂದರವಾದ ಅಲಂಕಾರ, ರಂಗೋಲಿ ಮತ್ತು ಪೂಕಳಂ ಅಂದಿನ ಆಚರಣೆಗೆ ಮೆರುಗು ನೀಡಿದವು.

ಇದೇ ಸಂದರ್ಭದಲ್ಲಿ ನಡೆದ ಸಾಂಪ್ರದಾಯಿಕ ಉಡುಗೆ ಸ್ಪರ್ಧೆಯಲ್ಲಿ ಸುಚಿತ್ರಾ ಮತ್ತು ಕೈಲಾಸ್ ಸುತಾರ್‌ಗೆ  ಕ್ರಮವಾಗಿ ಮಿಸ್ ಮತ್ತು ಮಿಸ್ಟರ್ ಎಥ್ನಿಕ್ ಪ್ರಶಸ್ತಿ ದೊರೆಯಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.