ADVERTISEMENT

ಶ್ರೀದೇವಿ ಬಿಚ್ಚಿಟ್ಟ ಸತ್ಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2017, 19:30 IST
Last Updated 5 ಜುಲೈ 2017, 19:30 IST
ಶ್ರೀದೇವಿ ಬಿಚ್ಚಿಟ್ಟ ಸತ್ಯ
ಶ್ರೀದೇವಿ ಬಿಚ್ಚಿಟ್ಟ ಸತ್ಯ   

ಪಂಚಭಾಷಾ ನಟಿ ಶ್ರೀದೇವಿ ತಮ್ಮ ಅಭಿನಯ ಹಾಗೂ ಸೌಂದರ್ಯದಿಂದ ಬಾಲಿವುಡ್ ಸಿನಿಮಾರಂಗದಲ್ಲಿ ತನ್ನ ಛಾಪು ಮೂಡಿಸಿದವರು. 80ರ ದಶಕದಿಂದ, ಇತ್ತೀಚಿಗಿನ ಮಾಮ್ ಸಿನಿಮಾದವರೆಗೂ ಅದ್ಭುತ ನಟನೆಯಿಂದ ಪ್ರೇಕ್ಷಕರ ಮನಗೆದ್ದವರು.ಚಿತ್ರರಂಗದಲ್ಲಿ ತಂತ್ರಜ್ಞಾನಗಳು ಅಷ್ಟಾಗಿ ಬಳಕೆಯಲ್ಲಿಲ್ಲದ ಕಾಲದಲ್ಲಿಯೇ ಅಮೋಘ ಅಭಿನಯ ನೀಡಿರುವ ಶ್ರೀದೇವಿ ತೆರೆಯ ಹಿಂದೆ ಏನಾದರೂ  ಸಮಸ್ಯೆಗಳನ್ನು ಅನುಭವಿಸಿದ್ದರೇ?

ಮಾಮ್‌ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಅವರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ...

'ಇಂದಿನ ನಟಿಯರಿಗೆ ಬಟ್ಟೆ ಬದಲಾಯಿಸುವ ವಾಹನ (ಕಾರಾವನ್‌) ಒಂದು ವರ. ಆದರೆ ನಾನು ಚಿತ್ರೀಕರಣದ ಸಂದರ್ಭದಲ್ಲಿ ಮರಗಳ ಹಿಂದೆ, ಬಸ್ಸುಗಳ ಮರೆಯಲ್ಲಿ ಬದಲಾಯಿಸಬೇಕಾಗಿತ್ತು. ಎಷ್ಟೇ ಮುಜುಗರವಾದರೂ ಅದು ಅನಿವಾರ್ಯವಾಗಿತ್ತು. ಕಾಯಕವೇ ಕೈಲಾಸ ಎಂಬ ನಿಷ್ಠೆ ಒಂದೆಡೆ, ಆಯಾ ದಿನದ ಚಿತ್ರೀಕರಣ ಮುಗಿಯಬೇಕು ಎಂಬ ಧಾವಂತ ಇನ್ನೊಂದೆಡೆ. ಈಗಿನ ನಟಿಯರಿಗೆ ಚಿತ್ರೀಕರಣದ ವೇಳೆ ಯಾವುದೇ ಸಮಸ್ಯೆಯಾಗಲು ಅವಕಾಶವೇ ಇಲ್ಲ.

ADVERTISEMENT

ನಾವು ಎದುರಿಸಿದ ಸಮಸ್ಯೆಗಳನ್ನು ನೆನಪಿಸಕೊಂಡರೂ ಈಗ ಮೈ ಜುಮ್ಮೆನ್ನುತ್ತದೆ. ಶೌಚಾಲಯದ ಸಮಸ್ಯೆಯನ್ನು ಹೇಳಲೂ ಆಗದೆ ಬಿಡಲೂ ಆಗದೆ ಒದ್ದಾಡಬೇಕಿತ್ತು. ಶೌಚಾಲಯವಿರದ ಕಾರಣ ನೀರೇ ಕುಡಿಯುತ್ತಿರಲಿಲ್ಲ. ನಿಜವಾದ ಮಳೆಯಲ್ಲಿ ಚಿತ್ರೀಕರಣ ನಡೆದರೂ ನಾವು ತುಟಿ ಪಿಟಕ್ಕೆನ್ನದೆ ಪಾಲ್ಗೊಳ್ಳುತ್ತಿದ್ದೆವು. ಇದರಿಂದಾಗಿ ಆರೋಗ್ಯ ಹಾಳಾಗಿದ್ದೂ ಇದೆ’ ಎಂದು ಶ್ರೀದೇವಿ ಹೇಳುವಾಗ ನೆರೆದವರ ಕಣ್ಣು ಮಂಜಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.