ಕಲ್ಯಾಣಪುರಿ ಎಂದೇ ಹೆಸರುವಾಸಿಯಾದ ಮಹಾಲಕ್ಷ್ಮೀಪುರಂನ ಮರಿ ತಿರುಪತಿಯ ಶ್ರೀನಿವಾಸ ದೇವರ ವಿಜೃಂಭಣೆಯ ಬ್ರಹ್ಮರಥೋತ್ಸವ ಶನಿವಾರ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದೆ.
ಉತ್ಸವದ ಅಂಗವಾಗಿ ಶ್ರೀನಿವಾಸ ಹಾಗೂ ಅಮ್ಮನವರಿಗೆ ವಜ್ರಕವಚಧಾರಣೆ ಮತ್ತು ಕಣ್ಮನ ತಣಿಸುವಂತೆ ಹೂವಿನ ಅಲಂಕಾರ ಮಾಡಲಾಗುತ್ತದೆ. ಬೆಳಗಿನಿಂದಲೇ ಅನೇಕ ಪೂಜಾ ಕೈಂಕರ್ಯ, ಭಕ್ತರಿಂದ ನಿರಂತರ ಭಜನೆ ನಡೆಯುತ್ತದೆ.
ರಥೋತ್ಸವದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಇರುತ್ತದೆ. ಸಂಜೆ 6.30ಕ್ಕೆ ಶ್ರೀನಿವಾಸ ದೇವರಿಗೆ ಧೂಳೋತ್ಸವ ಹಾಗೂ ಊಂಜಲ್ ಸೇವೆ ನಡೆಯುತ್ತದೆ.
ಭಾನುವಾರ ಬೆಳಿಗ್ಗೆ 9ಕ್ಕೆ ಮಹಾಭಿಷೇಕ, ಅವಭೃತ, ವಸಂತೋತ್ಸವ, ಮಹಾಮಂಗಳಾರತಿ. ಸಂಜೆ 6.30ಕ್ಕೆ ವೈರಮುಡಿ ಉತ್ಸವ ನಡೆಸಲಾಗುತ್ತದೆ.
ಸೋಮವಾರ ಬೆಳಿಗ್ಗೆ 10.30ಕ್ಕೆ ದ್ವಾದಶ ತಿರುವಾರಾಧನೆ, ಮಹಾಮಂಗಳಾರತಿ ಇರುತ್ತದೆ. ಸಂಜೆ 6.30ಕ್ಕೆ ಶಯನೋತ್ಸವ ನಡೆಯಲಿದೆ ಎಂದು ಸಮಿತಿ ಕಾರ್ಯದರ್ಶಿ ಸಿ.ಡಿ. ಕೆಂಪರಾಜ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.