ADVERTISEMENT

ನೊಬೆಲ್ ರಸಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:30 IST
Last Updated 3 ಅಕ್ಟೋಬರ್ 2011, 19:30 IST

ಸ್ವೀಡನ್-ಭಾರತ ನೊಬೆಲ್ ಸ್ಮಾರಕ ರಸಪ್ರಶ್ನೆ ಸ್ಪರ್ಧೆಯ ಪ್ರಾದೇಶಿಕ ಸುತ್ತಿನಲ್ಲಿ ಪಿಇಎಸ್ ತಾಂತ್ರಿಕ ಕಾಲೇಜು ಎರಡನೇ ಹಾಗೂ ಕೆಎಲ್‌ಇ ತಂಡ ಮೂರನೇ ಸ್ಥಾನ ಗಳಿಸಿದವು. ಮೊದಲ ಬಹುಮಾನ ಕೇರಳದ ತ್ರಿಶ್ಶೂರ್‌ನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪಾಲಾಯಿತು.

ನೊಬೆಲ್ ಪ್ರಶಸ್ತಿಯ ಸಂಸ್ಥಾಪಕ ದಿ. ಆಲ್‌ಫ್ರೆಡ್ ನೊಬೆಲ್ ಸ್ಮರಣಾರ್ಥ ಸ್ವೀಡನ್-ಭಾರತಗಳು ಜತೆಗೂಡಿ ಈ ಸ್ಪರ್ಧೆ ನಡೆಸುತ್ತಿವೆ. ಇದರಲ್ಲಿ ನೊಬೆಲ್, ಅವರ ಕಾರ್ಯ ಕೈಗೊಂಡ ಕಾರ್ಯ, ನೊಬೆಲ್ ಪಾರಿತೋಷಕ, ಸುಧಾರಣೆಗಳು ಹಾಗೂ ಅನ್ವೇಷಣೆಗಳು, ಸ್ವೀಡನ್ ಹಾಗೂ ಅಲ್ಲಿನ ಉದ್ಯಮ ಸಂಸ್ಥೆಗಳು ಹಾಗೂ ಸಾಮಾನ್ಯ ಜ್ಞಾನ ಕುರಿತ ಪ್ರಶ್ನೆಗಳನ್ನು ಕೇಳಲಾಯಿತು.

ಕರ್ನಾಟಕ ಹಾಗೂ ಕೇರಳದ ವಿವಿಧ ಕಾಲೇಜುಗಳ 170ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದವು. ಆರಂಭಿಕ ಸುತ್ತಿನಲ್ಲಿ 25 ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು. ಈ ಸುತ್ತಿನಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಆರು ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾದವು.
 
ಕೌನ್‌ಬನೇಗಾ ಕರೋಡ್‌ಪತಿ, ಮಾಸ್ಟರ್‌ಮೈಂಡ್ ಇಂಡಿಯಾದಂಥ ಕಾರ್ಯಕ್ರಮಗಳ ಮುಖ್ಯ ಸಂಶೋಧಕರಾಗಿದ್ದ ಆದಿತ್ಯನಾಥ್ ಮುಬಾಯಿ ಸ್ಪರ್ಧೆ ನಡೆಸಿಕೊಟ್ಟರು.

ಪ್ರಶಸ್ತಿ ಗೆದ್ದ ಪಿಇಎಸ್ ತಂಡದ ಎಂ.ಎಸ್.ಆನಂದ್, ವರುಣ್ ಬಿ.ರಾವ್ ಹಾಗೂ ಜಿ.ಶ್ರೀರಾಮ್ ಅವರನ್ನು ಪಿಇಎಸ್ ಸಂಸ್ಥೆಗಳ ಸಿಇಒ ಪ್ರೊ. ಡಿ.ಜವಾಹರ್ ಅಭಿನಂದಿಸಿದ್ದಾರೆ. 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.