ADVERTISEMENT

ವರ್ಣದಲ್ಲಿ ಗಣೇಶಾವತಾರ

ರಮೇಶ ಕೆ
Published 29 ಆಗಸ್ಟ್ 2011, 19:30 IST
Last Updated 29 ಆಗಸ್ಟ್ 2011, 19:30 IST
ವರ್ಣದಲ್ಲಿ ಗಣೇಶಾವತಾರ
ವರ್ಣದಲ್ಲಿ ಗಣೇಶಾವತಾರ   

ಗಣೇಶ ಚತುರ್ಥಿ ಮತ್ತೆ ಬಂದಿದೆ. ನಗರದ ಮಾರುಕಟ್ಟೆಯಲ್ಲೆಗ ಎಲ್ಲಿ ನೋಡಿದರೂ ಗಣೇಶ, ಗೌರಿಯ ವಿಗ್ರಹಗಳೆ ಕಣ್ಣಿಗೆ ಕಾಣಿಸುತ್ತವೆ. ಆದರೆ ಇಲ್ಲೊಂದು ಸ್ಥಳದಲ್ಲಿ ದಶವತಾರ ರೂಪದ ಗಣೇಶ ವಿಗ್ರಹಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ.

ವರ್ಣ ಕರಕುಶಲ ಅಂಗಡಿ ಆಯೋಜಿಸಿರುವ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 750ಕ್ಕೂ ಹೆಚ್ಚು ವಿಧದ ಗಣೇಶನ ವಿಗ್ರಹಗಳು ಇವೆ. ಗಿಟಾರ್ ಹಿಡಿದು ಹಾಡುತ್ತಿರುವ, ತಬಲಾ ಬಾರಿಸುವ, ಪತ್ರಿಕೆ ಓದುವ ಹೀಗೆ ನೂರಾರು ಭಂಗಿಯ ಗಣೇಶ ಇಲ್ಲಿದ್ದಾನೆ.

ಈ ಪ್ರದರ್ಶನದ ಮತ್ತೊಂದು ವಿಶೇಷವೆಂದರೆ ಇಲ್ಲಿನ ಗಣೇಶನ ವಿಗ್ರಹಗಳು ನೀರಿಗೆ ವಿಸರ್ಜಿಸುವ ಗಣಪಗಳಲ್ಲ. ಬದಲಾಗಿ ಮನೆಯಲ್ಲಿ ಅಲಂಕಾರಕ್ಕಾಗಿ, ಪೂಜೆ ಮಾಡಲಿಕ್ಕಾಗಿ ಬಳಸಬಹುದಾಗಿದೆ.

ದೇವರ ಮನೆಯಲ್ಲಿ ತೂಗು ಹಾಕುವ ಹಿತ್ತಾಳೆ ಗಣಪನ ವಿಗ್ರಹಗಳು, ಗೋಡೆಗೆ ನೇತುಹಾಕುವ ಅಲಂಕಾರಿಕ ವಿಗ್ರಹಗಳು ಸಹ ಗೃಹಿಣಿಯರಿಗೆ ಮೆಚ್ಚುಗೆಯಾಗುತ್ತಿವೆ. 40 ರೂ.ನಿಂದ ಪ್ರಾರಂಭವಾಗಿ 6ಸಾವಿರ ರೂವರೆಗಿನ ಗಣಪನನ್ನು ಇಲ್ಲಿ ನೋಡಬಹುದು.

ಮುಂಬೈನ ಫೈಬರ್ ಕಲೆ, ಪುದುಚೇರಿಯ ಟೆರ‌್ರಾಕೋಟಾ, ಗುಜರಾತ್, ರಾಜಸ್ತಾನದ ರೆಸಿನ್ ಗಣೇಶ ಮೂರ್ತಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಪರಿಸರಸ್ನೇಹಿ ಗಣಪನ ವಿಗ್ರಹಗಳನ್ನು ಮಾತ್ರ ಇಲ್ಲಿ ಇಡಲಾಗಿದೆ ಹಾಗಾಗಿ ಗಣೇಶ ಪ್ರಿಯರು ಹೆಚ್ಚಾಗಿ ಬಂದು ನೆಚ್ಚಿನ ವಿಗ್ರಹಗಳನ್ನು ಕೊಳ್ಳುತ್ತಾರೆ ಎನ್ನುತ್ತಾರೆ ಮಾಲೀಕ ಅರುಣ್.
 
ಕಲಾವಿದರು ತಯಾರಿಸಿದ ಮಣ್ಣಿನ ವಿಗ್ರಹಗಳಿಗೆ ಪತ್ನಿ ಚೇತನಾ ಮತ್ತು ಮಗಳು ಅನುಷಾ ಬಣ್ಣ ಹಚ್ಚುತ್ತಾರೆ. ಅವುಗಳು ಇಲ್ಲಿ ಪ್ರದರ್ಶನಕ್ಕಿವೆ ಎನ್ನುತ್ತಾರೆ.

ಸ್ಥಳ: ಈಸ್ಟ್ ಪಾರ್ಕ್ ರಸ್ತೆ, 9ನೇ ಕ್ರಾಸ್ (ಪೋಸ್ಟ್ ಆಫೀಸ್ ಹಿಂಭಾಗ), ಮಲ್ಲೇಶ್ವರಂ. ಬೆಳಿಗ್ಗೆ 10ರಿಂದ ರಾತ್ರಿ 8. ಪ್ರದರ್ಶನ ಸೆ. 1ರ ವರೆಗೆ ಮಾತ್ರ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.