ADVERTISEMENT

ಚೋಮನ ದುಡಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ಕೆ ವಿ ಸುಬ್ಬಣ್ಣ ಆಪ್ತರಂಗಮಂದಿರ: ಛಾಯಾಗ್ರಾಹಕ ದಿ. ಎಸ್. ರಾಮಚಂದ್ರ ಸ್ಮರಣೆಯ ಚಿತ್ರವರ್ಷ ಕಾರ್ಯಕ್ರಮದಲ್ಲಿ ಶನಿವಾರ ಸಂಜೆ 6 ಮತ್ತು ಭಾನುವಾರ ಮಧ್ಯಾಹ್ನ 3.30ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಚೋಮನ ದುಡಿ’ (ಮೂಲ ಕಥೆ: ಡಾ. ಶಿವರಾಮ ಕಾರಂತ. ನಿರ್ದೇಶನ: ಬಿ.ವಿ. ಕಾರಂತ. ಛಾಯಾಗ್ರಹಣ: ಎಸ್. ರಾಮಚಂದ್ರ. ತಾರಾಗಣದಲ್ಲಿ: ಎಂ.ವಿ. ವಾಸುದೇವರಾವ್, ಪದ್ಮಾ ಕುಮಟಾ, ಸುಂದರರಾಜ್ ಮತ್ತಿತರರು) ಚಿತ್ರ ಪ್ರದರ್ಶನ. ನಂತರ ಚಿತ್ರದ ಸಹಾಯಕ ನಿರ್ದೇಶಕರಾಗಿದ್ದ ಗಿರೀಶ್ ಕಾಸರವಳ್ಳಿ ಮತ್ತು ತಂಡದ

ಜತೆ ಸಂವಾದ.
ದಲಿತ ಸಮುದಾಯದ ಚೋಮನ ಯಾತನಾಮಯ ಬದುಕು, ಆತನ ಕುಟುಂಬದ ಮೇಲೆ ಸಮಾಜ ನಡೆಸುವ ಶೋಷಣೆ, ಆತನ ಈಡೇರದ ಕನಸುಗಳನ್ನು ಆಧರಿಸಿದೆ ಈ ಚಿತ್ರ.

ಸ್ಥಳ: ಕೆವಿಎಸ್ ಆಪ್ತರಂಗಮಂದಿರ, 151, 7ನೇ ಕ್ರಾಸ್, ಟೀಚರ್ಸ್ ಕಾಲೋನಿ, ದಯಾನಂದ ಸಾಗರ್ ಕಾಲೇಜು ಬಳಿ. ಕುಮಾರಸ್ವಾಮಿ ಬಡಾವಣೆ. ಮಾಹಿತಿಗೆ: ಬಿ.ಆರ್. ಗೋಪಿನಾಥ್ 92425 23523.

ನಾನು ಗಾಂಧಿ
ಚಿಲ್ಡ್ರನ್ಸ್ ಇಂಡಿಯಾ:  ಶನಿವಾರ ಮನೆ ಮುಂದೆ ಮಕ್ಕಳ ಸಿನಿಮಾ ಕಾರ್ಯಕ್ರಮದಲ್ಲಿ ‘ನಾನು ಗಾಂಧಿ’ ಕನ್ನಡ ಚಿತ್ರ ಪ್ರದರ್ಶನ.
ಸ್ಥಳ: ಕುವೆಂಪು ಬಯಲು ರಂಗಮಂದಿರ, ಬಿಟಿಎಂ 2ನೇ ಹಂತ. ಸಂಜೆ 6.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT