ADVERTISEMENT

ಸುಸ್ವರ ಉತ್ಸವದಲ್ಲಿ...

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 19:30 IST
Last Updated 28 ಅಕ್ಟೋಬರ್ 2011, 19:30 IST

ಸುಸ್ವರಲಯ ಪ್ರೌಢ ಸಂಗೀತ ಕಲಾಶಾಲೆ: ಶನಿವಾರ ಸಂಜೆ 4.30ಕ್ಕೆ ವಿದ್ವಾನ್ ಜಿ. ರಾಜ್ ನಾರಾಯಣ್ ಅವರಿಂದ ಸಂಗೀತೋತ್ಸವ ಉದ್ಘಾಟನೆ. ವಿದ್ವಾನ್ ಎಂ. ವಾಸುದೇವರಾವ್ ಅವರಿಂದ ದಿ. ಪಾಲ್ಘಾಟ್ ಟಿ. ಎಸ್. ಮಣಿ ಅಯ್ಯರ್ ಅವರ ಜನ್ಮ ಶತಮಾನೋತ್ಸವದ ನೆನಪಿನಲ್ಲಿ `ವಾರ್ಷಿಕ ದಿನಚರಿ~ ಲೋಕಾರ್ಪಣೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಅವರಿಂದ ಖ್ಯಾತ ಮೃದಂಗ ವಿದ್ವಾನ್ ಬಿ.ಕೆ. ಚಂದ್ರಮೌಳಿ ಅವರಿಗೆ `ಸ್ವರಲಯ ಶೃಂಗ~ ಬಿರುದು ಪ್ರದಾನ.

ಸಂಜೆ 6ರಿಂದ ವಿದುಷಿ ಪುಷ್ಪಾ ಕಾಶೀನಾಥ್ ಅವರಿಂದ ವೀಣೆ, ಮೃದಂಗ: ವಿ. ಕೃಷ್ಣ, ಘಟ: ಟಿ.ಬಿ. ಶಿವಶಂಕರ್.

ಭಾನುವಾರ ಬೆಳಿಗ್ಗೆ 9.30ರಿಂದ ಲಯ ವಿನ್ಯಾಸ. ಭಾಗವಹಿಸುವವರು: ಬಿ. ಎಸ್. ಪ್ರಣವ್, ಜ್ಯೋತ್ನಾ ಹೆಬ್ಬಾರ್, ಎಚ್. ಎಸ್. ಅನಿರುದ್ಧ, ಲಲಿತ್ ಶ್ರೀಕರ್, ಜೆ. ಸುವ್ರತ, ಡಿ. ಶ್ರೀನಿಕೇತನ್.

ಬೆಳಿಗ್ಗೆ 10ರಿಂದ ಕರ್ನಾಟಕ ಸಂಗೀತದಲ್ಲಿ ಸಂಪ್ರದಾಯದ ಪಾತ್ರ ಮತ್ತು ಮಹತ್ವ ಕುರಿತು ವಿದುಷಿ ಆರ್. ಎ. ರಮಾಮಣಿ ಅವರಿಂದ ಪ್ರಾತ್ಯಕ್ಷಿಕೆ.

11ರಿಂದ ಲಯ ವಿನ್ಯಾಸ. ಭಾಗವಹಿಸುವವರು: ಎಸ್.ಡಿ. ನಿಪುಣ್, ಜ್ಯೋತಿರಾದಿತ್ಯ, ಆಶಿಶ್ ಗುರ್ಜಾರ್, ತೇಜಸ್ ಶ್ರೀವತ್ಸ್ ಮನಮೋಹನ್, ಕೆ. ಎಂ. ಲಿಖಿತ್, ಕೆ. ಯಶ್ವಂತ್, ಬಿ.ಜೆ. ಶ್ರೀನಿವಾಸ್.

11.20ರಿಂದ ಪಾಲ್ಘಾಟ್ ಟಿ.ಎಸ್. ಮಣಿ ಅಯ್ಯರ್ ಅವರ ನುಡಿಸಾಣಿಕೆಯ ಸೂಕ್ಷ್ಮತೆ ಕುರಿತು ವಿದ್ವಾನ್ ತ್ರಿಷೂರ್ ಸಿ. ನರೇಂದ್ರನ್ ಅವರಿಂದ ಪ್ರಾತ್ಯಕ್ಷಿಕೆ.

ಸಂಜೆ 4.15ರಿಂದ ಲಯ ವಿನ್ಯಾಸ. ಭಾಗವಹಿಸುವವರು: ಎನ್. ಸುಧಾಕರ್, ಆರ್. ವಿಜಯ ನಾಗ್, ಅಶ್ವಿನ್ ಪೋತದಾರ್, ಬಿ. ಎನ್. ನರಸಿಂಹಮೂರ್ತಿ ರಾವ್, ಪ್ರಣವ್ ಸ್ವರೂಪ್, ಎಂ. ರಾಜಪ್ಪ.

ಸಂಜೆ 4.40ರಿಂದ ವರಲಕ್ಷ್ಮಿ ಮತ್ತು ಎಂ.ಪಿ. ಕೃತಿಕ್ ಕೌಶಿಕ್ ಅವರಿಂದ ದ್ವಂದ್ವ ಪಿಟೀಲು. ಮೃದಂಗ: ಅಶ್ವಿನ್ ನಾಯರ್. ಘಟ: ಬಿ. ಎಸ್. ರಘುನಂದನ್.

ಸಂಜೆ 6ರಿಂದ ತಾಳವಾದ್ಯ ಕಛೇರಿ. ಕೊಳಲು: ವಿದ್ವಾನ್ ಮೈಸೂರು ಎ. ಚಂದನ್ ಕುಮಾರ್. ಪಿಟೀಲು: ವಿದ್ವಾನ್ ಬಿ.ಯು. ಗಣೇಶ್ ಪ್ರಸಾದ್. ದ್ವಂದ್ವ ಮೃದಂಗ: ವಿದ್ವಾನ್ ತ್ರಿಷೂರ್ ಸಿ. ನರೇಂದ್ರನ್ ಮತ್ತು ವಿದ್ವಾನ್ ಬಿ. ಆರ್. ಶ್ರೀನಿವಾಸ್.

ಸೋಮವಾರ ಸಂಜೆ 5.30ರಿಂದ ಗಾಯನ: ಡಾ. ಆರ್. ಎನ್. ಶ್ರೀಲತಾ. ಪಿಟೀಲು: ವಿದುಷಿ ನಳಿನಾ ಮೋಹನ್. ಮೃದಂಗ: ವಿದ್ವಾನ್ ರೇಣುಕಾ ಪ್ರಸಾದ್. ಘಟ: ವಿದ್ವಾಸ್ ಎಸ್. ಶ್ರೀಶೈಲ.
ಸ್ಥಳ: ಶ್ರೀರಾಮಲಲಿತ ಕಲಾ ಮಂದಿರ, ದೇವಗಿರಿ ಸಭಾಂಗಣ, 9ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.