ADVERTISEMENT

ರಂಗಶಂಕರದಲ್ಲಿ ಸಂಜೆ ಹಾಡು...

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 19:30 IST
Last Updated 26 ಸೆಪ್ಟೆಂಬರ್ 2011, 19:30 IST

ರಂಗಶಂಕರ ಮತ್ತು ವಾಸ್ಪ್: ಮಂಗಳವಾರ, ಬುಧವಾರ ವಾಸ್ಪ್ ತಂಡದ ಮೂರನೇ ಕೊಡುಗೆ `ಸಂಜೆ ಹಾಡು~ (ರಚನೆ ಹಾಗೂ ನಿರ್ದೇಶನ: ರಾಜೇಂದ್ರ ಕಾರಂತ್. ಬೆಳಕು: ಮೊಹಮದ್ ಮುಸ್ತಫಾ. ಪ್ರಸಾದನ: ವಿಜಯ್ ಬೆಣಚ. ಸಂಗೀತ: ವಿಜಯ್ ಡಿ. ಜೆ. ಕಲಾವಿದರು: ರಾಜೇಂದ್ರ, ಸುನಿಲ್ ಕುಮಾರ್, ಕುಲದೀಪಕ್, ಸೌರವ್ ಲೋಕೇಶ್, ವಿನಯ್ ಶಾಸ್ತ್ರಿ, ಪ್ರಸಾದ್ ಜೈನ್).   

ಇದು ರಾಜೇಂದ್ರ ಕಾರಂತ್ 1989ರಲ್ಲಿ ಬರೆದ ಮೊದಲ ನಾಟಕ. 22 ವರ್ಷಗಳು ಕಳೆದರೂ ನಾಟಕದ ಕಥಾ ವಸ್ತು ಇಂದಿಗೂ ಪ್ರಸ್ತುತವಾಗಿದೆ. 

ಪ್ರತಿಯೊಂದೂ ವ್ಯಾಪಾರೀಕರಣ ಆಗುತ್ತಿರುವ ಇಂದಿನ ಜಗತ್ತಿನಲ್ಲಿ ಮಾನವೀಯ ಸಂಬಂಧಗಳೂ ವ್ಯಾಪಾರವಾಗುತ್ತಿವೆ. ಇಂದಿನ ಸಣ್ಣ ಕುಟುಂಬಗಳ ಪ್ರತ್ಯೇಕ ಇರುವಿಕೆಯ ಹಂಬಲದಲ್ಲಿ ಆಧುನಿಕ ತಂದೆ-ತಾಯಂದಿರು ಒಂದೊಂದೇ ಮಗುವನ್ನು ಅಪೇಕ್ಷಿಸುತ್ತಿರುವುದು ಆರ್ಥಿಕವಾಗಿ ಅನುಕೂಲಕರ. ಆದರೆ ವೃದ್ಧಾಪ್ಯದಲ್ಲಿ ಆ ಒಬ್ಬನೇ ಮಗ ಅಥವಾ ಮಗಳಿಂದ ದೂರ ಇರಬೇಕಾದ ಸ್ಥಿತಿ, ಒಂಟಿತನದ  ಹಂಬಲದಿಂದ ಹಾಡುವ ಹಾಡೇ  ಸಂಜೆಹಾಡು .

ತನ್ನ ಮಗನಲ್ಲಿ ಕಾಣಲು ಆಗದ್ದನ್ನು ಬೇರೆಲ್ಲೋ ಹುಡುಕುವ ಸದಾಶಿವವರಾವ್ ಕೇಳುವ ಪ್ರಶ್ನೆ  `ಬರೀ ರಕ್ತ ಸಂಬಂಧ ಮಾತ್ರ ಸಂಬಂಧವೇ? ಮಾನಸಿಕ ಸಂಬಂಧಗಳಿಗೆ ಬೆಲೆಯೇ ಇಲ್ಲವೇ?~. ಅದಕ್ಕೆ ಉತ್ತರ ಹುಡುಕುವ ಪ್ರಯತ್ನವೇ ಈ ನಾಟಕ. ಸ್ಥಳ: ರಂಗಶಂಕರ, ಜೆ ಪಿ ನಗರ 2ನೇ ಹಂತ. ಸಂಜೆ 7.30. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.